ದುಡ್ಡು ಕೊಟ್ಟರೂ ಸಿಗಲ್ವಂತೆ ಡಿಎಪಿ ಗೊಬ್ಬರ!


Team Udayavani, Sep 1, 2022, 4:05 PM IST

10-DAP

ಸಿಂಧನೂರು: ಭತ್ತದ ಕಣಜ ಖ್ಯಾತಿಯ ತಾಲೂಕಿನಲ್ಲಿ ಬಹುಬೇಡಿಕೆ ಸೃಷ್ಟಿಸಿಕೊಂಡಿರುವ ಡಿಎಪಿ ರಸಗೊಬ್ಬರ ರೈತರ ಪಾಲಿಗೆ ಸಂಕಷ್ಟ ತಂದೊಡ್ಡಿದೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆ ಸಮರ್ಪಕವಾಗಿ ಇಲ್ಲದ ಪರಿಣಾಮ ದುಡ್ಡು ಕೊಟ್ಟರೂ ಡಿಎಪಿ ಗೊಬ್ಬರ ಸಿಗುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಎಸ್‌ಎಸ್‌ಎನ್‌, ಸಹಕಾರಿ ಸೊಸೈಟಿಗಳ ಮೂಲಕ ರಸಗೊಬ್ಬರ ಪೂರೈಕೆ ಮಾಡಲು ಬಹುತೇಕರು ಉತ್ಸುಕರಾಗಿದ್ದಾರೆ. ರೈತರ ಸೇವಾ ಸಹಕಾರಿ ನಿಯಮಿತಗಳಾಗಿರುವುದರಿಂದ ನೇರವಾಗಿ ರೈತರು ಸಂಪರ್ಕದಲ್ಲಿದ್ದು, ಇಲ್ಲಿ ಸಾರಿಗೆ ವೆಚ್ಚ ಮಾತ್ರ ಹೆಚ್ಚುವರಿಯಾಗಿ ಪಡೆದುಕೊಂಡು ರಸಗೊಬ್ಬರ ಕೊಟ್ಟು ಸೇವೆ ಸಲ್ಲಿಸಲು ಆಸಕ್ತಿ ತೋರಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ರಸಗೊಬ್ಬರ ದೊರೆಯದಾಗಿದೆ.

ಬಫರ್ಸ್ಟಾಕ್ಗೂ ಕೈ: ಸರ್ಕಾರಿ ಅಧಿಧೀನದ ಇಲ್ಲಿನ ಮಾರಾಟ ಮಂಡಳಿ (ಫೆಡರೇಶನ್‌) ಯಲ್ಲಿ ಬಫರ್‌ ಸ್ಟಾಕ್‌ ಕೂಡ ಖಾಲಿಯಾಗುತ್ತಿದೆ ಎಂಬ ಮಾಹಿತಿ ಒದಗಿಸಲಾಗುತ್ತಿದೆ. ಕಳೆದ ಏಪ್ರಿಲ್‌ನಿಂದ ಈವರೆಗೆ ಅಂದಾಜು 703 ಮೆಟ್ರಿಕ್‌ ಟನ್‌ ಡಿಎಪಿ ರಸಗೊಬ್ಬರ ಪೂರೈಕೆ ಮಾಡಲಾಗಿದೆ. ಸದ್ಯ ಬೇಡಿಕೆಯಿದ್ದರೂ ಪೂರೈಕೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಶಿಫಾರಸುಗಳಿಗೆ ಮಣೆ: ರೈತರು ಹಣ ಕೊಟ್ಟು ಖರೀದಿಸಬೇಕಾದ ರಸಗೊಬ್ಬರಕ್ಕೂ ಶಿಫಾರಸು ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಎಪಿ ರಸಗೊಬ್ಬರ ಎಲ್ಲಿದ್ದರೂ ಖರೀದಿಸಲು ಸಿದ್ಧವೆಂದು ವ್ಯಾಪಾರಿಗಳು, ಸಹಕಾರಿ ಸೊಸೈಟಿ ಆಡಳಿತ ಮಂಡಳಿಯವರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೂ, ಪೂರೈಕೆ ಮಾತ್ರ ಸಾಧ್ಯವಾಗುತ್ತಿಲ್ಲ. ಈ ನಡುವೆ ಡಿಎಪಿ ರಸಗೊಬ್ಬರ ಬೇಕಾದರೆ, ಶಿಫಾರಸುಗಳು ಇರಬೇಕು ಎಂಬ ಆರೋಪಗಳು ಹೆಚ್ಚಾಗಿವೆ. ರಸಗೊಬ್ಬರ ಬಯಸಿದ ರೈತರು ಇದಕ್ಕಾಗಿ ಯಾರ ಮನೆಗೆ ಅಲೆದು ಶಿಫಾರಸು ತರಬೇಕು ಎಂಬ ಗೊಂದಲ ಎದುರಿಸುವಂತಾಗಿದೆ.

ಸಹಜವಾಗಿಯೇ ತಾಲೂಕಿನಲ್ಲಿ ಡಿಎಪಿ ರಸಗೊಬ್ಬರವನ್ನು ಬ್ಲಾಕ್‌ ಮಾರ್ಕೆಟ್‌ನಲ್ಲಿ ಖರೀದಿಸಬೇಕಾದ ಸ್ಥಿತಿ ಎದುರಾಗಿದ್ದು, ಇದಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆ ಎದ್ದಿದೆ.

ಸೊಸೈಟಿಗಳಿಗೆ ಪೂರೈಕೆಯಾಗುತ್ತಿಲ್ಲ

ಇಫ್ಕೋ ಸಂಸ್ಥೆಯು ತಾಲೂಕಿನ ತಿಡಿಗೋಳ, ವಲ್ಕಂದಿನ್ನಿ, ಅರಳಹಳ್ಳಿ, ಆರ್‌.ಎಚ್‌ ಕಾಲೋನಿ 2, ಮಲ್ಲಾಪುರ, ಬಾದರ್ಲಿ, ಗಾಂಧಿ ನಗರದ ಶ್ರೀ ಸಾಯಿ ಎಂಟರ್‌ಪ್ರೈಸಸ್‌ಗೆ ಮಾತ್ರ ಗೊಬ್ಬರ ಪೂರೈಸಿದಿದ್ದು, 99.5 ಮೆಟ್ರಿಕ್‌ ಒದಗಿಸಲಾಗಿದೆ ಎನ್ನುತ್ತವೆ ಫೆಡರೇಶನ್‌ ಮೂಲಗಳು. ಇನ್ನು ಕ್ರಿಬ್ಕೋ, ಆರ್‌ಸಿಎಫ್‌, ಸಿಐಎಲ್‌ ಕಂಪನಿಗಳಿಂದಲೂ ಆಯ್ದ ಸೊಸೈಟಿಗಳಿಗೆ ಡಿಎಪಿ ರಸಗೊಬ್ಬರ ಪೂರೈಕೆಯಾಗಿದೆ. ಆದರೆ, ತಾಲೂಕಿನ ಎಲ್ಲ ಸೊಸೈಟಿಗಳಿಗೂ ಸಮಾನ ರೀತಿಯಲ್ಲಿ ಬೇಡಿಕೆ ಅನ್ವಯ ರಸಗೊಬ್ಬರ ಒದಗಿಸಲು ಫೆಡರೇಶನ್‌ ಮೂಲಕ ಸಾಧ್ಯವಾಗಿಲ್ಲ ಎನ್ನುವ ದೂರು ಕೇಳಿ ಬಂದಿದೆ.

ಡಿಎಪಿ ರಸಗೊಬ್ಬರಕ್ಕಾಗಿ ಬೇಡಿಕೆ ಇಟ್ಟರೂ ನಮಗೆ ಸಮರ್ಪಕವಾಗಿ ಪೂರೈಕೆಯಾಗಿಲ್ಲ. ರೈತರು ನಿತ್ಯವೂ ಬಂದು ಸಹಕಾರಿ ಸೊಸೈಟಿ ಬಳಿ ಕೇಳುತ್ತಿದ್ದಾರೆ. ಫೆಡರೇಶನ್‌ನವರು ರೈತರ ಬೇಡಿಕೆ ಆಲಿಸಬೇಕು.ಅಮರೇಶ ಅಂಗಡಿ, ಅಧ್ಯಕ್ಷರು ವಿಎಸ್ಎಸ್ಎನ್‌, ಸಿಂಧನೂರು

ಯಮನಪ್ಪ ಪವಾರ

ಟಾಪ್ ನ್ಯೂಸ್

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

Raichur: ಜಾತಿಗಣತಿ ತಕ್ಷಣಕ್ಕೆ ಜಾರಿಯಿಲ್ಲ, ಬರೀ ಚರ್ಚೆಯಷ್ಟೇ: ಸಿಎಂ ಸಿದ್ದರಾಮಯ್ಯ

Raichur: ಜಾತಿಗಣತಿ ತಕ್ಷಣಕ್ಕೆ ಜಾರಿಯಿಲ್ಲ, ಬರೀ ಚರ್ಚೆಯಷ್ಟೇ: ಸಿಎಂ ಸಿದ್ದರಾಮಯ್ಯ

Balaganuru: ಗುಡುಗು ಸಹಿತ ಮಳೆ; ಸಿಡಿಲು ಬಡಿದು ವ್ಯಕ್ತಿ ಸಾವು

Balaganuru: ಗುಡುಗು ಸಹಿತ ಮಳೆ; ಸಿಡಿಲು ಬಡಿದು ವ್ಯಕ್ತಿ ಸಾವು

ವಿಪಕ್ಷ ನಾಯಕರು ಹುಚ್ಚರ ರೀತಿ ಆಡುತ್ತಿದ್ದಾರೆ: ಸಚಿವ ಭೋಸರಾಜು

Raichur: ವಿಪಕ್ಷ ನಾಯಕರು ಹುಚ್ಚರ ರೀತಿ ಆಡುತ್ತಿದ್ದಾರೆ: ಸಚಿವ ಭೋಸರಾಜು

Raichur: ಬೆಟ್ಟದ ಪರಮೇಶ್ವರ ದೇವಸ್ಥಾನದ ಅರ್ಚಕಿ ನೇಣು ಬಿಗಿದು ಆತ್ಮಹತ್ಯೆ

Raichur: ಬೆಟ್ಟದ ಪರಮೇಶ್ವರ ದೇವಸ್ಥಾನದ ಅರ್ಚಕಿ ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

police

Uppinangady: ವರದಕ್ಷಿಣೆಗಾಗಿ ನಿತ್ಯ ಮಾನಸಿಕ, ದೈಹಿಕ ಹಿಂಸೆ: ದೂರು ದಾಖಲು

Exam

PG NEET-2024: ನೋಂದಣಿ ವಿಸ್ತರಣೆ

KSRTC VOLVO

Dasara: ಎರಡು ಸಾವಿರ ಹೆಚ್ಚುವರಿ ಬಸ್‌

school

ರಾಜ್ಯ ಪಠ್ಯಕ್ರಮ ಬೋಧನೆ ಕಡ್ಡಾಯ : ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ

Vaishnodevi-Temple

Famous Goddess Temple: ಗುಹಾಲಯ ಶ್ರೀಮಾತಾ ವೈಷ್ಣೋದೇವಿ ದೇಗುಲ, ಜಮ್ಮು-ಕಾಶ್ಮೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.