ಓದುಗರನ್ನು ಯೋಚನೆಗೆ ಹಚ್ಚುವ ಸಾಹಿತ್ಯ ರಚನೆ ಆಗಲಿ

ಕೆ. ಗಿರಿಜಾ ಅವರ 'ತತ್ರಾಣಿ' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿದ್ಯಾಲಯದ ಪ್ರಾಧ್ಯಾಪಕ ಡಾ| ವಿಕ್ರಮ ವಿಸಾಜಿ ಅಭಿಮತ

Team Udayavani, Aug 26, 2019, 4:08 PM IST

26-Agust-34

ರಾಯಚೂರು: ನಗರದ ಕನ್ನಡ ಭವನದಲ್ಲಿ ಕೆ.ಗಿರಿಜಾ ರಾಜಶೇಖರ ಅವರ ತತ್ರಾಣಿ ಕೃತಿ ಲೋಕಾರ್ಪಣೆ ಮಾಡಲಾಯಿತು.

ರಾಯಚೂರು: ಬರಹದಲ್ಲಿನ ಸೂಕ್ಷ್ಮತೆ ಓದುಗರನ್ನು ಸೆಳೆಯಬೇಕು. ಯೋಚನೆಗೆ ಹಚ್ಚುವ ಸಾಹಿತ್ಯ ರಚಿಸುವತ್ತ ಯುವ ಬರಹರಾರರು ಮುಂದಾಗಬೇಕು ಎಂದು ಕಲಬುರಗಿ ಕರ್ನಾಟಕ ಕೇಂದ್ರೀಯ ವಿದ್ಯಾಲಯದ ಪ್ರಾಧ್ಯಾಪಕ ಡಾ| ವಿಕ್ರಮ ವಿಸಾಜಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ನಡೆದ ಕೆ.ಗಿರಿಜಾ ರಾಜಶೇಖರ ಅವರ ತತ್ರಾಣಿ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಬರಹ ಓದಿದಾಗ ಅದು ಅಧಿಕೃತ, ಪ್ರಾಮಾಣಿಕತೆಯಿಂದ ಕೂಡಿದೆ ಎನಿಸಬೇಕು. ಅಂಥ ಕೃತಿಗಳಿಗೆ ಮಾತ್ರ ಮಹತ್ವ ಜಾಸ್ತಿ. ಜಾತಿ, ಧರ್ಮ, ಗುಂಪು, ಪ್ರದೇಶ ಮೀರಿ ಯೋಚಿಸುವ ಬರಹಗಾರನಿಂದ ಮಾತ್ರ ಉತ್ತಮ ಕೃತಿಗಳ ನಿರೀಕ್ಷೆ ಸಾಧ್ಯ ಎಂದರು.

ಯುವ ಬರಹಗಾರರು ತಮಗರಿವಿಲ್ಲದೆಯೇ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅದರಿಂದ ಮುಕ್ತಗೊಳ್ಳುವ ದಾರಿ ಕಂಡುಕೊಳ್ಳದ ವಿನಃ ಬರವಣಿಗೆ ಅಸಾಧ್ಯ. ಒಳನೋಟಗಳನ್ನು ನೀಡುವ ಸಾಹಿತಿ ಪರಿಪೂರ್ಣ ಬರಹಗಾರನಾಗಬಲ್ಲ. ಸಾಮಾಜಿಕ, ರಾಜಕೀಯ ಧಾರ್ಮಿಕದಂಥ ಸೂಕ್ಷ ್ಮ ತೆಗಳು ಬರಹದಲ್ಲಿ ದಾಖಲಾಗುತ್ತವೆ. ಲೇಖಕರಿಗೆ ಒಳ್ಳೆಯ ಕಾಲದ ಕಲ್ಪನೆ ಇರಬೇಕು. ಕೃತಿಗಳಲ್ಲಿ ಅದು ಕಂಡು ಬರಬೇಕು. ಭಯದಿಂದ ಕೂಡಿದ ಬರವಣಿಗೆಯಿಂದ ಸಮಾಜಕ್ಕೆ ಸಂದೇಶ ನೀಡಲು ಸಾಧ್ಯವಿಲ್ಲ. ದಿಟ್ಟತನ ತೋರಿ ಬರೆದಿದ್ದಕ್ಕೆ ಇಂದಿಗೂ ನಾವು ವಚನಗಳನ್ನು ಅಧ್ಯಯನ ಮಾಡುತ್ತೇವೆ ಎಂದರು.

ನೆಲದ ವಾಸ್ತವಗಳಿಗೆ, ಬಿಕ್ಕಟ್ಟುಗಳಿಗೆ ಸ್ಪಂದಿಸಿ ಬರೆಯುವ ಕೃತಿಗಳು ಸಾಹಿತ್ಯ ವಲಯದಲ್ಲಿ ದಾಖಲಾಗಲೇಬೇಕು. ಗ್ರಾಮೀಣ ಬದುಕಿನ ಮುಖಗಳ ಅನಾವರಣ, ಜಾಗತೀಕರಣ ಹೇಗೆ ವಿರೋಧಿಸಬೇಕು ಎಂಬುದನ್ನು ಬರಹಗಾರ ದಾಖಲಿಸಬೇಕು. ಎಡಪಂಥೀಯ ಹೋರಾಟಕ್ಕೆ ನೆಲೆ ನೀಡಿದ ಜಿಲ್ಲೆ ರಾಯಚೂರು. ಶೋಷಿತರ ಪರ ಧ್ವನಿಯಾಗಿ ಅನೇಕ ಕೃತಿಗಳು ಹೊರಬಂದಿದ್ದು, ತತ್ರಾಣಿ ಕೃತಿಯೂ ಜಾತಿ, ಧರ್ಮ, ಮೌಡ್ಯತೆಯ ವಿರುದ್ಧ ಮಾನವೀಯ ಗುಣಗಳನ್ನು ಪ್ರಸ್ತುತ ಪಡಿಸಿದೆ ಎಂದರು.

ಸಾಹಿತಿ ಪವನಕುಮಾರ್‌ ಗುಂಡೂರಾವ್‌ ಕೃತಿ ಪರಿಚಯಿಸಿದರು. ಕಸಾಪ ಜಿಲ್ಲಾಧ್ಯಕ್ಷ ಬಸವಪ್ರಭು ಪಾಟೀಲ ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಕೆ.ಗಿರಿಜಾ ರಾಜಶೇಖರ, ಸಾಹಿತಿ ದಸ್ತಗೀರಸಾಬ್‌ ದಿನ್ನಿ, ಭೀಮಣ್ಣ ಇಟಗಿ, ಉರುಕುಂದಪ್ಪ ನಾಯಕ ಇತರರಿದ್ದರು. ಕಸಾಪ ಗೌರವ ಕಾರ್ಯದರ್ಶಿ ಜೆ.ಎಲ್. ಈರಣ್ಣ ಸ್ವಾಗತಿಸಿದರು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.