![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Mar 17, 2020, 3:00 AM IST
ಮೈಸೂರು: ನಗರ ವ್ಯಾಪ್ತಿಯ ರಸ್ತೆಗಳಲ್ಲಿ ವಾಹನಗಳು ಸಂಚರಿಸುವ ವೇಗದ ಮಿತಿಯನ್ನು ನಿಗದಿಪಡಿಸಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅಧಿಸೂಚನೆ ಹೊರಡಿಸಿದ್ದಾರೆ. ಮೈಸೂರು ನಗರಕ್ಕೆ ಪ್ರವೇಶ ಕಲ್ಪಿಸುವ ರಸ್ತೆಗಳಲ್ಲಿ ಹಾಗೂ ನಗರದ ಒಳಗಿನ ರಸ್ತೆಗಳಲ್ಲಿ ವಾಹನಗಳು ಅತಿವೇಗದಿಂದ ಸಂಚರಿಸುತ್ತಿದ್ದು,
ಇದರಿಂದ ಅನೇಕ ಸಂದರ್ಭಗಳಲ್ಲಿ ರಸ್ತೆ ಅಪಘಾತಗಳು ಸಹ ಸಂಭವಿಸಿ ಸಾರ್ವಜನಿಕರ ಸುರಕ್ಷತೆಗೆ ಮತ್ತು ಸುಗಮ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ಆದ್ದರಿಂದ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ವಿವಿಧ ರಸ್ತೆಗಳಲ್ಲಿ ಮತ್ತು ನಗರದ ಒಳಗಿರುವ ರಸ್ತೆಗಳಲ್ಲಿನ ವಾಹನ ಸಂಚಾರದ ಸಾಂದ್ರತೆ ಮತ್ತು ರಸ್ತೆಗಳ ಭೌಗೋಳಿಕ ಅಂಶಗಳಿಗೆ ಅನುಗುಣವಾಗಿ ವಾಹನಗಳು ಸಂಚರಿಸುವ ವೇಗಕ್ಕೆ ಮಿತಿ ನಿಗಧಿಪಡಿಸಲಾಗಿದೆ.
ನಗರದ ಹೊರಗೆ- ಒಳಗೆ ವೇಗ ಮಿತಿ
– ಹೊರ ವರ್ತುಲ ರಸ್ತೆಯಿಂದ ಒಳಭಾಗದ ರಸ್ತೆಗಳಲ್ಲಿ ಕಾರು (ಎಲ್ಎಂ)40 ಕಿ.ಮೀ, ಬಸ್ ಮತ್ತು ದ್ವಿ ಚಕ್ರ ವಾಹನ 30 ಕಿ.ಮೀ ,ಆಟೋ ರಿಕ್ಷಾ ಮತ್ತು ಸರಕು ಸಾಗಣೆ ವಾಹನ 30 ಕಿ.ಮೀ, ಟ್ರ್ಯಾಕ್ಟರ್- 20 ಕಿ.ಮೀ.
– ಹೊರ ವರ್ತುಲ ರಸ್ತೆಯಲ್ಲಿ ಕಾರು (ಎಲ್ಎಂ)60 ಕಿ.ಮೀ, ಬಸ್ ಮತ್ತು ದ್ವಿ ಚಕ್ರ ವಾಹನ 50 ಕಿ.ಮೀ, ಆಟೋ ರಿಕ್ಷಾ ಮತ್ತು ಸರಕು ಸಾಗಣೆ ವಾಹನ 40 ಕಿ.ಮೀ, ಟ್ರ್ಯಾಕ್ಟರ್ 20 ಕಿ.ಮೀ.
– ನಗರದ ಹೊರ ವರ್ತುಲ ರಸ್ತೆಗೆ ಹೊರ ಊರುಗಳಿಂದ ಸಂಪರ್ಕ ಕಲ್ಪಿಸುವ ಮೈಸೂರು – ಹುಣಸೂರು ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ, ಗದ್ದಿಗೆ ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ, ತಿ. ನರಸೀಪುರ ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ, ಬನ್ನೂರು ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ, ಮಹದೇವಪುರ ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ ಹಾಗೂ ಕೆಆರ್ಎಸ್ ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ- ಕಾರು (ಎಲ್.ಎಂ.) 40 ಕಿ.ಮೀ, ಬಸ್ ಮತ್ತು ದ್ವಿ ಚಕ್ರ ವಾಹನ 30 ಕಿ.ಮೀ, ಆಟೋ ರಿಕ್ಷಾ ಮತ್ತು ಎಲ್ಲಾ ಮಾದರಿಯ ಸರಕು ಸಾಗಣೆ ವಾಹನ 30 ಕಿ.ಮೀ, ಟ್ರ್ಯಾಕ್ಟರ್ 20 ಕಿ.ಮೀ.
– ಮೈಸೂರು ನಗರದ ಹೊರ ವರ್ತುಲ ರಸ್ತೆಗೆ ಹೊರ ಊರುಗಳಿಂದ ಸಂಪರ್ಕ ಕಲ್ಪಿಸುವ ಮೈಸೂರು-ಬೆಂಗಳೂರು ರಸ್ತೆಯಲ್ಲಿ ನಗರ ಸರಹದ್ದು ಪ್ರಾರಂಭದಿಂದ ಹೊರ ವರ್ತುಲ ರಸ್ತೆವರೆಗೆ ಕಾರು 60 ಕಿ.ಮೀ, ಬಸ್ ಮತ್ತು ದ್ವಿಚಕ್ರ ವಾಹನ 50 ಕಿ.ಮೀ, ಆಟೋ ರಿಕ್ಷಾ ಮತ್ತು ಎಲ್ಲಾ ಮಾದರಿಯ ಸರಕು ಸಾಗಣೆ ವಾಹನ 40 ಕಿ.ಮೀ ಹಾಗೂ ಟ್ರ್ಯಾಕ್ಟರ್ 30 ಕಿ.ಮೀ ವೇಗದ ಮಿತಿ ನಿಗದಿಪಡಿಸಲಾಗಿದೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.