
ಎರಡೂ ನದಿ ಬರಿದು: ಹೋಳಿ ಆಚರಣೆಗೆ ಜಲಸಂಕಟ
Team Udayavani, Mar 21, 2019, 12:13 PM IST

ರಾಯಚೂರು: ನಗರ ಸೇರಿ ಜಿಲ್ಲೆಯ ವಿವಿಧೆಡೆ ಗುರುವಾರ ಹೋಳಿ ಸಂಭ್ರಮಾಚರಣೆ ಜೋರಾಗಲಿದ್ದು, ಬಣ್ಣ ಬಳಿದುಕೊಂಡ ಯುವಕರಿಗೆ ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲೆಯ ಎರಡು ನದಿಗಳಾದ ಕೃಷ್ಣೆ, ತುಂಗಭದ್ರೆ ನದಿ ಒಡಲು ಬರಿದಾಗಿದ್ದರೆ, ಇತ್ತ ಮನೆಗಳಲ್ಲೂ ನೀರಿನ ಕೊರತೆ ಕಾಡುತ್ತಿದೆ.
ಸಾಮಾನ್ಯವಾಗಿ ಯುವಕರು ಬಣ್ಣದಾಟ ಮುಗಿದ ಬಳಿಕ ಸ್ನಾನಕ್ಕೆ ನದಿಗಳತ್ತ ಹೋಗುವುದು ವಾಡಿಕೆ. ಆದರೆ, ಈ ಬಾರಿ ಎರಡೂ ನದಿಗಳು ಬರಿದಾಗಿವೆ. ಇದರಿಂದ ನದಿಗಳಿಗೆ ತೆರಳಿದರೂ ಅಲ್ಲಲ್ಲಿ ನಿಂತ ನೀರಿನಲ್ಲಿಯೇ ಸ್ನಾನಾದಿ ಕರ್ಮಗಳನ್ನು ಮುಗಿಸಿಕೊಂಡು ಬರಬೇಕಿದೆ. ಇನ್ನು ನಗರದಲ್ಲಿ ಮೂರು ದಿನಕ್ಕೊಮ್ಮೆ ನೀರು ಬಿಡುತ್ತಿರುವ ಕಾರಣ ನೀರಿನ ಅಭಾವ ಕಾಡದೆ ಇರಲಿಕ್ಕಿಲ್ಲ.
ಜಿಲ್ಲೆಯ ಕೆಲವೆಡೆ ಗುರುವಾರ, ಮತ್ತೆ ಕೆಲವೆಡೆ ಶುಕ್ರವಾರ ಹಬ್ಬ ಆಚರಿಸಿದರೆ ಕೆಲವೆಡೆ ಆಡುವುದಿಲ್ಲ. ಸಿಂಧನೂರಿನಲ್ಲಿ
ಗುರುವಾರ ರಾತ್ರಿ ಕಾಮದಹನ ಮಾಡಲಾಗುತ್ತಿದ್ದು, ಶುಕ್ರವಾರ ಹಬ್ಬ ಆಚರಿಸಲಾಗುತ್ತಿದೆ. ಇನ್ನು ದೇವದುರ್ಗ ತಾಲೂಕು, ಲಿಂಗಸುಗೂರು ತಾಲೂಕಿನ ಹಟ್ಟಿಯಲ್ಲಿ ಹೋಳಿ ಬದಲಿಗೆ ಯುಗಾದಿಗೆ ಬಣ್ಣದಾಟ ಆಡುತ್ತಾರೆ. ಆದರೆ, ನಗರದಲ್ಲಿ ಗುರುವಾರ ಹಬ್ಬ ಆಚರಣೆಗೆ ಸಿದ್ಧತೆಗಳು ಜೋರಾಗಿಯೇ ನಡೆದಿದ್ದವು. ಕೆಲ ಖಾಸಗಿ ಸಂಸ್ಥೆಗಳು ಹಬ್ಬ ಆಡಲು ವಿಶೇಷ ವ್ಯವಸ್ಥೆ ಮಾಡುವ ಪರಿಪಾಟವಿದ್ದು, ಈ ಬಾರಿಯೂ ಸಿದ್ಧತೆ ಮಾಡಿಕೊಳ್ಳಲಾಗಿದೆ.
ವ್ಯಾಪಾರ ವಹಿವಾಟು ಜೋರು: ಬಣ್ಣದಾಟಕ್ಕೆ ಮಾರುಕಟ್ಟೆಗೆ ವಿಧ ವಿಧವಾದ ಬಣ್ಣಗಳು ಲಗ್ಗೆ ಇಟ್ಟಿವೆ. ಕೆಲವೆಡೆ ಪುಡಿ
ಬಣ್ಣಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಆದರೆ, ಬಹುತೇಕ ಕೆಮಿಕಲ್ ಮಿಶ್ರಿತ ಬಣ್ಣ ಇರುವುದು ಕಂಡು ಬಂತು. ಸ್ವಲ್ಪವೇ
ಬಳಸಿದರೂ ಚರ್ಮಕ್ಕೆ ಹೆಚ್ಚು ಬಣ್ಣ ಅಂಟಿಕೊಳ್ಳುವಂಥ ಬಣ್ಣಗಳೇ ಕಂಡು ಬಂತು. ಮಾರುಕಟ್ಟೆಯಲ್ಲಿ ಬುಧವಾರ
ಮಕ್ಕಳು, ಪಾಲಕ ರು ಬಣ್ಣ, ಪಿಚಕಾರಿ ಖರೀದಿಸುತ್ತಿರುವುದು ಕಂಡು ಬಂತು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

Raichur; ಬೇಡಿಕೆ ಕುಸಿತ: ಆರ್ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.