![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, May 10, 2021, 11:17 AM IST
ರಾಯಚೂರು: ಕಟ್ಟುನಿಟ್ಟಿನ ಜನತಾ ಕರ್ಫ್ಯೂ ಜಾರಿಯಾಗುತ್ತಿದ್ದಂತೆ ಬೆಳಗ್ಗೆ 10 ಗಂಟೆಯ ನಂತರ ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದರು.
ನೇತಾಜಿ ನಗರ ಪೋಲಿಸ್ ಠಾಣೆಯ ಪಿಎಸ್ ಐ ಬಸವರಾಜ್ ನೇತೃತ್ವದಲ್ಲಿ ನಗರದ ಪಟೇಲ್ ರಸ್ತೆಯಲ್ಲಿ ಓಡಾಡುತ್ತಿದ್ದ 40ಕ್ಕೂ ಹೆಚ್ಚು ಬೈಕ್ ಜಪ್ತಿ ಮಾಡಲಾಯಿತು. ಅದರ ಜತೆಗೆ 8 ಕಾರುಗಳನ್ನು ವಶಕ್ಕೆ ಪಡೆಯಲಾಯಿತು.
ಇದನ್ನೂ ಓದಿ:ನಾವು ಹೇಳಿದ್ದು ಜನಹಿತದ ಲಾಕ್ ಡೌನ್, ಆದರೆ ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ: ಎಚ್ ಡಿಕೆ
ವಾಹನಗಳ ಮಾಲೀಕರಿಗೆ ದಂಡ ವಿಧಿಸಲಾಯಿತು. ಈ ವೇಳೆ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಹರಿಬಾಬು ಲಾಠಿ ಹಿಡಿದು ಬಿಸಿ ಮುಟ್ಟಿಸಿದರು. ಬೆಳಿಗ್ಗೆಯಿಂದ ಫ್ರೀಯಾಗಿ ಓಡಾಡುತ್ತಿದ್ದ ಜನರಿಗೆ, 10 ಗಂಟೆಯ ನಂತರ ಪೊಲೀಸರು ಫುಲ್ ಚಾರ್ಜ್ ತೆಗೆದುಕೊಂಡರು.
You seem to have an Ad Blocker on.
To continue reading, please turn it off or whitelist Udayavani.