
ವಿದ್ಯುತ್ ಪರಿವರ್ತಕ ಸ್ಥಳಾಂತರಿಸಲು ಆಗ್ರಹ
ಟಿಸಿ ಮರೆಯಲ್ಲೇ ಮೂತ್ರ ವಿಸರ್ಜನೆ ಎಚ್ಚರ ತಪ್ಪಿದರೆ ಅಪಾಯ ಖಚಿತ
Team Udayavani, Feb 7, 2020, 5:07 PM IST

ಬಳಗಾನೂರು: ಪಟ್ಟಣದ ಪೊಲೀಸ್ ಠಾಣೆ ಎದುರಿಗೆ ಇರುವ ಮಸ್ಕಿ ಮುಖ್ಯ ರಸ್ತೆಯಲ್ಲಿನ ಜೋಡಿ ವಿದ್ಯುತ್ ಪರಿವರ್ತಕಗಳಿದ್ದು, ಇದರ ಮರೆಯಲ್ಲೇ ಪುರುಷರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಅಪಾಯ ಸಂಭವಿಸುವ ಮುನ್ನ ಇವುಗಳನ್ನು ಸ್ಥಳಾಂತರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆ ಎದುರಿಗೆ ಬಸ್ ತಂಗುದಾಣವಿದ್ದು, ಇದರ ಪಕ್ಕದೇ ವಿದ್ಯುತ್ ಜೋಡಿ ವಿದ್ಯುತ್ ಪರಿವರ್ತಕಗಳಿವೆ. ಈ ಭಾಗದಲ್ಲಿ ಮೂತ್ರಾಲಯ ಇಲ್ಲದ್ದರಿಂದ ಪುರುಷರು ವಿದ್ಯುತ್ ಪರಿವರ್ತಕ ಮರೆಯಲ್ಲಿಯೇ ಮೂತ್ರ ವಿಸರ್ಜಿಸುತ್ತಾರೆ. ಇಲ್ಲಿ ಸುತ್ತಲಿನ ನಿವಾಸಿಗಳು, ಅಂಗಡಿಕಾರರು ತ್ಯಾಜ್ಯ ಎಸೆಯುತ್ತಿದ್ದು ರಸ್ತೆ ತಿಪ್ಪೆಗುಂಡಿಯಂತಾಗಿದೆ. ಪುರುಷರು ವಿದ್ಯುತ್ ಪರಿವರ್ತಕ ಕಂಬಗಳ ಮರೆಯಲ್ಲಿ ಮೂತ್ರ ವಿಸರ್ಜಿಸುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ಮತ್ತು ತಂಗುದಾಣದಲ್ಲಿ ನಿಲ್ಲುವ ಮಹಿಳೆಯರು, ವಿದ್ಯಾರ್ಥಿನಿಯುರು ಮುಜುಗರ ಎದುರಿಸುವಂತಾಗಿದೆ.
ವಿದ್ಯುತ್ ಪರಿವರ್ತಕಗಳಿಗೆ ಸೂತ್ತಲೂ ತಂತಿ ಬೇಲಿ ಸಹ ಇಲ್ಲ. ಇದನ್ನು ಲೆಕ್ಕಿಸದೇ ಪುರುಷರು ಟಿಸಿಗಳ ಮರೆಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಆದ್ದರಿಂದ ಅಪಾಯ ಸಂಭವಿಸುವ ಮುನ್ನವೇ ಈ ವಿದ್ಯುತ್ ಪರಿವರ್ತಕಗಳನ್ನು ಸ್ಥಳಾಂತರಿಸುವಂತೆ ಹಲವು ಬಾರಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಪಪಂ ಸದಸ್ಯ ಮಂಜುನಾಥ ಕರಡಕಲ್ ಆರೋಪಿಸಿದ್ದಾರೆ.
ಇನ್ನಾದರೂ ಈ ಪರಿವರ್ತಕಗಳನ್ನು ಸ್ಥಳಾಂತರಿಸುವ ಜೊತೆಗೆ ಸ್ವತ್ಛತೆ ಕಾಪಾಡಲು ಮತ್ತು ಮೂತ್ರಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿದ್ಯುತ್ ಪರಿವರ್ತಕಗಳಿಂದ ಸುತ್ತಲಿನ ವಾರ್ಡ್ಗಳಿಗೆ ಸಂಪರ್ಕ ಒದಗಿಸಲಾಗಿದೆ. ಈ ಪರಿವರ್ತಕಗಳನ್ನು ಸ್ಥಳಾಂತರಿಸಲು ಸ್ಥಳ ಒದಗಿಸಿದರೆ ಶೀಘ್ರ ಸ್ಥಳಾಂತರಿಸಲಾಗುವುದು. ಅಲ್ಲದೆ ಕೆಲ ವಾರ್ಡ್ಗಳಲ್ಲಿ ಇಲಾಖೆಯಡಿ ಕೈಗೊಂಡ ಕಾಮಗಾರಿಗೆ ಅಡಚಣೆಯಾಗುತ್ತಿದೆ. ಸಾರ್ವಜನಿಕರು, ಪಪಂ ಅಧಿಕಾರಿಗಳು ಸಹಕಾರ ನೀಡಬೇಕು.
. ಶ್ರೀಶೈಲ ಪಾಟೀಲ, ಜೆಸ್ಕಾಂ ಶಾಖಾ ಅಧಿಕಾರಿ
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

Raichur; ಬೇಡಿಕೆ ಕುಸಿತ: ಆರ್ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.