![LK Advani: ಬಿಜೆಪಿ ಹಿರಿಯ ನಾಯಕ ಎಲ್ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/07/advani-415x240.jpg)
“ಜೋಳ ನೋಂದಣಿ ಸಮಸ್ಯೆ ಪರಿಹರಿಸುವೆ”
Team Udayavani, Feb 10, 2022, 1:01 PM IST
![15corn](https://www.udayavani.com/wp-content/uploads/2022/02/15corn-620x348.jpg)
ಸಿಂಧನೂರು: ಜೋಳ ಖರೀದಿಗೆ ನೋಂದಣಿ ಕೆಲಸ ಆರಂಭಿಸಿದ್ದು, ತಾಂತ್ರಿಕ ತೊಡಕುಗಳಿದ್ದರೆ ಅವುಗಳನ್ನು ಪರಿಹರಿಸಲು ಸೂಚನೆ ನೀಡುವೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ನಗರದ 40ನೇ ಉಪಕಾಲುವೆ ಮಾರ್ಗದ ರಸ್ತೆ ಸುಧಾರಣೆ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂಗಾರು-ಮುಂಗಾರು ಬೆಳೆ ನಮೂದು ಮಾಡುವಾಗ ಆಗಿರುವ ಸಮಸ್ಯೆ ನಿವಾರಿಸಲು ತಿಳಿಸುವೆ. ಯಾರೇ ನೋಂದಣಿ ಮಾಡಲು ಹೋದರೂ ಅವರಿಗೆ ಸ್ಪಂದಿಸಬೇಕು. ನೋಂದಣಿಗೆ ಬ್ರೇಕ್ ಬಿದ್ದಿದ್ದರೆ, ತಕ್ಷಣವೇ ಪರಿಹರಿಸಲು ತಿಳಿಸುತ್ತೇನೆ. ಪ್ರತಿಯೊಬ್ಬ ರೈತನಿಂದ ಕೇವಲ 20 ಕ್ವಿಂಟಲ್ ಜೋಳ ಮಾತ್ರ ಖರೀದಿ ಮಾಡಬೇಕು ಎಂಬ ಷರತ್ತು ತೆಗೆಯುವ ವಿಷಯದಲ್ಲಿ ಈಗಾಗಲೇ ಸರಕಾರದ ಗಮನ ಸೆಳೆದಿರುವೆ. ವಿಧಾನ ಮಂಡಲ ಅಧಿವೇಶನದಲ್ಲಿ ರೈತರ ಪರವಾಗಿ ಧ್ವನಿ ಎತ್ತುತ್ತೇನೆ ಎಂದರು.
3 ಕೋಟಿ ರೂ. ವೆಚ್ಚದಲ್ಲಿ ಕೆಲಸ
40ನೇ ಉಪಕಾಲುವೆ ರಸ್ತೆ ಸುಧಾರಣೆ ಬಹುದಿನಗಳ ಬೇಡಿಕೆಯಾಗಿತ್ತು. 7 ಮೀಟರ್ ರಸ್ತೆ ಸಿಸಿ ಕಾಮಗಾರಿಯಾಗಲಿದ್ದು, ಎರಡು ಬದಿಯಲ್ಲಿ 10 ಅಡಿ ಅಂತರ ಬಿಟ್ಟು ಕೆಲಸ ಮಾಡಲು ತಿಳಿಸುವೆ. ಈಗಾಗಲೇ ಒತ್ತುವರಿ ತೆರವುಗೊಳಿಸುವುದಕ್ಕಾಗಿ ಗುರುತು ಹಾಕಲಾಗಿದೆ. ಕಾಲುವೆ ಎಡ-ಬಲದಲ್ಲಿನ 99 ಅಡಿ ರಸ್ತೆಯನ್ನು ಸ್ವಯಂ ಪ್ರೇರಿತವಾಗಿ ತೆರವು ಮಾಡಿಕೊಳ್ಳಲು ಮನವಿ ಮಾಡುತ್ತೇನೆ. ಇಲ್ಲವಾದರೆ, ಇಲಾಖೆ ಅಧಿಕಾರಿಗಳು ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಉಪಾಧ್ಯಕ್ಷ ಮುರ್ತುಜಾ ಹುಸೇನ್, ಜೆಡಿಎಸ್ ಮುಖ್ಯಸಂಚಾಲಕ ಬಿ.ಹರ್ಷ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ವಿಎಸ್ ಎಸ್ಎನ್ ಮಾಜಿ ಅಧ್ಯಕ್ಷ ಅಮರೇಶಪ್ಪ ಮೈಲಾರ್, ಅಲ್ತಾಪ್ ಸಾಹುಕಾರ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಂ.ಡಿ. ನದಿಮುಲ್ಲಾ, ತಾಲೂಕು ನಗರ ಘಟಕದ ಅಧ್ಯಕ್ಷ ಕೆ.ವೆಂಕಟೇಶ್, ನಗರ ಯುವ ಘಟಕದ ಅಧ್ಯಕ್ಷ ಅಜಯ್ ದಾಸರಿ, ನಗರಸಭೆ ಸದಸ್ಯರಾದ ಚಂದ್ರು ಮೈಲಾರ್, ದಾಸರಿ ಸತ್ಯನಾರಾಯಣ, ಮುನಿರ್ಪಾಷಾ, ವೆಂಕೋಬ ಕಲ್ಲೂರು, ವೆಂಕಟೇಶ್ ನಂಜಲದಿನ್ನಿ ಸೇರಿದಂತೆ ಅನೇಕರು ಇದ್ದರು.
ಈ ವಿವಾದ ಯಾಕೆ ಗೊತ್ತಾಗುತ್ತಿಲ್ಲ?
ಹಿಜಾಬ್ ವಿವಾದವನ್ನು ಯಾಕೆ ಎತ್ತಿದ್ದಾರೋ ಗೊತ್ತಿಲ್ಲ. ವಿಷಯ ಕೋರ್ಟ್ ಮೆಟ್ಟಿಲೇರಿದೆ. ಅದು ಇತ್ಯರ್ಥವಾಗುವ ತನಕ ಎಲ್ಲರೂ ಶಾಂತಿಯುತವಾಗಿ ವರ್ತಿಸಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ಮನವಿ ಮಾಡಿದರು. ಕಾಲೇಜುಗಳಿಗೆ ಡ್ರೆಸ್ ಕೋಡ್ ಇಲ್ಲ. ಗಲಾಟೆ ಪ್ರಾರಂಭವಾಗಿ 3 ದಿನ ರಜೆ ಘೋಷಣೆ ಮಾಡಲಾಗಿದೆ. ಎಲ್ಲ ಸಮಾಜದ ಮುಖಂಡರಿಗೆ ಮನವಿ ಮಾಡುತ್ತೇನೆ. ಇಂತಹ ವಿಷಯದಲ್ಲಿ ರಾಜಕೀಯ ಬೇಡ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ಟಾಪ್ ನ್ಯೂಸ್
![LK Advani: ಬಿಜೆಪಿ ಹಿರಿಯ ನಾಯಕ ಎಲ್ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/07/advani-415x240.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![LK Advani: ಬಿಜೆಪಿ ಹಿರಿಯ ನಾಯಕ ಎಲ್ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/07/advani-150x87.jpg)
LK Advani: ಬಿಜೆಪಿ ಹಿರಿಯ ನಾಯಕ ಎಲ್ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು
![5-byndoor](https://www.udayavani.com/wp-content/uploads/2024/07/5-byndoor-150x90.jpg)
Heavy Rain: ಬೈಂದೂರು ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ
![Vijayapura: ಕೃಷ್ಣಾ ನದಿ ತೆಪ್ಪ ದುರಂತ… ರಫೀಕ್ ಶವ ಪತ್ತೆ, ರಕ್ಷಣಾ ಕಾರ್ಯಾಚರಣೆ ಮುಕ್ತಾಯ](https://www.udayavani.com/wp-content/uploads/2024/07/teppa-150x89.jpg)
Vijayapura: ಕೃಷ್ಣಾ ನದಿ ತೆಪ್ಪ ದುರಂತ… ರಫೀಕ್ ಶವ ಪತ್ತೆ, ರಕ್ಷಣಾ ಕಾರ್ಯಾಚರಣೆ ಮುಕ್ತಾಯ
![4-yadagiri](https://www.udayavani.com/wp-content/uploads/2024/07/4-yadagiri-150x90.jpg)
Narayanapur: ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು
![T20 World Cup ಗೆದ್ದು ತಾಯ್ನಾಡಿಗೆ ಮರಳಿದ ಟೀಮ್ ಇಂಡಿಯಾ… ಅದ್ಧೂರಿ ಸ್ವಾಗತ](https://www.udayavani.com/wp-content/uploads/2024/07/india-150x84.jpg)
T20 World Cup ಗೆದ್ದು ತಾಯ್ನಾಡಿಗೆ ಮರಳಿದ ಟೀಮ್ ಇಂಡಿಯಾ… ಅದ್ಧೂರಿ ಸ್ವಾಗತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.