![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 8, 2024, 4:41 PM IST
ರಾಯಚೂರು: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣಕ್ಕೆ ವಿಶೇಷ ಕಾರ್ಯಾಚರಣೆ ನಡೆಯುತ್ತಿರುವ ಅಬಕಾರಿ ಪೊಲೀಸರು ಅಕ್ರಮ ಸೇಂದಿ ಮಾರುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ.
ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, 65 ಸಾವಿರ ಮೌಲ್ಯದ ಸಿಎಚ್ ಪೌಡರ್ ಜಪ್ತಿ ಮಾಡಿಕೊಂಡಿದ್ದಾರೆ. ಅರ್ಬಾಜ್, ಜಲಾಲ್ ಬಂಧಿತರು. ಮುಖ್ಯ ಆರೋಪಿ ವಾಹಿದ್ ಪತ್ನಿ ಮಕ್ಕಳೊಂದಿಗೆ ಪರಾರಿಯಾಗಿದ್ದಾನೆ.
ನಗರದ 26ನೇ ವಾರ್ಡ್ ಮಡ್ಡಿಪೇಟೆ ಸೇರಿದಂತೆ ವಿವಿಧೆಡೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಗದ್ವಾಲ್ ರಸ್ತೆಯ ಮನೆಯೊಂದರಲ್ಲಿ ಒಂದು ಸಾವಿರ ಲೀಟರ್ ಸೇಂದಿ ಸಂಗ್ರಹಿಸಿದ್ದು, ಪೊಲೀಸರು ಜಪ್ತಿ ಮಾಡಿಕೊಂಡು ನಾಶಪಡಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.