ಅಪ್ಪು ಹೆಸರಿನಲ್ಲಿ ಸೂರಿನ ಕೊಡುಗೆ

ರಾಜಶೇಖರರೆಡ್ಡಿ ಮಲ್ಲಾಪುರ ಮರಳು, ಕಿಟಕಿ, ಬಾಗಿಲಿಗೆ ತಗಲುವ ವೆಚ್ಚ ಭರಿಸಿದರು

Team Udayavani, Aug 15, 2022, 6:25 PM IST

ಅಪ್ಪು ಹೆಸರಿನಲ್ಲಿ ಸೂರಿನ ಕೊಡುಗೆ

ಸಿಂಧನೂರು: ಗುಡಿಸಲು ವಾಸಿಯಾಗಿರುವ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕೆನ್ನುವುದು ಸರ್ಕಾರದ ಉದ್ದೇಶ. ಆದರೆ, ಸರ್ಕಾರ ಸೂರು ಕೊಟ್ಟರೂ ತಾಂತ್ರಿಕ ಕಾರಣದಿಂದ ಈಡೇರದಿದ್ದಾಗ ಸಮುದಾಯವೇ ಸಹಕಾರ ನೀಡಿ, ಇಬ್ಬರು ಅನಾಥ ಮಕ್ಕಳಿಗೆ ನೆರಳು ಕಲ್ಪಿಸುವಲ್ಲಿ ಯಶಸ್ವಿಯಾಗಿದೆ.

ದಿ.ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ (ಮಾ.17)ದಂದು ಕೈಗೊಂಡ ಸ್ನೇಹಿತರ ಸಂಕಲ್ಪ ಕೊನೆಗೂ ಈಡೇರಿದೆ. ತಾಲೂಕಿನ ಹೊಸಳ್ಳಿ ಕ್ಯಾಂಪಿನ ಹುಸೇನಮ್ಮ (35), ಬುದ್ಧಿಮಾಂದ್ಯ ಆಗಿರುವ ರೇಣುಕಮ್ಮ (30) ಎರಡು ವರ್ಷದ ಹಿಂದೆ ಪಾಲಕರನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಅವರ ತಂದೆ ಹುಸೇನಪ್ಪ ಹಾಗೂ ಲಕ್ಷ್ಮಮ್ಮ ನಿಧನದ ಬಳಿಕ ಇಬ್ಬರೂ ತಬ್ಬಲಿಯಾಗಿದ್ದರು.

ಅಪ್ಪನ ಕನಸು ಈಡೇರಿರಲಿಲ್ಲ: ಹುಸೇನಪ್ಪ ತನ್ನಿಬ್ಬರು ಮಕ್ಕಳಿಗೆ ಸೂರು ಕಲ್ಪಿಸಲು ನಿರ್ಣಯಿಸಿ ಆಶ್ರಯ ಯೋಜನೆಯಡಿ ಮನೆ ಪಡೆದಿದ್ದರು. ಆದರೆ ತಾಂತ್ರಿಕ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ 2 ಬಿಲ್‌ ಪಾವತಿಯಾದ ಮನೆಗೆ ಮತ್ತೆ ಅನುದಾನ ಬಂದಿರಲಿಲ್ಲ. ಕೋವಿಡ್‌ ವೇಳೆ ಹುಸೇನಪ್ಪ ಮೃತಪಟ್ಟ ಹಿನ್ನೆಲೆಯಲ್ಲಿ ನಿರ್ಮಾಣ ಹಂತದ ಮನೆ ಪೂರ್ಣಗೊಂಡಿರಲಿಲ್ಲ.

ಅಕ್ಷಯ ಆಹಾರ ಜೋಳಿಗೆ, ಜೀವಸ್ಪಂದನ ಟ್ರಸ್ಟ್ ನ ಅಶೋಕ ನಲ್ಲಾ, ಅವಿನಾಶ್‌ ದೇಶಪಾಂಡೆ, ನಟ ಪುನೀತ್‌ ಅವರ ಜನ್ಮದಿನ ಆಚರಿಸುವ ಸಂದರ್ಭ ಈ ವಿಷಯ ತಿಳಿದು ಮನೆಗೆ ಧಾವಿಸಿ, ಅಪ್ಪು ಹೆಸರಿನಲ್ಲಿ ಅನಾಥರಿಗೆ ಸೂರು ಕಟ್ಟುವ ನಿರ್ಣಯ ಕೈಗೊಂಡು ಅದನ್ನು ಸಾಕಾರಗೊಳಿಸಿದ್ದಾರೆ.

ಹಲವರ ನೆರವು: ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿ ಜನ್ಮದಿನವನ್ನು ಈ ರೀತಿ ಬಡವರಿಗೆ ನೆರವಾಗುವುದರ ಮೂಲಕ ಆಚರಿಸಬೇಕೆಂಬ ಅಶೋಕ ನಲ್ಲಾ ಆಶಯಕ್ಕೆ ಹಲವರು ಕೈ ಜೋಡಿಸಿದ್ದಾರೆ. ಜೀವಸ್ಪಂದನಾ ಟ್ರಸ್ಟ್‌ನ ಅವಿನಾಶ್‌ ದೇಶಪಾಂಡೆ, ಕಾಲಕಾಲೇಶ್ವರ ಕಲರ್‌ ಕ್ರಿಯೇಶ್ಚನ್‌ ಸಂಸ್ಥೆಯವರು ಮನೆ ಪೂರ್ಣಗೊಳಿಸಲು ಸಿಮೆಂಟ್‌ ಪೂರೈಸಿದರು. ವೆಂಕಟೇಶ್ವರ ಆಗ್ರೋ ಮಾಲೀಕ ನೆಕ್ಕಂಟಿ ಸುರೇಶ್‌ ನೆಲಹಾಸು ಕೊಡಿಸಿದರು.

ಮೆಡಿಕಲ್‌ ಮಾಲೀಕ ರಾಜಶೇಖರರೆಡ್ಡಿ ಮಲ್ಲಾಪುರ ಮರಳು, ಕಿಟಕಿ, ಬಾಗಿಲಿಗೆ ತಗಲುವ ವೆಚ್ಚ ಭರಿಸಿದರು. ಅಕ್ಷಯ ಆಹಾರ ಜೋಳಿಗೆ ಟ್ರಸ್ಟ್‌ನಿಂದ ಮೇಷನ್‌ ಕೆಲಸ ಉಚಿತವಾಗಿ ಮಾಡಿಸಿಕೊಟ್ಟರು. ಕಾರುಣ್ಯಾಶ್ರಮದ ಚನ್ನಬಸಯ್ಯಸ್ವಾಮಿ ಕೂಡ ಸಾಥ್‌ ನೀಡಿದರು. ಇದರ ಫಲವಾಗಿ ಸುಸಜ್ಜಿತ ಸೂರು ನಿರ್ಮಾಣವಾಗಿದ್ದು, ವಿದ್ಯುತ್‌ ವ್ಯವಸ್ಥೆ ಕಲ್ಪಿಸಿ, ಮನೆಗೆ ಸುಣ್ಣ-ಬಣ್ಣ ಬಳಿಯಲಾಗಿದೆ. ಅನಿಲ್‌ ದಾಪತ್ತೆ ಎಂಬುವವರು ಫ್ಯಾನ್‌ ಉಚಿತವಾಗಿ ಕೊಡಿಸಿ ನೆಮ್ಮದಿ ಗಾಳಿ ಬೀಸಿದ್ದಾರೆ.

ಅಪ್ಪು ಮನೆ ಎಂದೇ ಹೆಸರುವಾಸಿ
ಸ್ನೇಹಿತರ ಬಳಗ ಮನಸ್ಸು ಮಾಡಿದರೆ ಸಂಕಷ್ಟದಲ್ಲಿರುವ ಬಡವರಿಗೆ ನೆರವಾಗಬಹುದು ಎಂಬುದಕ್ಕೆ ಈ ಪ್ರಯತ್ನ ಸಾಕ್ಷಿಯಾಗಿದೆ. ಸೂರಿಲ್ಲವೆಂದು ಕೊರಗುತ್ತಿದ್ದ ಇಬ್ಬರು ಮಹಿಳೆಯರು, ಸ್ವಂತ ಸೂರು ಹೊಂದಿದ್ದಾರೆ. ಅವರಿಗೆ ಉಚಿತವಾಗಿ ಗ್ರಾಪಂ ಹೊಸಳ್ಳಿಯ ಅಧಿಕಾರಿಗಳು ಶೌಚಾಲಯ ಕಟ್ಟಿಸಿಕೊಡಬೇಕಿದೆ. ಈ ಹಿಂದೆ ತಾಂತ್ರಿಕ ಕಾರಣಕ್ಕೆ ಬಾಕಿ ಉಳಿದ ಆಶ್ರಯ ಯೋಜನೆ ಬಿಲ್‌ಗ‌ಳನ್ನು ಪಾವತಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.

ನಮ್ಮದೇನೂ ಕೊಡುಗೆಯಿಲ್ಲ. ಎಲ್ಲ ದಾನಿಗಳು, ಕಾಣದ ಕೈಗಳ ನೆರವಿನಿಂದ ಇದು ಸಾಧ್ಯವಾಗಿದೆ. ಅಪ್ಪು ಜನ್ಮದಿನಾಚರಣೆ ಸಂದರ್ಭ ಇಂತಹ ಕುಟುಂಬವೊಂದಕ್ಕೆ ನೆರವಾಗುವ ಇಚ್ಛೆ ವ್ಯಕ್ತಪಡಿಸಿದಾಗ ಹಲವರು ಕೈ ಜೋಡಿಸಿ, ಮನೆ ಪೂರ್ಣಗೊಳಿಸಲು ಸಾಥ್‌ ನೀಡಿದ್ದಾರೆ.
ಅಶೋಕ ನಲ್ಲಾ, ಕಾರ್ಯದರ್ಶಿ
ಅಕ್ಷಯ ಆಹಾರ ಜೋಳಿಗೆ ಟ್ರಸ್ಟ್‌

ನಮ್ಮ ತಂದೆ ಹುಸೇನಪ್ಪ ಮನೆ ಕಟ್ಟಿಸಬೇಕೆಂಬ ಕನಸು ಕಂಡಿದ್ದರು. ಅದು ಪೂರ್ಣಗೊಳ್ಳಲೇ ಇಲ್ಲ. ಅವರು ನಿಧನರಾದ ಮೇಲೆ ದಿಕ್ಕು ತೋಚದಂತಾಯಿತು. ಊರ್ಮಿಳಾ ನಲ್ಲಾ ಹಾಗೂ ಅವರ ಪತಿ, ಸಾರ್ವಜನಿಕರ ಸಹಕಾರದೊಂದಿಗೆ ನಮಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ.
ಹುಸೇನಮ್ಮ, ಹೊಸಳ್ಳಿ ಕ್ಯಾಂಪಿನ
ನಿವಾಸಿ, ಸಿಂಧನೂರು ತಾಲೂಕು

ಯಮನಪ್ಪ ಪವಾರ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-mosale

Raichur ಡಿ.ರಾಂಪುರದಲ್ಲಿ ಭಾರೀ ಗಾತ್ರದ ಮೊಸಳೆ ಸೆರೆ

10-ns-bosuaju

Raichur: ಬಿಜೆಪಿಯವರು ಮೈಮೇಲೆ ಬಂದಂತೆ ಆಡುತ್ತಿದ್ದಾರೆ: ಸಚಿವ ಎನ್.ಎಸ್.ಭೋಸರಾಜು

Cabinet Meeting: ಬೀದರ್‌, ರಾಯಚೂರು ನಗರಸಭೆ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿಗೆ

Cabinet Meeting: ಬೀದರ್‌, ರಾಯಚೂರು ನಗರಸಭೆ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿಗೆ

SIddu-Phone

Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್‌ಪಿಗೆ ಕರೆ 

Medical,Nursing ಕಾಲೇಜು ಹೆಚ್ಚು ಶುಲ್ಕ ಪಡೆದರೆ ಕ್ರಮ: ಡಾ|ಶರಣ ಪ್ರಕಾಶ

Medical,Nursing ಕಾಲೇಜು ಹೆಚ್ಚು ಶುಲ್ಕ ಪಡೆದರೆ ಕ್ರಮ: ಡಾ|ಶರಣ ಪ್ರಕಾಶ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.