ಮೊಟ್ಟೆ ವಿತರಿಸುವ ಯೋಜನೆಗೆ ತಲೆದೋರಿದ ಆರ್ಥಿಕ ಸಂಕಷ್ಟ!

ಅಪೌಷ್ಟಿಕತೆ ನಿವಾರಣೆ ದೃಷ್ಟಿಯಿಂದ ಮೊಟ್ಟೆ ವಿತರಣೆ ,ಗ್ರಾಪಂ ತೆರಿಗೆಗೆ ಕೈ ಹಾಕಿದ ರಾಜ್ಯ ಸರಕಾರ

Team Udayavani, Dec 24, 2020, 3:52 PM IST

ಮೊಟ್ಟೆ ವಿತರಿಸುವ ಯೋಜನೆಗೆ ತಲೆದೋರಿದ ಆರ್ಥಿಕ ಸಂಕಷ್ಟ!

ಸಿಂಧನೂರು: ಭಾರಿ ಉತ್ಸಾಹದೊಂದಿಗೆ ಆರಂಭವಾದ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಿಸುವ ಯೋಜನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಬೆಲೆ ಏರಿಕೆಯ ಭಾರ ನಿಭಾಯಿಸಲು ಗ್ರಾಪಂಗಳ ತೆರಿಗೆಗೆ ಕೈ ಹಾಕಲಾಗಿದೆ.

ರಾಜ್ಯದಲ್ಲಿ ಒಂದು ಮೊಟ್ಟೆಯ ಬೆಲೆ 5 ರೂ.ಗಿಂತ ಹೆಚ್ಚಾದರೆ ನಯಾಪೈಸೆ ನೀಡುವುದಿಲ್ಲವೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೇಳಿತ್ತು. ಆದರೂ, ಅಂಗನವಾಡಿ ಫೆಡರೇಶನ್‌ ಹಾಗೂ ನಾನಾ ಸಂಘ, ಸಂಸ್ಥೆಗಳ ಹೋರಾಟ ಹೆಚ್ಚಾದ ಬಳಿಕ ಸಮಸ್ಯೆ ಸೃಷ್ಟಿಯಾಗಿತ್ತು. ಪ್ರತಿ ಮೊಟ್ಟೆಗೆ 7 ರೂ. ಪಾವತಿಸಬೇಕೆಂದು ಇಲಾಖೆ ಬೇಡಿಕೆಯಿಟ್ಟರೂ ಕಡತವನ್ನು ರಾಜ್ಯ ಸರಕಾರತಿರಸ್ಕರಿಸಿತ್ತು. ಪಟ್ಟು ಬಿಡದಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಒಂದುಮೊಟ್ಟೆಯ ಬೆಲೆಯನ್ನು 6.30 ರೂ.ಗೆ ಹೆಚ್ಚಿಸುವಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅದಿನ್ನು ಇತ್ಯರ್ಥವಾಗಿಲ್ಲ.

ಏನಿದು ಯೋಜನೆ?: ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಣೆ ದೃಷ್ಟಿಯಿಂದ ಮೊಟ್ಟೆ ವಿತರಣೆ ಯೋಜನೆ ಜಾರಿಗೊಳಿಸಲಾಗಿದೆ.ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವಮಕ್ಕಳಿಗೆ ವಾರದಲ್ಲಿ ಮೂರು ದಿನ ಮೊಟ್ಟೆ ವಿತರಿಸಬೇಕು. ಹಿಂದುಳಿದ ರಾಜ್ಯದ 5 ಜಿಲ್ಲೆಗಳಲ್ಲಿ ಮಕ್ಕಳಿಗೆ ವಾರದ 3 ದಿನ ಮೊಟ್ಟೆ ನೀಡಬೇಕು. ಇನ್ನು ಅಂಗನವಾಡಿ ಕೇಂದ್ರಗಳಿಗೆ ಬರುವ 1ರಿಂದ 6 ವರ್ಷದೊಳಗಿನ ಎಲ್ಲ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ಕೊಡಬೇಕು. ಮಾತೃಪೂರ್ಣ ಯೋಜನೆಯಡಿ ತಾಯಂದಿರಿಗೆವಾರದಲ್ಲಿ ಆರು ದಿನವೂ ಮೊಟ್ಟೆಯನ್ನುವಿತರಿಸಬೇಕು ಎನ್ನುವುದು ಸರಕಾರದ ನಿರ್ಧಾರ. ಸದ್ಯ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಈ ಯೋಜನೆಗೆ ಇದೀಗ ಹಣಕಾಸಿನ ಸಮಸ್ಯೆ ಎದುರಾಗಿದೆ.

ಸ್ಥಳೀಯ ತೆರಿಗೆ ಮೇಲೆ ಕಣ್ಣು: ರಾಜ್ಯ ಸರಕಾರವೇ ಜಾರಿಗೊಳಿಸಿರುವ ಯೋಜನೆಯಾದರೂ ಅದಕ್ಕೆ ತಗುಲುವ ವೆಚ್ಚವನ್ನು ಪಾವತಿಸುವುದು ಹೊರೆಯಾಗಿ ಪರಿಣಮಿಸಿದೆ. ಒಂದು ಮೊಟ್ಟೆಗೆ ಸರಕಾರ 5 ರೂ.ನಂತೆ ಹಣ ಬಿಡುಗಡೆ ಮಾಡುತ್ತಿದೆ. ಈ ಮೊತ್ತ ಸಾಕಾಗುವುದಿಲ್ಲ ಎಂದುಆಯಾ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಇಲಾಖೆ ನಿರ್ದೇಶಕರು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಒಂದು ಮೊಟ್ಟೆಗೆ ಮಾರುಕಟ್ಟೆಯ ದರ ಆಧರಿಸಿ 7 ರೂ.ಪಾವತಿಸುವಂತೆ ಬೇಡಿಕೆಯಿಟ್ಟಿದ್ದಾರೆ. ಹೆಚ್ಚುವರಿ ಹಣ ನೀಡಲು ಒಪ್ಪದ ಸರಕಾರ, ಗ್ರಾಮ ಪಂಚಾಯಿತಿಗಳಿಗೆ ಲಭ್ಯವಿರುವ ತೆರಿಗೆ ಹಣದಲ್ಲಿ ಹೆಚ್ಚುವರಿ ಮೊತ್ತ ಭರಿಸಿಕೊಳ್ಳಲು ತಿಳಿಸಲಾಗಿದೆ. ರಾಮನಗರ ಜಿಲ್ಲಾ ಪಂಚಾಯಿತಿ ಮಾದರಿಯನ್ನುರಾಜ್ಯಕ್ಕೆ ಅನ್ವಯಿಸುವಂತೆ ಹೇಳಿದ ಬೆನ್ನಲ್ಲೇ ಎಲ್ಲ ಕಡೆಯೂ ಅಪಸ್ವರ ಎದ್ದಿವೆ.

ಗ್ರಾಪಂಗಳಲ್ಲಿ ಹಣವೇ ಇಲ್ಲ :

ಪಂಚಾಯಿತಿಗಳಲ್ಲಿ ವಸೂಲಿಯಾಗುವತೆರಿಗೆಯಲ್ಲಿ ಶೇ.24 ರಷ್ಟು ಮೊತ್ತ ಸರಕಾರಕ್ಕೆಸಲ್ಲಿಕೆಯಾಗುತ್ತದೆ. ಶೇ.25ರಷ್ಟನ್ನು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಮೀಸಲಿಡಲಾಗಿದೆ. ಶೇ.40 ರಷ್ಟು ಪಂಚಾಯಿತಿಸಿಬ್ಬಂದಿ ಸಂಬಳಕ್ಕೆ ಖರ್ಚಾಗುತ್ತದೆ. ಉಳಿದ ಶೇ.11 ರಷ್ಟು ಮೊತ್ತವನ್ನು ಸ್ಟೇಷನರಿ, ಶಿಷ್ಟಾಚಾರ ಪಾಲನೆ, ಕಚೇರಿ ನಿರ್ವಹಣೆ, ಮಹಾತ್ಮರ ಜಯಂತಿ, ರಸ್ತೆ, ಚರಂಡಿ ನಿರ್ವಹಣೆಗೆ ಮೀಸಲಿಡಲಾಗುತ್ತದೆ. ಅಲ್ಲಿಗೆ ಶೇ.100ರಷ್ಟುಮೊತ್ತ ಖರ್ಚಾಗುವುದರಿಂದ ಮೊಟ್ಟೆಗೆ ಎಲ್ಲಿಂದ ಹಣ ತರಬೇಕು ಎಂಬ ಪ್ರಶ್ನೆ ಗ್ರಾ.ಪಂ.ಗಳದ್ದು.

ಮೊದಲು ಸಲ್ಲಿಸಿದ ಬೇಡಿಕೆ ತಿರಸ್ಕರಿಸಲಾಗಿತ್ತು. ಇಲಾಖೆ ಮುಖ್ಯ ಕಾರ್ಯದರ್ಶಿಗಳುಮತ್ತೆ ಮಾತನಾಡಿದ್ದು, ಒಂದು ಮೊಟ್ಟೆಗೆ 6,50 ರೂ. ಕೊಡುವಂತೆ ಹಣಕಾಸು ಇಲಾಖೆಗೆಬೇಡಿಕೆ ಸಲ್ಲಿಸಲಾಗಿದೆ. ಅಲ್ಲಿವರೆಗೂ ರಾಮನಗರ ಮಾದರಿಯಲ್ಲಿ ಎಲ್ಲ ಕಡೆ ಗ್ರಾಪಂಗಳಿಂದ ಹಣ ಜೋಡಿಸಿಕೊಳ್ಳಲು ಹೇಳಲಾಗಿದೆ.-ಪೆದ್ದಪ್ಪಯ್ಯ, ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರು

ರಾಮನಗರ ಜಿಪಂ ಸಿಇಒ ಈ ಕುರಿತು ನಿರ್ಧಾರ ಕೈಗೊಂಡಿದ್ದಾರೆಹೆಚ್ಚುವರಿಯಾದ ಮೊಟ್ಟೆ ಬೆಲೆ ಪಾವತಿಸಲುಆಯಾ ಜಿಲ್ಲೆಯ ಗ್ರಾಪಂಗಳೇ ಸ್ವಂತಸಂಪನ್ಮೂಲದಿಂದ ಹಣ ನೀಡುವಂತೆ ಸೂಚನೆ ನೀಡಲಾಗಿದೆ. –ಡಾ.ಎನ್‌.ನಾಗಲಾಂಬಿಕಾ ದೇವಿ,ಅಪರ ಮುಖ್ಯ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರು

 

-ಯಮನಪ್ಪ ಪವಾರ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-maski

Maski: ಸರ್ಕಾರಿ ಕಾಮಗಾರಿಗೆ ಅಡ್ಡಿ: ವ್ಯಕ್ತಿ ಜೈಲುಪಾಲು

BowSpring-Bridge-RCH

ಕೃಷ್ಣಾ ನದಿಗೆ “ಬಿಲ್ಲಿನ ಹೆದೆ ಮಾದರಿ’ ಸೇತುವೆ; ಈ ವರ್ಷ ಸಂಚಾರಕ್ಕೆ ಮುಕ್ತ?

1-desss

Raichur; ಮನೆಯಲ್ಲಿ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು, ಪೇಂಟಿಂಗ್ ಭಸ್ಮ

7-

Raichur: ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.