404 ಸದಸ್ಯ ಸ್ಥಾನಗಳಿಗೆ 1045 ಉಮೇದುವಾರಿಕೆ


Team Udayavani, Dec 18, 2020, 5:53 PM IST

404 ಸದಸ್ಯ ಸ್ಥಾನಗಳಿಗೆ 1045 ಉಮೇದುವಾರಿಕೆ

ಮಸ್ಕಿ :  ತಾಲೂಕಿನ 21 ಗ್ರಾಪಂಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಡಿ.16ಕ್ಕೆ ನಾಮಪತ್ರ ಸಲ್ಲಿಕೆ ಪೂರ್ಣಗೊಂಡಿದೆ. ಒಟ್ಟು ತಾಲೂಕಿನ 404 ಸದಸ್ಯ ಸ್ಥಾನಗಳಿಗೆ 1045 ಜನ ನಾಮಪತ್ರ ಸಲ್ಲಿಸಿದ್ದಾರೆ.

ತಾಲೂಕಿನಲ್ಲಿ ಎರಡನೇ ಹಂತದಲ್ಲಿ ಡಿ.27ರಂದು ಮತದಾನ ನಡೆಯುತ್ತಿದ್ದು,ಡಿ.11ರಿಂದ ನಾಮಪತ್ರ ಸಲ್ಲಿಕೆಆರಂಭವಾಗಿದ್ದವು. ಡಿ.16ಕ್ಕೆ ನಾಮಪತ್ರಸಲ್ಲಿಕೆ ದಿನ ಮುಕ್ತಾಯವಾಗಿದೆ. ಚುನಾವಣೆಘೋಷಣೆಯಿಂದಲೇ ಕಾವೇರಿದ್ದ ಹಳ್ಳಿರಾಜಕೀಯಕ್ಕೆ ಈಗ ಸ್ಪಷ್ಟ ಚಿತ್ರಣ ದೊರೆತಿದೆ.ಹಲವು ಕಡೆ, ರಾಜಿ-ಸಂಧಾನ,ಮನವೊಲಿಕೆ, ಕಣಕ್ಕಿಳಿಯುವ ಬಗ್ಗೆಹಗ್ಗ-ಜಗ್ಗಾಟದ ನಡುವೆಯೇ ನಾಮ ಪತ್ರ

ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸ್ಪರ್ಧೆಬಯಸಿದ ಬಹುತೇಕ ಅಭ್ಯರ್ಥಿಗಳು ಕಣಕ್ಕೆಧುಮುಕಿದ್ದಾರೆ. ಇನ್ನು ನಾಮಪತ್ರ ವಾಪಸ್‌ ಪಡೆಯಲು ಡಿ.19ಕ್ಕೆ ಕೊನೆಯ ದಿನವಾಗಿದ್ದು,ಈ ವೇಳೆ ಕಣದಲ್ಲಿ ಉಳಿಯುವವರೆಷ್ಟು? ಹೊರ ಹೋಗುವವರೆಷ್ಟು? ಎನ್ನುವ ಚಿತ್ರಣ ಸ್ಪಷ್ಟವಾಗಲಿದೆ.

1045 ನಾಮ ಪತ್ರ: ಮಸ್ಕಿ ತಾಲೂಕಿನಲ್ಲಿ ಒಟ್ಟು 21 ಗ್ರಾಪಂಗಳಿದ್ದು, 404 ಸದಸ್ಯಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಡಿ.11 ನಾಮಪತ್ರ ಸಲ್ಲಿಕೆ ಮೊದಲ ದಿನ 7 ನಾಮಪತ್ರಸಲ್ಲಿಕೆಯಾಗಿದ್ದರೆ, ಡಿ.12ಕ್ಕೆ 11 ನಾಮಪತ್ರಗಳುಸಲ್ಲಿಕೆಯಾಗಿದ್ದವು. ಇನ್ನು ಡಿ.15ರಂದು 329ನಾಮಪತ್ರ ಸಲ್ಲಿಕೆಯಾದರೆ, ನಾಮಪತ್ರಸಲ್ಲಿಕೆಯ ಕೊನೆಯ ದಿನ ಡಿ.16ರ ಒಂದೇ ದಿನಕ್ಕೆಬರೋಬ್ಬರಿ 640 ನಾಮಪತ್ರ ಸಲ್ಲಿಕೆಯಾಗಿವೆ.ಇದರಿಂದ ಒಟ್ಟು 404 ಸ್ಥಾನಗಳಿಗೆ 1045ನಾಮಪತ್ರಗಳು ಸಲ್ಲಿಕೆಯಾದಂತಾಗಿವೆ.ಇದರಲ್ಲಿ 520 ನಾಮಪತ್ರಗಳನ್ನು ಮಹಿಳೆಯರೇಸಲ್ಲಿಸಿದ್ದರೆ, ಉಳಿದ 525 ನಾಮ ಪತ್ರಗಳು ಮಹಿಳಾ ಮತ್ತು ಪುರುಷರಹೆಸರಿನಲ್ಲಿವೆ.

ಎಸ್ಸಿಯೇ ಅಧಿಕ: ಇನ್ನು ಮೀಸಲುವಾರು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಎಸ್ಸಿ ಸ್ಥಾನಗಳಿಗೆ ಅತ್ಯ ಧಿಕ ನಾಮಪತ್ರ ಸಲ್ಲಿಕೆಯಾಗಿವೆ.ಒಟ್ಟು 280 ಪರಿಶಿಷ್ಟ ವರ್ಗದಲ್ಲಿ ನಾಮಪತ್ರ ಸಲ್ಲಿಕೆಯಾಗಿದ್ದು, ಅನುಸೂಚಿತ ಪಂಗಡದಲ್ಲಿ207, ಹಿಂದುಳಿದ ಅ ವರ್ಗ-57, ಹಿಂದುಳಿದ ಬ ವರ್ಗ-14 ನಾಮಪತ್ರಗಳು ಸಲ್ಲಿಕೆಯಾಗಿವೆ. ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆಕಾರ್ಯ ನಡೆದಿದ್ದು, ಡಿ.19ಕ್ಕೆ ನಾಮಪತ್ರ ವಾಪಸ್‌ ಪಡೆಯುವ ಕೊನೆಯ ದಿನಕ್ಕೆ ಅಖಾಡ ಸ್ಪಷ್ಟವಾಗಲಿದೆ.

23 ಸ್ಥಾನಕ್ಕೆ 108 ನಾಮಪತ್ರ :

ಗ್ರಾಪಂ ಚುನಾವಣೆ ಹಳ್ಳಿಗಳಲ್ಲಿ ಜಿದ್ದಾಜಿದ್ದಿ. 1 ಸ್ಥಾನಗಳಿಗೆ 3-4 ಜನರ ನಡುವೆ ಪೈಪೋಟಿ ಇದೆ. ಆದರೆ ಸ್ಪರ್ಧೆಯ ಪೈಪೋಟಿ ತೀವ್ರವಾಗಿದ್ದರಿಂದ ಕೆಲ ಗ್ರಾಪಂಗಳಲ್ಲಿ ನಾಮಪತ್ರಗಳ ಸಂಖ್ಯೆ ಶತಕ ದಾಟಿದೆ.ಮಟ್ಟೂರು ಗ್ರಾಪಂನ ಕೇವಲ 23 ಸ್ಥಾನಗಳಿಗೆ ಬರೋಬ್ಬರಿ 108 ನಾಮಪತ್ರ ಸಲ್ಲಿಕೆಯಾಗಿದ್ದರೆ,ಗುಡದೂರು ಗ್ರಾಪಂನಲ್ಲಿ 25 ಸದಸ್ಯ ಸ್ಥಾನಗಳಿಗೆ 92 ನಾಮಪತ್ರ ಸಲ್ಲಿಕೆಯಾಗಿವೆ. ಇನ್ನು ಕನ್ನಾಳ ಗ್ರಾಪಂನಲ್ಲಿ 20 ಸ್ಥಾನಗಳಿಗೆ 85 ನಾಮಪತ್ರ ಸಲ್ಲಿಕೆಯಾಗಿವೆ.

77 ಸ್ಥಾನಗಳಿಗೆ ನಾಮಪತ್ರವಿಲ್ಲ :

404 ಸ್ಥಾನ ಸದಸ್ಯ ಸ್ಥಾನಗಳ ಪೈಕಿ 77 ಸದಸ್ಯ ಸ್ಥಾನಗಳಿಗೆ ನಾಮಪತ್ರವೇ ಸಲ್ಲಿಕೆಯಾಗಿಲ್ಲ. 5ಎ ಕಾಲುವೆಹೋರಾಟ ತೀವ್ರವಾಗಿದ್ದರಿಂದ ಅಂಕುಶದೊಡ್ಡಿ, ಪಾಮನಕಲ್ಲೂರು,ವಟಗಲ್‌ ಹಾಗೂ ಅಮೀನಗಡ4 ಗ್ರಾಪಂಗಳ ಒಟ್ಟು 30 ಹಳ್ಳಿಗರುಚುನಾವಣೆ ಬಹಿಷ್ಕಾರ ಮಾಡಿದ್ದಾರೆಹೀಗಾಗಿ ಈ 4 ಪಂಚಾಯಿತಿಯ 77ಸ್ಥಾನಗಳಿಗೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.

 

-ಮಲ್ಲಿಕಾರ್ಜುನ ಚಿಲ್ಕರಾಗಿ

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-maski

Maski: ಸರ್ಕಾರಿ ಕಾಮಗಾರಿಗೆ ಅಡ್ಡಿ: ವ್ಯಕ್ತಿ ಜೈಲುಪಾಲು

BowSpring-Bridge-RCH

ಕೃಷ್ಣಾ ನದಿಗೆ “ಬಿಲ್ಲಿನ ಹೆದೆ ಮಾದರಿ’ ಸೇತುವೆ; ಈ ವರ್ಷ ಸಂಚಾರಕ್ಕೆ ಮುಕ್ತ?

1-desss

Raichur; ಮನೆಯಲ್ಲಿ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು, ಪೇಂಟಿಂಗ್ ಭಸ್ಮ

7-

Raichur: ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.