![1-chali](https://www.udayavani.com/wp-content/uploads/2024/12/1-chali-415x279.jpg)
ಅಲೆಮಾರಿ ಮಕ್ಕಳಿಗೊಂದು ಟೆಂಟ್ ಶಾಲೆ
Team Udayavani, Nov 8, 2021, 5:52 PM IST
![29tentschool](https://www.udayavani.com/wp-content/uploads/2021/11/29tentschool-620x284.jpg)
ಸಿಂಧನೂರು: ನಗರದ ಸುಕಾಲಪೇಟೆಯಲ್ಲಿ ಅಲೆಮಾರಿ ಕುಟುಂಬಗಳು ನೆಲೆಸಿರುವ ಜಾಗದಲ್ಲಿ ಕಳೆದ 6 ತಿಂಗಳ ಹಿಂದೆ ಟೆಂಟ್ ಶಾಲೆ ತೆರೆಯಲಾಗಿದೆ.
ಸಮಾಜ ಸೇವಕ ಸುರೇಶ ಹಚ್ಚೊಳ್ಳಿ, ನಾಗರಾಜ ಬಾದರ್ಲಿ, ಶಂಬಣ್ಣ ಸುಕಾಲಪೇಟೆ, ನಾಗರಾಜ್ ಕವಿತಾಳ ಅವರನ್ನೊಳಗೊಂಡ ಸ್ನೇಹಿತರ ಬಳಗ, ಶಿಕ್ಷಕ ಪ್ರಶಾಂತ್ ದಾನಪ್ಪ ಅವರ ನೆರವಿನೊಂದಿಗೆ ಇಲ್ಲೊಂದು ಶಾಲೆ ತೆರೆಯುವಲ್ಲಿ ಯಶಸ್ಸಿಯಾಗಿದೆ. ಪಾಲಕರು ಕೂಡ ಕೈಜೋಡಿಸಿ ಟೆಂಟ್ ಹಾಕಿಕೊಟ್ಟಿದ್ದು, ಅಲ್ಲಿ ನೆಲಹಾಸು (ಬಂಡೆ) ಹಾಕಿಸಿ ಅಲೆಮಾರಿ ಮಕ್ಕಳ ಶಾಲೆ ಎಂಬ ಫಲಕ ಹಾಕಲಾಗಿದೆ. ನಿತ್ಯ ಸಂಜೆ 5 ಗಂಟೆಯಿಂದ 7 ಗಂಟೆ ತನಕ 53 ಮಕ್ಕಳಿಗೆ ಕಲಿಕೆ ನಡೆಯುತ್ತಿದ್ದು, ಸ್ವಯಂ ಸೇವಕರನ್ನು ಪಾಠಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಮುಖ್ಯವಾಹಿನಿಗೆ ತರುವ ಕನಸು
80ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿದ್ದರೂ ಇಲ್ಲಿನ ಒಬ್ಬ ವಿದ್ಯಾರ್ಥಿ ಮಾತ್ರ ಪಿಯುಸಿ ದಾಟಿದ್ದಾನೆ. 4-5ನೇ ತರಗತಿಗೆ ಕಾಲಿಟ್ಟರೂ ಇಲ್ಲಿನ ಮಕ್ಕಳಿಗೆ ಕನ್ನಡ ಓದಲು ಬರುತ್ತಿಲ್ಲ. ಕಲಿಕೆಯಲ್ಲಿ ಹಿಂದುಳಿದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಈ ಟೆಂಟ್ ಗೆ ಕರೆ ತರಲಾಗುತ್ತಿದೆ. ಪಾಲಕರ ಮನವೊಲಿಸಿದ ಪರಿಣಾಮ ಅವರು ಕೂಡ ಸಾಥ್ ನೀಡುತ್ತಿದ್ದು, ಟೆಂಟ್ನಲ್ಲಿ ಅಕ್ಷರಾಭ್ಯಾಸ ಮುಂದುವರಿದಿದೆ.
ಇದನ್ನೂ ಓದಿ: ಶಾಸಕ ಬಾಲಚಂದ್ರ ಜಾರಕಿಹೊಳಿ ಅಪರೂಪದ ರಾಜಕಾರಣಿ: ಶ್ರೀಶೈಲ ಭಗವತ್ಪಾದರು
ಬುಡಕಟ್ಟು, ಅಲೆಮಾರಿ ಕುಟುಂಬದ ಮಕ್ಕಳು ಶಿಕ್ಷಣದ ಮೂಲಕವೇ ಮುಂದೆ ಬರಬೇಕು. ಅವರಲ್ಲಿ ಜಾಗೃತಿ ಮೂಡಿಸಿ ಅಕ್ಷರ ಕಲಿಕೆಗೆ ತರುವ ಉದ್ದೇಶದಿಂದ ಟೆಂಟ್ ನಿರ್ಮಿಸಿ, ಶಾಲೆ ತೆರೆಯಲು ಕೈ ಜೋಡಿಸಿದ್ದು, ಹಲವರ ಸಹಕಾರವಿದೆ. -ಸುರೇಶ ಹಚ್ಚೊಳ್ಳಿ, ಸುಕಾಲಪೇಟೆ
ನಾನಾ ಕಡೆಗಳಲ್ಲಿ ಈ ರೀತಿ ಟೆಂಟ್ ಶಾಲೆಗಳನ್ನು ತೆಗೆದು ಅಲೆಮಾರಿ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುತ್ತಿದ್ದು, ಸಿಂಧನೂರಿನಲ್ಲೂ ಯುವ ಪಡೆಯ ನೆರವಿನಿಂದ ಇದು ಸಾಧ್ಯವಾಗಿದೆ. -ಪ್ರಶಾಂತ ದಾನಪ್ಪ, ಅಲೆಮಾರಿ ಸಂಜೆ ಶಾಲೆ ನಿರ್ದೇಶಕರು, ಮಸ್ಕಿ
-ಯಮನಪ್ಪ ಪವಾರ
ಟಾಪ್ ನ್ಯೂಸ್
![1-chali](https://www.udayavani.com/wp-content/uploads/2024/12/1-chali-415x279.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Demand to lift restrictions on rice transport from the Karnataka to Telangana](https://www.udayavani.com/wp-content/uploads/2024/12/raichur-150x87.jpg)
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
![Sindhanur: ಲಾರಿ ಪಲ್ಟಿ… ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ](https://www.udayavani.com/wp-content/uploads/2024/12/sindhnur-150x90.jpg)
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
![Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್](https://www.udayavani.com/wp-content/uploads/2024/12/raic-150x86.jpg)
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
![ಬೇಡಿಕೆ ಕುಸಿತ: ಆರ್ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ](https://www.udayavani.com/wp-content/uploads/2024/12/powet-150x94.jpg)
Raichur; ಬೇಡಿಕೆ ಕುಸಿತ: ಆರ್ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
![8-sirwar](https://www.udayavani.com/wp-content/uploads/2024/11/8-sirwar-150x90.jpg)
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![1-chali](https://www.udayavani.com/wp-content/uploads/2024/12/1-chali-150x101.jpg)
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
![Hemmadi-Sevantige](https://www.udayavani.com/wp-content/uploads/2024/12/Hemmadi-Sevantige-150x90.jpg)
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
![rain-dk](https://www.udayavani.com/wp-content/uploads/2024/12/rain-dk-150x84.jpg)
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
![Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?](https://www.udayavani.com/wp-content/uploads/2024/12/Forest_1-150x80.jpg)
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
![1-puri](https://www.udayavani.com/wp-content/uploads/2024/12/1-puri-1-150x102.jpg)
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.