ಕೋವಿಡ್ ಪರೀಕ್ಷೆಗೆ ಅಲೆದಾಟ
Team Udayavani, Jan 5, 2021, 1:30 PM IST
ಸಿರವಾರ: ಕೋವಿಡ್-19ನಿಂದಾಗಿ ಅನೇಕ ತಿಂಗಳುಗಳಿಂದಬಂದಾಗಿದ್ದ ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು, ಕೊರೊನಾಪರೀಕ್ಷೆ ಕಡ್ಡಾಯವಾಗಿರುವುದರಿಂದ ವಿದ್ಯಾರ್ಥಿಗಳು ಆಸ್ಪತ್ರೆಗೆ ಅಲೆದಾಡುವಂತಾಗಿದೆ.
ರಾಜ್ಯ ಸರ್ಕಾರವು ಪೂರ್ವ ತಯಾರಿಯೊಂದಿಗೆ ಶಾಲಾ-ಕಾಲೇಜುಗಳನ್ನು ಆರಂಭಿಸಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿ ಆದೇಶಿಸಿರುವುದು ಸಮಸ್ಯೆಗೆ ಕಾರಣವಾಗಿದೆ. ಪಟ್ಟಣದಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಕ್ಕೆ 50 ಜನರಿಗೆ ಮಾತ್ರ ಕೋವಿಡ್ ಪರೀಕ್ಷೆ ಮಾಡುತ್ತಿದ್ದು, ತಾಲೂಕಿನ ವಿದ್ಯಾರ್ಥಿಗಳು, ಶಿಕ್ಷಕರು ದಿನನಿತ್ಯ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ.
ನೋಂದಣಿ ಸಮಸ್ಯೆ: ಬೆಳಗ್ಗೆ ಆಸ್ಪತ್ರೆಯಲ್ಲಿ ಆನ್ಲೈನ್ ದಾಖಲಾತಿ ಇರುವುದರಿಂದಅನೇಕ ವಿದ್ಯಾರ್ಥಿಗಳುಮೊಬೈಲ್ ಇಲ್ಲದೆ ಆಸ್ಪತ್ರೆಯಿಂದವಾಪಸ್ಸಾಗುತ್ತಿದ್ದಾರೆ. ಕೆಲವರುನೆಟ್ವರ್ಕ್ ಸಮಸ್ಯೆಯಿಂದ ಮೊಬೈಲ್ಗೆ ಒಟಿಪಿ ಬರದೇ ಚಿಂತೆಗೆ ಈಡಾಗುವಂತಾಗಿದೆ.
ನನ್ನ ಮಗನಿಗೆ ಕೊವೀಡ್ಪರೀಕ್ಷೆ ಮಾಡಿಸಲು 2 ದಿನದಿಂದ ಬರುತ್ತಿದ್ದು, ಹೆಸರುನೋಂದಾಯಿಸದೆ ವಾಪಸ್ ಹೋಗುತ್ತಿದ್ದೇವೆ. ಸರ್ಕಾರಇನ್ನು ಹೆಚ್ಚು ಜನರಿಗೆ ಪರೀಕ್ಷೆಮಾಡುವ ವ್ಯವಸ್ಥೆ ಮಾಡಬೇಕು. ಪ್ರಭುಲಿಂಗ, ವಿದ್ಯಾರ್ಥಿಯ ತಂದೆ
ಕುಡಿವ ನೀರು ಕಾಮಗಾರಿಗೆ ಚಾಲನೆ :
ರಾಯಚೂರು: ತಾಲ್ಲೂಕಿನ ಗುಂಜಳ್ಳಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಿಂದ1.45 ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮದಲ್ಲಿ ಪೈಪ್ಲೈನ್ ಹಾಗೂ ಪ್ರತಿ ಮನೆಗೂ ನಳಗಳ ಸಂಪರ್ಕ ಕಲ್ಪಿಸುವಕಾಮಗಾರಿಗಳಿಗೆ ಗ್ರಾಮೀಣ ಶಾಸಕಬಸನಗೌಡ ದದ್ದಲ್ ಸೋಮವಾರ ಚಾಲನೆ ನೀಡಿದರು.
ಇದೇ ವೇಳೆ ಹಂಚಿನಾಳ ಗ್ರಾಮದಲ್ಲಿ 14 ವೆಚ್ಚದಲ್ಲಿ ಜಲಜೀವನ್ಮಿಷನ್ ಯೋಜನೆಯಡಿ ನಳಗಳಸಂಪರ್ಕ ಕಲ್ಪಿಸುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಶಾಸಕಬಸನಗೌಡ ದದ್ದಲ್ ಅವರು, ಮುಂದಿನ ದಿನಗಳಲ್ಲಿ ಎಲ್ಲಮನೆಗಳಿಗೂ ಶಾಶ್ವತ ಕುಡಿಯುವನೀರು ಸರಬರಾಜು ಮಾಡಲಾಗುತ್ತದೆ.ಸಾರ್ವಜನಿಕರು ಅನಾವಶ್ಯಕವಾಗಿನೀರನ್ನು ವ್ಯರ್ಥವಾಗಿ ಹರಿಸದಂತೆ ಮಿತವಾಗಿ ಬಳಕೆ ಮಾಡಬೇಕು ಎಂದು ಕರೆ ನೀಡಿದರು.
ಒಂದು ಕೋಟಿ ವೆಚ್ಚದಲ್ಲಿಆರೋಗ್ಯ ಇಲಾಖೆಯಿಂದನಿರ್ಮಿಸಿದ ಪ್ರಾಥಮಿಕ ಆರೋಗ್ಯಕೇಂದ್ರದ ವಸತಿಗೃಹವನ್ನು ಶಾಸಕ ಬಸನಗೌಡ ಉದ್ಘಾಟಿಸಿದರು.ಮುಖಂಡರಾದ ಶರತಚಂದ್ರರೆಡ್ಡಿ, ಹರಿಶ್ಚಂದ್ರರೆಡ್ಡಿ, ಶ್ರೀನಿವಾಸ, ದಶರಥ ರೆಡ್ಡಿ, ಮಲ್ಲಿಕಾರ್ಜುನಗೌಡ,ಜನಾರ್ದನಗೌಡ, ಕಿಶೋರ ಕುಮಾರ, ಕರಿಯಪ್ಪ ಹಾಗೂ ಗ್ರಾಪಂ ನೂತನ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur ಡಿ.ರಾಂಪುರದಲ್ಲಿ ಭಾರೀ ಗಾತ್ರದ ಮೊಸಳೆ ಸೆರೆ
Raichur: ಬಿಜೆಪಿಯವರು ಮೈಮೇಲೆ ಬಂದಂತೆ ಆಡುತ್ತಿದ್ದಾರೆ: ಸಚಿವ ಎನ್.ಎಸ್.ಭೋಸರಾಜು
Cabinet Meeting: ಬೀದರ್, ರಾಯಚೂರು ನಗರಸಭೆ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿಗೆ
Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್ಪಿಗೆ ಕರೆ
Medical,Nursing ಕಾಲೇಜು ಹೆಚ್ಚು ಶುಲ್ಕ ಪಡೆದರೆ ಕ್ರಮ: ಡಾ|ಶರಣ ಪ್ರಕಾಶ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.