Sindhanur: ಗುಂಪುಗಳ ನಡುವೆ ಘರ್ಷಣೆ; ಓರ್ವ ಸಾವು
ಆರೋಪಿಗಳ ಬಂಧನ
Team Udayavani, Sep 8, 2024, 2:46 PM IST
ಸಿಂಧನೂರು: ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಗಲಾಟೆ ಒಬ್ಬರ ಸಾವಿನಲ್ಲಿ ಕೊನೆಗೊಂಡ ಘಟನೆ ತಾಲೂಕಿನ 3ನೇ ಮೈಲ್ ಕ್ಯಾಂಪಿನಲ್ಲಿ ಸೆ.7ರ ಶನಿವಾರ ರಾತ್ರಿ ನಡೆದಿದೆ.
ವೀರಬಸಪ್ಪ (55) ಮೃತಪಟ್ಟ ವ್ಯಕ್ತಿ.
3ನೇ ಮೈಲ್ ಕ್ಯಾಂಪ್ ನಲ್ಲಿ ಗಣೇಶ ಪ್ರತಿಷ್ಠಾಪನೆ ನಂತರ ಸಂಜೆ ವಿಸರ್ಜನೆ ವೇಳೆ ಮೆರವಣಿಗೆ ಮನೆಯೊಂದರ ಬಳಿ ಕುಣಿತದೊಂದಿಗೆ ಆರಂಭವಾಗಿದೆ. ಮೆರವಣಿಗೆ ನಿಲ್ಲಿಸಿ ಕುಣಿತ ಮಾಡುವಂತೆ, ಮುಂದಕ್ಕೆ ಹೋಗುವಂತೆ ಎರಡು ಗುಂಪಿನ ನಡುವೆ ಜಗಳವಾಗಿದೆ.
ಈ ವೇಳೆ ಬಸವರಾಜ ಎಂಬವರ ಮನೆಗೆ ಹೋಗಿ ಆತನನ್ನು ಹೊರಗೆ ಕರೆಯಲು ಮುಂದಾದಾಗ ಜಗಳ ಬಿಡಿಸಲು ಹೋಗಿದ್ದ ವೀರಬಸಪ್ಪ ಎನ್ನುವ ವ್ಯಕ್ತಿಗೆ ಪೆಟ್ಟು ಬಿದ್ದಿದ್ದರಿಂದ ರಾತ್ರಿ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಈ ಕುರಿತು ಸಿಂಧನೂರು ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.