ಕುಂಟುತ್ತಾ ಸಾಗಿದೆ ಹೈಟೆಕ್‌ ಡ್ರೈವಿಂಗ್‌ ಟ್ರ್ಯಾಕ್‌!


Team Udayavani, Jan 16, 2022, 12:45 PM IST

11road

ರಾಯಚೂರು: ಕಲ್ಯಾಣ ಕರ್ನಾಟಕ ಭಾಗದಲ್ಲೇ 2ನೇ ಹೈಟೆಕ್‌ ಡ್ರೈವಿಂಗ್‌ ಟ್ರ್ಯಾಕ್‌ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು ವರ್ಷಗಳೇ ಕಳೆದರೂ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.

ಎಂಟು ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ನಾನಾ ವಿಘ್ನಗಳು ಎದುರಾಗುತ್ತಿದ್ದು, ಈ ವರ್ಷವಾದರೂ ಉದ್ಘಾಟನೆ ಭಾಗ್ಯ ಕಾಣುವುದೇ ನೋಡಬೇಕಿದೆ. ಸಿವಿಲ್‌ ಇಂಜಿನಿಯರ್‌ ವಿಭಾಗಕ್ಕೆ ಕಾಮಗಾರಿ ನಿರ್ವಹಣೆ ಹೊಣೆ ನೀಡಲಾಗಿದೆ.

ಕಾಮಗಾರಿಗೆ ಆರಂಭದಿಂದಲೇ ಅನೇಕ ವಿಘ್ನಗಳು ಎದುರಾಗುತ್ತಿದ್ದು, ಇಲಾಖೆ ನೀಡಿದ ಗಡುವು ಮುಗಿದರೂ ಕಾಮಗಾರಿ ಮಾತ್ರ ಅಂತಿಮ ಸ್ವರೂಪ ಪಡೆದಿಲ್ಲ. ಐದು ಎಕರೆ ಗುಡ್ಡಗಾಡು ಪ್ರದೇಶವನ್ನು ಹೈಟೆಕ್‌ ಡ್ರೈವಿಂಗ್‌ ಟ್ರ್ಯಾಕ್‌ ನಿರ್ಮಿಸಲು ಮಂಜೂರು ಮಾಡಲಾಗಿತ್ತು. ಆದರೆ, ಗುಡ್ಡವನ್ನು ಸಮತಟ್ಟು ಮಾಡಿಕೊಳ್ಳಲು ಒಂದೂವರೆ ವರ್ಷ ಕಾಲಹರಣವಾಗಿದೆ. ಅಲ್ಲದೇ, ಗುಡ್ಡದ ಸುತ್ತಲೂ ಚರಂಡಿ ವ್ಯವಸ್ಥೆ, ಭೂಮಿ ಸವಕಳಿ ಆಗದಂತೆ ತಡೆಯಲು ಬೆಟ್ಟದ ಸುತ್ತಲೂ ತಡೆಗೋಡೆ ಸೇರಿದಂತೆ ಅನೇಕ ಹೆಚ್ಚುವರಿ ಕೆಲಸಗಳು ಕಾಮಗಾರಿ ಸಮಯವನ್ನು ತಿಂದು ಹಾಕಿವೆ. ಅದಾದ ಬಳಿಕವೇ ಟ್ರ್ಯಾಕ್‌ ನಿರ್ಮಾಣ, ಕಚೇರಿ ಕಟ್ಟಡ ಸೇರಿ ಉಳಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಏತನ್ಮಧ್ಯೆ ಕೊರೊನಾ ಹಾವಳಿಯಿಂದಲೂ ಕಾಮಗಾರಿ ವೇಗಕ್ಕೆ ಕಡಿವಾಣ ಬಿದ್ದಿತ್ತು.

ಆರ್‌ಡಿಎ-ಆರ್‌ಟಿಒ ತಿಕ್ಕಾಟ

ಈಗ ಹೈಟೆಕ್‌ ಡ್ರೈವಿಂಗ್‌ ಟ್ರ್ಯಾಕ್‌ ಮಾಡುತ್ತಿರುವ ಬೆಟ್ಟದ ಪಕ್ಕದಲ್ಲಿಯೇ ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡವರಿಗಾಗಿ ಬಡಾವಣೆ ಮಾಡಲಾಗಿತ್ತು. ಆದರೆ, ಅದು ಯಶಸ್ವಿಯಾಗಿ ಅನುಷ್ಠಾನಗೊಳ್ಳದ ಕಾರಣ ಸಮಸ್ಯೆಯಾಗಿಯೇ ಉಳಿದೆ. ಈಗಲೂ ಆ ಸ್ಥಳವನ್ನು ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡುವ ಚಿಂತನೆಯಲ್ಲಿ ಆರ್‌ಡಿಎ ಇದೆ. ಆದರೆ, ಆರ್‌ಟಿಒ ಟ್ರ್ಯಾಕ್‌ಗೆ ಹೋಗಲು ಬೇಕಾದ ದಾರಿಯನ್ನು ಇದೇ ಬಡಾವಣೆ ಸ್ಥಳ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕಾರಣಕ್ಕೆ ಆರ್‌ ಡಿಎದಿಂದ ಆರ್‌ಟಿಒ ಕಚೇರಿಗೆ ನೋಟಿಸ್‌ ಕೂಡ ನೀಡಲಾಗಿತ್ತು. ಈಚೆಗೆ ಆರ್‌ಡಿಎ ಅಧ್ಯಕ್ಷರೇ ಹೋಗಿ ರಸ್ತೆ ಕಾಮಗಾರಿ ನಿಲ್ಲಿಸಿದ್ದಾರೆ. ಮತ್ತೊಮ್ಮೆ ಸರ್ವೇ ನಡೆಸಿದ ಬಳಿಕವೇ ಕೆಲಸ ಆರಂಭಿಸಬೇಕು. ನಿಮ್ಮ ಸ್ಥಳ ಬಿಟ್ಟು ಒತ್ತುವರಿ ಮಾಡಿಕೊಳ್ಳುವಂತಿಲ್ಲ ಎಂಬುದು ಆರ್‌ಡಿಎ ವಾದವಾಗಿದೆ. ಈ ಎಲ್ಲ ಕಾರಣಕ್ಕೆ ಕಾಮಗಾರಿ ಇನ್ನೆಷ್ಟು ದಿನ ಹಿಡಿಯುವುದು ನೋಡಬೇಕಿದೆ.

ಅತ್ಯಾಧುನಿಕ ತಂತ್ರಜ್ಞಾನದ ಟ್ರ್ಯಾಕ್‌

ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಯಚೂರಿನಲ್ಲಿ ಇದು ಎರಡನೇ ಹೈಟೆಕ್‌ ಟ್ರ್ಯಾಕ್‌ ಆಗಿದೆ. ಇದು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರಲಿದ್ದು, ಇಡೀ ಟ್ರ್ಯಾಕ್‌ ಸೆನ್ಸಾರ್‌ ಆಧಾರಿತವಾಗಿರಲಿದೆ. ಚಾಲನಾ ಪರೀಕ್ಷೆ ವೇಳೆ ವಾಹನ ತಡೆಗೋಡೆಗೆ ತಾಕಿದರೆ ಕಂಪ್ಯೂಟರ್‌ನಲ್ಲಿ ತಿರಸ್ಕೃತಗೊಳ್ಳಲಿದೆ. ಕಲಬುರಗಿ ಜಿಲ್ಲೆಯ ಹುಮನಾಬಾದ್‌ನಲ್ಲಿ ಕೆಎಸ್‌ಆರ್‌ ಟಿಯಿಂದ ಇಂಥ ಹೈಟೆಕ್‌ ಡ್ರೈವಿಂಗ್‌ ಟ್ರ್ಯಾಕ್‌ ನಿರ್ಮಿಸಲಾಗಿದೆ. ಇದೇ ಕಾರಣಕ್ಕೆ ಕೆಎಸ್‌ ಆರ್‌ಟಿಸಿಗೆ ಕಾಮಗಾರಿ ಹೊಣೆ ನೀಡಲಾಗಿದೆ. ಸಿವಿಲ್‌ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದ್ದು, ಆರ್‌ಡಿ ಜತೆಗೆ ಗೊಂದಲ, ಉಳಿದ ಕಾಮಗಾರಿಗಳನ್ನು ಮುಗಿಸಿ ಟ್ರ್ಯಾಕ್‌ ಲೋಕಾರ್ಪಣೆಗೊಳ್ಳಲು ಇನ್ನೆಷ್ಟು ದಿನ ಕಾಯ ಬೇಕೋ ಎಂಬುದು ಸಾರ್ವಜನಿಕರ ಪ್ರಶ್ನೆ.

ಸಿದ್ರಾಂಪುರ ಮಾರ್ಗದಲ್ಲಿರುವ ಬೆಟ್ಟದ ಮೇಲೆ ಹೈಟೆಕ್‌ ಡ್ರೈವಿಂಗ್‌ ಟ್ರ್ಯಾಕ್‌ ನಿರ್ಮಾಣ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ. ಆರ್‌ಟಿಒ, ಆರ್‌ಡಿಎ ನಡುವೆ ಸ್ವಲ್ಪ ಸ್ಥಳದ ಸಮಸ್ಯೆಯಾಗಿದ್ದು, ಬಗೆಹರಿಸುವುದಾಗಿ ತಿಳಿಸಿದ್ದಾರೆ. ಉಳಿದಂತೆ ನಮ್ಮ ಕೆಲಸ ಮುಗಿದಿದ್ದು, ಅಂತಿಮ ಸ್ಪರ್ಶ ನೀಡಬೇಕಿದೆ. -ಅಣ್ಣಪ್ಪ, ಎಇಇ, ಕೆಎಸ್‌ಆರ್‌ಟಿಸಿ ಸಿದ್ರಾಂಪುರ

ಲೇಔಟ್‌ ಸ್ಥಳದಲ್ಲೇ ಆರ್‌ಟಿಒದವರು ಡ್ರೈವಿಂಗ್‌ ಟ್ರ್ಯಾಕ್‌ ಗೆ ಹೋಗಲು ರಸ್ತೆ ನಿರ್ಮಿಸಿದ ಶಂಕೆ ಇದೆ. ಹೀಗಾಗಿ ಕಾಮಗಾರಿ ನಿಲ್ಲಿಸುವಂತೆ ತಿಳಿಸಲಾಗಿದೆ. ಮತ್ತೂಮ್ಮೆ ಸರ್ವೇ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಯಾಪಚೆಟ್ಟಿ ಗೋಪಾಲರೆಡ್ಡಿ ಆರ್‌ಡಿಎ ಅಧ್ಯಕ್ಷ ಹೈಟೆಕ್‌ ಡ್ರೈವಿಂಗ್‌ ಟ್ರ್ಯಾಕ್‌ ನಿರ್ಮಾಣದ ಹೊಣೆ ಕೆಎಸ್‌ಆರ್‌ಟಿಸಿಯವರಿಗೆ ನೀಡಲಾಗಿದೆ. ನಾವು ನೀಡಿದ ಕಾಲಾವಧಿಯಲ್ಲಿ ಕೆಲಸ ಆಗಿಲ್ಲ. ಅದಕ್ಕೆ ಕೆಲವೊಂದು ಅಡೆ ತಡೆಗಳಾಗಿದ್ದು, ನಮ್ಮಿಂದ ಯಾವುದೇ ಸಮಸ್ಯೆಯಾಗಿಲ್ಲ. ಕಾಮಗಾರಿ ವಿಳಂಬವಾದರೂ ಅನುದಾನದಲ್ಲಿ ವ್ಯತ್ಯಯವಾಗಿಲ್ಲ. ಆದಷ್ಟು ಬೇಗ ಹಸ್ತಾಂತರ ಮಾಡುವ ಸಾಧ್ಯತೆ ಇದೆ. -ವಿನಯಾ, ಆರ್‌ಟಿಒ, ರಾಯಚೂರು

-ಸಿದ್ಧಯ್ಯಸ್ವಾಮಿ ಕುಕನೂರು

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-maski

Maski: ಸರ್ಕಾರಿ ಕಾಮಗಾರಿಗೆ ಅಡ್ಡಿ: ವ್ಯಕ್ತಿ ಜೈಲುಪಾಲು

BowSpring-Bridge-RCH

ಕೃಷ್ಣಾ ನದಿಗೆ “ಬಿಲ್ಲಿನ ಹೆದೆ ಮಾದರಿ’ ಸೇತುವೆ; ಈ ವರ್ಷ ಸಂಚಾರಕ್ಕೆ ಮುಕ್ತ?

1-desss

Raichur; ಮನೆಯಲ್ಲಿ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು, ಪೇಂಟಿಂಗ್ ಭಸ್ಮ

7-

Raichur: ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.