ಕುಡಿಯುವ ನೀರಿಗಾಗಿ ಜನರ ತತ್ವಾರ

101 ಆರ್‌ಒ ಪ್ಲಾಂಟ್‌ ಚಾಲ್ತಿಯಲ್ಲಿ26 ಘಟಕಗಳ ದುರಸ್ತಿಗೆ ಅಧಿಕಾರಿಗಳ ನಿರ್ಲಕ್ಷ್ಯ -ಆರೋಪ

Team Udayavani, Mar 8, 2020, 7:31 PM IST

8-March-07

ಸಿಂಧನೂರು: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ನಿರ್ವಹಣೆ ಇಲ್ಲದೆ ಸಮಸ್ಯೆಗಳಿಗೆ ಕಾರಣವಾಗಿವೆ.

2014ರಲ್ಲಿ ವಿವಿಧ ಏಜೆನ್ಸಿ ಮೂಲಕ ಗ್ರಾಮಗಳಲ್ಲಿ ಸರಕಾರದಿಂದ ಸ್ಥಾಪಿಸಲಾಗಿರುವ ಶುದ್ಧ ನೀರಿನ ಘಟಕಗಳು ಬರೀ ನೆಪಕ್ಕೆ ಎನ್ನುವಂತಾಗಿದೆ. ಕಾಣಬಹುದಾಗಿದೆ. ಇನ್ನೂ ಕೆಲ ಗ್ರಾಮಗಳಲ್ಲಿ ಕ್ಲೋರೈಡ್‌, ಪ್ಲೋರೈಡ್‌ ಅಂಶವುಳ್ಳ ನೀರು ಸೇವಿಸುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಕೆಲ ಗ್ರಾಮನಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ವೃದ್ಧರಿಗೆ ಮೈ ಕೈ ನೋವು, ತಲೆ ನೋವುಗಳು ಕಾಣಿಸಿಕೊಳ್ಳುತ್ತಿದೆ. ತಾಲೂಕಿನಲ್ಲಿ ಒಟ್ಟು 170 ಗ್ರಾಮಗಳಲ್ಲಿ 136 ಆರ್‌ಒ ಪ್ಲಾಂಟ್‌ ನಿರ್ಮಿಸಲಾಗಿದೆ. ಇದರಲ್ಲಿ 101 ಆರ್‌ಒ ಪ್ಲಾಂಟ್‌ ಚಾಲ್ತಿಯಲ್ಲಿವೆ. 26 ಘಟಕಗಳು ದುರಸ್ತಿಯಲ್ಲಿವೆ. ಜಿಪಂ ಖಾಸಗಿ ಕಂಪನಿಗಳಿಗೆ ನಿರ್ವಹಣೆಗೆ ನೀಡಿದೆ.

ಕಳೆದ 5-6 ವರ್ಷಗಳಿಂದ ನಾಲ್ಕೈದು ಕಂಪನಿಗಳು ಬದಲಾವಣೆಯಾದರೂ ಗ್ರಾಮಗಳಲ್ಲಿ ಆರ್‌ಒ ಪ್ಲಾಂಟ್‌ಗಳು ಮಾತ್ರ ದುರಸ್ತಿಯಲ್ಲಿರುವುದನ್ನು ಕಾಣಬಹುದಾಗಿದೆ. ಈಗ ಎಂ.ಎಸ್‌. ಸ್ಟೇಟ್‌ಪಿಕ್‌ ಕಂಪನಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದೆ. ಕಳೆದ ವರ್ಷದಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಟೆಂಡರ್‌ ಕರೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಇರುವ ಆರ್‌ಒ ಪ್ಲಾಂಟ್‌ ಗಳಿಗೆ ತಲಾ 10ಲಕ್ಷ ರೂ. ವೆಚ್ಚ ಮಾಡಲಾಗಿದೆ. ಇನ್ನೂ ಮುಖ್ಯವಾದ ಗ್ರಾಮಗಳಾದ ಹಟ್ಟಿ, ಲಕ್ಷ್ಮೀಕ್ಯಾಂಪ್‌, ಸಾಸಲಮರಿಕ್ಯಾಂಪ್‌, ಮಲ್ಕಾಪುರ, ಅಂಬಾಮಠ ಸೇರಿದಂತೆ ಇತರ ಗ್ರಾಮಿಣ ಪ್ರದೇಶಗಳಲ್ಲಿ ಆರ್‌ಒ ಪ್ಲಾಂಟ್‌ಗಳನ್ನು ನಿರ್ಮಿಸುವಂತೆ ಗ್ರಾಮಸ್ಥರ ಬೇಡಿಕೆ ಇದ್ದರೂ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳದೆ ಮೌನವಾಗಿದ್ದಾರೆ. ಇನ್ನು ಶಾಸಕ ವೆಂಕಟರಾವ್‌ ನಾಡಗೌಡ ಅವರ ಸ್ವಗ್ರಾಮ ಜವಳಗೇರಾ ಹಾಗೂ ಸಾಲಗುಂದದಲ್ಲಿ ಹೆಚ್ಚುವರಿಯಾಗಿ ಆರ್‌ಒ ಪ್ಲಾಂಟ್‌ ನೀಡುವಂತೆ ಜನರು ಒತ್ತಾಯಿಸಿದ್ದರೂ ಯಾವುದೆ ಪ್ರಯೋಜನವಾಗಿಲ್ಲ. ಜಿಪಂ 16 ಗ್ರಾಪಂಗಳಿಗೆ ಮಾತ್ರ ಆರ್‌ಒ ಪ್ಲಾಂಟ್‌ ನಿರ್ವಹಣೆ ಜವಾಬ್ದಾರಿ ವಹಿಸಿದೆ. ಇನ್ನುಳಿದ ಆರ್‌ಒ ಪ್ಲಾಂಟ್‌ಗಳನ್ನು ಗ್ರಾಪಂಗೆ ವಹಿಸದೆ ಇರುವುದು ಸಮಸ್ಯೆಯಾಗಿದೆ ಎಂದು ತಿಳಿದು ಬಂದಿದೆ.

7ಮೈಲ್‌ ಕ್ಯಾಂಪ್‌, ತುರ್ವಿಕಟ್ಟಿ ಕ್ಯಾಂಪ್‌, ಕೆ. ಹೊಸಳ್ಳಿ, ತಿಮ್ಮಾಪುರ ಸೇರಿದಂತೆ ಇತರ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಲಾದ ಆರ್‌ಒ ಪ್ಲಾಂಟ್‌ಗಳು ಸ್ಥಗಿತಗೊಂಡಿವೆ. ಬೇಸಿಗೆ ಆರಂಭಕ್ಕೂ ಮುಂಚೆ ಕುಡಿಯುವ ನೀರಿನ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ಪಿಡಿಒಗಳೊಂದಿಗೆ ಶಾಸಕರಾಗಲಿ ಅಥವಾ ತಾಲೂಕು ಮಟ್ಟದ ಅಧಿಕಾರಿಗಳಾಗಲಿ ಚರ್ಚಿಸಿಲ್ಲ. ಹಾಗಾಗಿ ಜನರು ಶುದ್ಧ ಕುಡಿಯುವ ನೀರಿನಿಂದ ವಂಚಿತವಾಗುವಂತಾಗಿದೆ.

ಈಗಾಗಲೇ ಬೇಸಿಗೆ ಪ್ರಾರಂಭವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕುಡಿಯುವ ನೀರಿನ ಘಟಕಗಳ ಬಗ್ಗೆ ಕಾಳಜಿ ವಹಿಸಿ ಗ್ರಾಮೀಣ ಜನರ ಆರೋಗ್ಯದ ಬಗ್ಗೆ ನಿಗಾ ವಹಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಆರ್‌ಒ ಪ್ಲಾಂಟ್‌ಗಳು ಆರಂಭವಾದ ಕಾರ್ಯನಿರ್ವಾಹಕ ಅಧಿಕಾರಿ ಸಿಂಧನೂರು ದಿನದಿಂದ ಇಲ್ಲಿಯವರೆಗೂ ಕೆ.ಹೊಸಳ್ಳಿ ಹಾಗೂ 7ಮೈಲ್‌ ಕ್ಯಾಂಪ್‌ ಜನರು ಶುದ್ಧ ಕುಡಿಯುವ ನೀರನ್ನೆ ಕಂಡಿಲ್ಲ. ಅಧಿಕಾರಿಗಳ ಬೇಜವ್ದಾರಿಯಿಂದಾಗಿ ಈ ಕಾರ್ಯ ವಿಫಲವಾಗಿದೆ.
ರವಿಗೌಡ ಮಲ್ಲದಗುಡ್ಡ,
ರೈತ ಯುವ ಮುಖಂಡ

ಈಗಾಗಲೇ ಟೆಂಡರ್‌ ಕರೆದರೂ ಯಾರು ಬರುತ್ತಿಲ್ಲ. ಕೆಲವು ಕಡೆ ನೀರಿನ ಘಟಕಗಳು
ಕಾರ್ಯನಿರ್ವಹಿಸದೇ ಬಂದ್‌ ಆಗಿವೆ. ಈಗಾಗಲೇ 16 ಆರ್‌ಒ ಪ್ಲಾಂಟ್‌ಗಳನ್ನು ಆಯಾ ಗ್ರಾಪಂಗಳಿಗೆ ನೀಡಲಾಗಿದೆ ಶೀಘ್ರದಲ್ಲೆ ಎಲ್ಲ ಕೆಲಸ ಮುಗಿಸುತ್ತೇವೆ.
ಶ್ರೀನಿವಾಸ,
ಎಇಇ ಸಿಂಧನೂರು

ಇನ್ನೂ ಕೆಲವು ಕಡೆ ಆರ್‌ಒ ಪ್ಲಾಂಟ್‌ಗಳು ಬೇಕು ಎಂಬುದು ಗ್ರಾಮಸ್ಥರ ಒತ್ತಾಯವಿದೆ. ಈಗಾಗಲೇ ಇರುವ ಆರ್‌ಒ ಪ್ಲಾಂಟ್‌ ಗಳಲ್ಲಿ ಸಮಸ್ಯೆವಿದೆ. ಯಾವುದೇ ರೀತಿಯಲ್ಲಿ ಸಾರ್ವಜನಿಕರಿಗೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜವಾಬ್ದಾರಿಯನ್ನು ಇಲಾಖೆಯಿಂದ ನೋಡಿಕೊಳ್ಳಲಾಗುತ್ತದೆ.
ಬಾಬು ರಾಠೊಡ, ತಾಪಂ
ಕಾರ್ಯನಿರ್ವಾಹಕ ಅಧಿಕಾರಿ ಸಿಂಧನೂರು

ಚಂದ್ರಶೇಖರ್‌ ಯರದಿಹಾಳ

ಟಾಪ್ ನ್ಯೂಸ್

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-maski

Maski: ಸರ್ಕಾರಿ ಕಾಮಗಾರಿಗೆ ಅಡ್ಡಿ: ವ್ಯಕ್ತಿ ಜೈಲುಪಾಲು

BowSpring-Bridge-RCH

ಕೃಷ್ಣಾ ನದಿಗೆ “ಬಿಲ್ಲಿನ ಹೆದೆ ಮಾದರಿ’ ಸೇತುವೆ; ಈ ವರ್ಷ ಸಂಚಾರಕ್ಕೆ ಮುಕ್ತ?

1-desss

Raichur; ಮನೆಯಲ್ಲಿ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು, ಪೇಂಟಿಂಗ್ ಭಸ್ಮ

7-

Raichur: ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.