Drought: ನೀರಿಲ್ಲದೇ 500 ಎಕರೆ ಭತ್ತದ ಬೆಳೆ ನಾಶ ಮಾಡಿದ ರೈತರು

ಜಮೀನಿಗೆ ಕುರಿ ಹಾಯಿಸಿ ಮೇಯಿಸಿದ ಕೃಷಿಕರು

Team Udayavani, Oct 6, 2023, 2:37 PM IST

7-raichur

ರಾಯಚೂರು: ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿಯದೆ ಕಂಗಾಲಾಗಿರುವ ರೈತರು ಸಕಾಲಕ್ಕೆ ನೀರು ಸಿಗದ ಕಾರಣ ಭತ್ತದ ಬೆಳೆಯನ್ನೇ ನಾಶಪಡಿಸುತ್ತಿದ್ದಾರೆ! ತುಂಗಭದ್ರಾ ಜಲಾಶಯ ವ್ಯಾಪ್ತಿಯ ಎಡದಂಡೆ ಕಾಲುವೆ ಕೆಳಭಾಗದ ರಾಯಚೂರು ತಾಲೂಕಿನ ಕೆಲ ಗ್ರಾಮಗಳಲ್ಲಿ ದಯನೀಯ ದೃಶ್ಯಗಳು ಕಂಡು ಬಂದಿವೆ.

ತಾಲೂಕಿನ ದಿನ್ನಿ, ಮಮದಾಪುರ, ಕಸಬೆಕ್ಯಾಂಪ್‌, ವೆಂಕಟೇಶ್ವರ ಕ್ಯಾಂಪ್‌, ಕಲಮಲ ಭಾಗದಲ್ಲಿ ರೈತರು ಸುಮಾರು 500 ಎಕರೆ ಭತ್ತದ ಜಮೀನಿಗೆ ಕುರಿಗಳನ್ನು ಹಾಯಿಸಿ ಮೇಯಿಸುವ ಮೂಲಕ ಬೆಳೆಹಾಳು ಮಾಡುತ್ತಿದ್ದಾರೆ. ಇನ್ನೂ ಕೆಲ ರೈತರು, ಟ್ರ್ಯಾಕ್ಟರ್‌ ಮೂಲಕವೇ ಬೆಳೆ ನಾಶ ಮಾಡುತ್ತಿದ್ದಾರೆ.

ತುಂಗಭದ್ರಾ ಜಲಾಶಯದಲ್ಲಿ ಕೇವಲ 54 ಟಿಎಂಸಿ ಅಡಿ ನೀರು ಲಭ್ಯವಿದ್ದು, ಒಂದು ಬೆಳೆಗೆ ಮಾತ್ರ ನೀರು ಹರಿಸಲು ಐಸಿಸಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಲ್ಲೂ ನಿತ್ಯ 3,900 ಕ್ಯುಸೆಕ್‌ ಹರಿಸಿದರೆ ಮಾತ್ರ ನೀರು ಸಾಕಾಗಲಿದೆ ಎಂದು ಅ ಧಿಕಾರಿಗಳು ತಿಳಿಸಿದ್ದರು. ಆದರೆ, 3,900 ಕ್ಯುಸೆಕ್‌ ಹರಿಸಿದರೆ ಕೊನೆ ಭಾಗಕ್ಕೆ ನೀರು ಬರುವುದೇ ಇಲ್ಲ. ಕನಿಷ್ಠ 4,100 ಕ್ಯುಸೆಕ್‌ ಹರಿಸುವಂತೆ ರೈತರು ಒತ್ತಾಯಿಸಿದ್ದರು. ಅಧಿ ಕಾರಿಗಳು ಹೇಳುವ ಪ್ರಕಾರ, ನಿತ್ಯ 4,100 ಕ್ಯುಸೆಕ್‌ ಹರಿಸಲಾಗುತ್ತಿದೆ. ಆದರೂ ಮಾನ್ವಿ ಮತ್ತು ರಾಯಚೂರು ಭಾಗದ ಕೆಲ ನೀರಾವರಿ ಜಮೀನಿಗೆ ನೀರು ಹರಿದೇ ಇಲ್ಲ. ಇದರಿಂದ ಭತ್ತ ಇಳುವರಿ ಸಂಪೂರ್ಣ ಕುಂಠಿತಗೊಂಡಿದ್ದು, ರೈತರಿಗೆ ನಷ್ಟ ಎದುರಾಗಿದೆ.

ಪ್ರತಿ ಬಾರಿ ತಡವಾಗಿಯಾದರೂ ಕೊನೆ ಭಾಗಕ್ಕೆ ಒಂದು ಬೆಳೆಗೆ ನೀರು ಹರಿಯುತ್ತಿತ್ತು. ಈ ಬಾರಿ ಅಕ್ಟೋಬರ್‌ ಬಂದರೂ ನೀರು ತಲುಪಿಲ್ಲ.

ಇದರಿಂದ ತಾಲೂಕಿನ ದಿನ್ನಿ, ಮಮದಾಪುರ, ಕಲ್ಲೂರು, ಸಿರವಾರದ ಕಲಮಲ ಭಾಗದ ಸಾಕಷ್ಟು ಜಮೀನುಗಳ ಸ್ಥಿತಿ ಇದೇ ಆಗಿದೆ. ಇನ್ನೂ ಕೆಲ ರೈತರು ಮಳೆ ನಂಬಿಯೂ ಭತ್ತ ಬಿತ್ತನೆ ಮಾಡಿದ್ದರು. ಆದರೆ, ಮಳೆಯೂ ಬಾರದೆ ಬೆಳೆ ಚೇತರಿಕೆ ಕಂಡಿಲ್ಲ. ಇದರಿಂದ ಬೇರೆ ದಾರಿಯಿಲ್ಲದೇ ನಾಶಕ್ಕೆ ಮುಂದಾಗಿದ್ದಾರೆ.

ಹಿಂಗಾರಿಯಲ್ಲೂ ಬರ:

ಮುಂಗಾರು ಮಳೆ ಕೈಕೊಟ್ಟ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ತುಂಗಭದ್ರಾ ತೀರ ಪ್ರದೇಶದಲ್ಲಿ ನಿರೀಕ್ಷಿತ ಮಳೆಯಾಗುತ್ತಿಲ್ಲ. ಕಾಲುವೆಗಳಿಗೂ ನೀರು ಇಲ್ಲದ್ದರಿಂದ ಬರಗಾಲ ಎದುರಾಗಿದೆ. ಹೀಗಾಗಿ ನಾಟಿ ಮಾಡಿದ್ದ ಭತ್ತದ ಬೆಳೆ ಒಣಗಿ ಹೋಗುತ್ತಿದೆ. ಹಿಂಗಾರಿಯಲ್ಲೂ ಮಳೆಯಾಗದಿದ್ದರೆ ಬೆಳೆಗೆ ಮಾತ್ರವಲ್ಲ, ಕುಡಿಯುವ ನೀರಿಗೂ ತತ್ವಾರ ಎದುರಾಗುವ ಸಾಧ್ಯತೆ ಇದೆ.

ಲಕ್ಷಾಂತರ ರೂ. ಖರ್ಚು:

ರೈತರು ಭತ್ತ ನಾಟಿ ಮಾಡಿ ಆಗಲೇ ಒಂದೆರಡು ಬಾರಿ ಕ್ರಿಮಿನಾಶಕ, ಗೊಬ್ಬರ ಸಿಂಪಡಿಸಿ ಲಕ್ಷಾಂತರ ರೂ. ಖರ್ಚು ಮಾಡಿಕೊಂಡಿದ್ದಾರೆ. ಎಕರೆಗೆ ಏನಿಲ್ಲವೆಂದರೂ 25-30 ಸಾವಿರ ರೂ. ಖರ್ಚಾಗಿದೆ. ಇನ್ನೂ ಕೆಲ ರೈತರು ಲೀಜ್‌ ಪಡೆದುಕೊಂಡಿದ್ದು, ಜಮೀನು ಮಾಲೀಕರಿಗೆ ಆಗಲೇ ಹಣ ಪಾವತಿ ಮಾಡಿದ್ದಾರೆ. ಅದರ ಜತೆಗೆ ಬೆಳೆಗೂ ಖರ್ಚು ಮಾಡಿದ್ದು, ನಷ್ಟ ಮೈಮೇಲೆ ಎಳೆದುಕೊಳ್ಳುವಂತಾಗಿದೆ.

ಆನ್‌ ಆ್ಯಂಡ್‌ ಆಫ್ ಬದಲು ವಿಷ ಕೊಡಿ!

ಗುರುವಾರ ವಿಕಾಸಸೌಧದಲ್ಲಿ ತುಂಗಭದ್ರಾ ಯೋಜನೆಯ ತುರ್ತು ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ಈ ವೇಳೆ, ಜಲಾಶಯದಲ್ಲಿನ ನೀರನ್ನು ಬೆಳೆಗೆ ಬಿಡುತ್ತಾ ಹೋದರೆ ಕುಡಿಯುವ ನೀರು ಸೇರಿದಂತೆ ಅನ್ಯ ಬಳಕೆಗೆ ಕಷ್ಟವಾಗ ಲಿದೆ. ಹೀಗಾಗಿ ವಾರಕ್ಕೊಮ್ಮೆ ಆನ್‌ ಅಂಡ್‌ ಆಫ್ ಮಾದರಿಯಲ್ಲಿ ನೀರು ಬಿಡುವುದು ಸೂಕ್ತ ಎಂದು ಅಧಿಕಾರಿಗಳು ಸಭೆಗೆ ಸಲಹೆ ನೀಡಿದರು. ಇದಕ್ಕೆ ರೈತರು ಹಾಗೂ ಸ್ಥಳೀಯ ಶಾಸಕರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಕಂಪ್ಲಿ ಶಾಸಕ ಗಣೇಶ್‌, ಆನ್‌ ಅಂಡ್‌ ಆಫ್ ಪದ್ಧತಿಯಲ್ಲಿ ನೀರು ಬಿಡು ವುದು ಬೇಡ. ಅದರ ಬದಲು ನೀರಿಗಿಂತ ವಿಷ ಅಗ್ಗವಾಗಿ ಸಿಗುತ್ತದೆ. ಅದನ್ನೇ ಕೊಟ್ಟುಬಿಡಿ ಎಂದು ಕಿಡಿ ಕಾರಿದರು. ಕೊನೆಗೆ ಆನ್‌ ಅಂಡ್‌ ಆಫ್ ಪದ್ಧತಿಯ ಬದಲು, ಬಿಡುತ್ತಿರುವ ನೀರಿನ ಪ್ರಮಾಣ ತಗ್ಗಿಸಲು ಸಭೆ ಒಮ್ಮತಕ್ಕೆ ಬಂದಿತು. ಇದೇ ವೇಳೆ, ತುಂಗಭದ್ರಾ ಜಲಾಯಶಯದಲ್ಲಿ ಪ್ರಸ್ತುತ 53 ಟಿಎಂಸಿ ನೀರಿನ ಲಭ್ಯತೆ ಇದ್ದು, ಬಲದಂಡೆ ಮೇಲ್ಮಟ್ಟದ ಕಾಲುವೆ ಹೊರತುಪಡಿಸಿ ಉಳಿದೆಲ್ಲಾ ಕಾಲುವೆಗಳಿಗೂ ನ.30ರವರೆಗೆ ನಿತ್ಯ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್‌ ತಂಗಡಗಿ ಹೇಳಿದರು.

ರಾಯಚೂರು ತಾಲೂಕಿನ ಮಮದಾಪುರ ಸೇರಿ ಕೆಲ ಗ್ರಾಮಗಳಲ್ಲಿ ಭತ್ತ ಬೆಳೆಯನ್ನು ಸಂಪೂರ್ಣ ನಾಶ ಮಾಡಲಾಗಿದೆ. ಭತ್ತದ ಗದ್ದೆಗೆ ನೀರು ಬಂದಿಲ್ಲ. ಇನ್ನೂ ಕಾಯುತ್ತ ಕುಳಿತರೆ ರೈತರಿಗೆ ಮತ್ತಷ್ಟು ನಷ್ಟವಾಗಲಿದೆ. ಸರ್ಕಾರ ಕೂಡಲೇ ನಷ್ಟ ಪರಿಹಾರ ವಿತರಿಸಬೇಕು. ●ಬೂದಯ್ಯ ಸ್ವಾಮಿ ಇಂಗಳದಾಳ, ರೈತ ಸಂಘದ ಮುಖಂಡ

● ಸಿದ್ದಯ್ಯಸ್ವಾಮಿ ಕುಕನೂರು

 

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-maski

Maski: ಸರ್ಕಾರಿ ಕಾಮಗಾರಿಗೆ ಅಡ್ಡಿ: ವ್ಯಕ್ತಿ ಜೈಲುಪಾಲು

BowSpring-Bridge-RCH

ಕೃಷ್ಣಾ ನದಿಗೆ “ಬಿಲ್ಲಿನ ಹೆದೆ ಮಾದರಿ’ ಸೇತುವೆ; ಈ ವರ್ಷ ಸಂಚಾರಕ್ಕೆ ಮುಕ್ತ?

1-desss

Raichur; ಮನೆಯಲ್ಲಿ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು, ಪೇಂಟಿಂಗ್ ಭಸ್ಮ

7-

Raichur: ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.