Forest Department: ಅರಣ್ಯ ಇಲಾಖೆ ಸುಪರ್ದಿಗೆ 120 ಎಕರೆ ಭೂಮಿ


Team Udayavani, Jan 1, 2024, 1:15 PM IST

Forest Department: ಅರಣ್ಯ ಇಲಾಖೆ ಸುಪರ್ದಿಗೆ 120 ಎಕರೆ ಭೂಮಿ

ಕನಕಪುರ: ತನ್ನ ವ್ಯಾಪ್ತಿ ಮೀರಿ ಕಂದಾಯ ಇಲಾಖೆ ಮಂಜೂರು ಮಾಡಿದ್ದ ನೂರಾರು ಕೋಟಿ ಬೆಲೆ ಬಾಳುವ ನೂರು ಎಕರೆಗೂ ಹೆಚ್ಚು ಪ್ರಾದೇಶಿಕ ಅರಣ್ಯ ಭೂಮಿಯನ್ನು ಒತ್ತುವರಿ ಎಂದು ಪರಿ ಗಣಿಸಿ ಅರಣ್ಯ ಇಲಾಖೆ ತನ್ನ ಸುಪರ್ದಿಗೆ ಪಡೆದುಕೊಂಡಿದೆ.

ಹಾರೋಹಳ್ಳಿ ತಾಲೂಕಿನ ಮರಳ ವಾಡಿ ಹೋಬ ಳಿಯ ಸಿಡಿ ದೇವರಹಳ್ಳಿ ಸರ್ವೆ ನಂ. 104ರಲ್ಲಿ ದುರ್ಗ ದಕಲ್ಲು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿ ಯಲ್ಲಿ ಕಂದಾಯ ಇಲಾಖೆ ಉಪ ವಿಭಾಗಾಧಿ ಕಾರಿಗಳು ಮಂಜೂರು ಮಾಡಿದ್ದ ಹಾಗೂ ಸ್ಥಳೀಯರು ಒತ್ತುವರಿ ಮಾಡಿ ಕೊಂಡಿದ್ದ ಸುಮಾರು 120 ಎಕರೆಯಷ್ಟು ಭೂಮಿ ಯನ್ನು ಸರ್ಕಾರದ ಆದೇಶದ ಮೇರೆಗೆ ಕಾನೂನಾ ತ್ಮಕವಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಳ ನೇತೃತ್ವದಲ್ಲಿ ಒತ್ತುವರಿ ತೆರವುಗೊಳಿಸಿ ಪ್ರಾದೇಶಿಕ ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ.

ಮೈಸೂರು ಸರ್ಕಾರದ ಅವದಿಯ 1919ರಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಗೆ 336 ಎಕರೆ ನೋಟಿಫಿಕೇಷನ್‌ ಆಗಿತ್ತು, ಪ್ರಾದೇಶಿಕ ಅರಣ್ಯ ಇಲಾಖೆ 336 ಎಕರೆಯನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತ್ತು, ಅರಣ್ಯ ಇಲಾಖೆಯಲ್ಲಿರುವ ಭೂಮಿಯನ್ನು ರೈತರಿಗೆ ಮಂಜೂರು ಮಾಡಿ ಕೊಡಲು ಅರಣ್ಯ ಇಲಾಖೆಗೂ ಅವಕಾಶ ಇಲ್ಲ. ಆದರೆ, ಕಂದಾಯ ಇಲಾಖೆ ತನ್ನ ವ್ಯಾಪ್ತಿಯನ್ನು ಮೀರಿ 1985 ರಲ್ಲಿ ಅಂದಿನ ಉಪ ವಿಭಾಗಾಧಿಕಾರಿಗಳು ಪ್ರಾದೇಶಿಕ ಅರಣ್ಯ ಇಲಾಖೆಗೆ ನೋಟಿಫಿಕೇಶನ್‌ ಆಗಿದ್ದ 336 ಎಕರೆ ಪೈಕಿ ನೂರು ಎಕ ರೆಗೂ ಹೆಚ್ಚು ಭೂಮಿಯನ್ನು 90ಕ್ಕೂ ಹೆಚ್ಚು ರೈತರಿಗೆ ಗ್ರಾಂಟ್‌ ಮಾಡಿ ಕೊಟ್ಟಿದ್ದರು.

ಸಣ್ಣ ಹಿಡುವಳಿದಾರರನ್ನು ಒಕ್ಕಲೆಬ್ಬಿಸಬೇಡಿ: ಮೂರು ಎಕರೆ ಇರುವ ಸಣ್ಣ ಹಿಡುವಳಿದಾರರನ್ನು ಒಕ್ಕಲೆಬ್ಬಿಸ ಬೇಡಿ. ದೊಡ್ಡ ಹಿಡುವಳಿ ದಾರರ ಸುಪರ್ದಿ ಯಲ್ಲಿ ರುವ ಭೂಮಿಯನ್ನು ಕಾನೂನಾತ್ಮಕವಾಗಿ ತೆರವು ಗೊಳಿಸಿ ಎಂದು ಸರ್ಕಾರ ಆದೇಶ ಮಾಡಿತ್ತು. ಕೆಲವು ಸಣ್ಣ ರೈತರು ಈಗಲೂ ಉಳುಮೆ ಮಾಡಿ ಕೊಂಡು ಜೀವನ ಮಾಡುತ್ತಿದ್ದಾರೆ. ಆದರೆ, ಜೀವನೋ ಪಾಯಕ್ಕಾಗಿ ಮಂಜೂರು ಮಾಡಿದ್ದ ಈ ಭೂಮಿ ಯನ್ನು ಮಾರಾಟ ಮಾಡಿಕೊಳ್ಳಲು ಅವಕಾಶವಿಲ್ಲ ಆದರೂ ಭೂಮಿ ಮಂಜೂರಾಗಿದ್ದ 90 ರೈತರ ಪೈಕಿ ಬಹುತೇಕ ರೈತರು ಒಬ್ಬ ವ್ಯಕ್ತಿಗೆ 80 ಎಕರೆ, ಮತ್ತೋಬ್ಬ ವ್ಯಕ್ತಿಗೆ 20 ಎಕರೆ, 15 ಎಕರೆ, 6 ಎಕರೆಯಷ್ಟು ಭೂಮಿ ಯನ್ನು ಮಾರಾಟ ಮಾಡಿಕೊಂಡಿದ್ದರು ಇವರೆಲ್ಲರೂ ದೊಡ್ಡ ಹಿಡುವಳಿ ದಾರರು ಮತ್ತು ಒತ್ತುವರಿ ಭೂಮಿ ಎಂದು ಸರ್ಕಾರದ ಆದೇಶದಂತೆ ಅರಣ್ಯ ಇಲಾಖೆ ಪರಿಗಣಿಸಿದೆ.

ಪ್ರಾದೇಶಿಕ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿರುವುದು ಕಾಡುಪ್ರಾಣಿಗಳಿಗೂ ಒಂದು ರೀತಿಯ ಅನುಕೂಲವಾದಂತಾಗಿದೆ ತಾಲೂಕಿನಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿ ಸಾಕಷ್ಟು ಬೆಳೆ ಹಾನಿ, ಜೀವಾನಿಯು ನಡೆಯುತ್ತಲೇ ಇದೆ. ಪ್ರಾದೇಶಿಕ ಅರಣ್ಯ ಇಲಾಖೆಗೆ ನೂರು ಎಕರೆಗೂ ಹೆಚ್ಚು ಭೂಮಿ ಸೇರ್ಪಡೆಯಾಗಿರುವುದು ಈ ಜಾಗದಲ್ಲಿ ಕಾಡು ಪ್ರಾಣಿಗಳು ಯಾವುದೇ ಅಡೆತಡೆ ಇಲ್ಲದೆ ಸಂಚರಿಸಲು ಅನುಕೂಲವಾದಂತಾಗಿದೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್‌, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ದಾಳೇಶ್‌, ಉಪ ವಲಯ ಅರಣ್ಯ ಅಧಿಕಾರಿ ರಮೇಶ್‌, ಯಂಕುಂಚಿ, ಚಂದ್ರನಾಯಕ್‌, ಮಣಿ, ಪುಷ್ಪಲತಾ, ಅರಣ್ಯ ಗಸ್ತು ಪಾಲಕರಾದ ಶಿವರಾಜು, ಚಂದ್ರ, ನರಸಿಂಹ, ಲೋಕೇಶ್‌ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಅರಣ್ಯ ಇಲಾಖೆ ಭೂಮಿ ರಕ್ಷಣೆಗೆ ಕ್ರಮ : ಎಸಿಎಫ್ ಗಣೇಶ್‌ ನೇತೃತ್ವದಲ್ಲಿ ಆರ್‌ಎಫ್ಒ ದಾಳೇಶ್‌ ಹಾಗೂ ಸಿಬ್ಬಂದಿ ತೆರವು ಕಾರ್ಯಾ ಚರಣೆ ಕೈಗೊಂಡಿದ್ದರು. ಕಳೆದ ಮೂರು ದಿನಗಳಿಂದ ಒತ್ತುವರಿ ಕಾರ್ಯಾಚರಣೆ ಕೈಗೊಂಡಿ ರುವ ಅರಣ್ಯ ಇಲಾಖೆ ಅಧಿಕಾರಿಗಳು ಹಂತ ಹಂತವಾಗಿ 120ಎಕರೆಯಷ್ಟು ಭೂಮಿಯನ್ನು ಜೆಸಿಬಿ ಮೂಲಕ ತೆರವು ಮಾಡಿ ಗಡಿ ಗುರುತಿಸಿದೆ. ಒತ್ತುವರಿಯಾಗಿದ್ದ ಭೂಮಿ ಮತ್ತೆ ಒತ್ತುವರಿ ಯಾಗ ದಂತೆ ಅರಣ್ಯ ಇಲಾಖೆ ಕ್ರಮಗಳನ್ನು ಕೈಗೊಂಡಿದೆ. ಒತ್ತುವರಿ ತೆರವು ಮಾಡಿರುವ ಗಡಿಯಲ್ಲಿ ಈಗಾ ಗಲೇ ಟ್ರಂಚ್‌ ನಿರ್ಮಾಣ ಮಾಡುವ ಕಾರ್ಯ ಬರದಿಂದ ಸಾಗಿದೆ. ಆ ಜಾಗದಲ್ಲಿ ಮುಂದಿನ ಮುಂಗಾರು ಮಳೆ ಬೀಳುತ್ತಿದ್ದಂತೆ ಮರ ಗಿಡಗಳನ್ನು ಬೆಳೆಸಿ ಅರಣ್ಯ ಇಲಾಖೆ ಭೂಮಿಯ ರಕ್ಷಣೆ ಮಾಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಿದೆ.

ತೆರವು ಕಾರ್ಯಾಚರಣೆ: ಸರ್ಕಾರದ ಆದೇಶದಂತೆ ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನ್ಯಾಯಾಲಯದಲ್ಲಿ ಪ್ರಾದೇಶಿಕ ಅರಣ್ಯ ಭೂಮಿಯನ್ನು ಖರೀದಿಸಿದ್ದ 3ಎಕರೆಗೂ ಹೆಚ್ಚು ಭೂಮಿ ಇರುವ ದೊಡ್ಡ ಹಿಡುವಳಿದಾರರ ವಿಚಾರಣೆ ನಡೆಸಿ ಕಾನೂನಾತ್ಮಕವಾಗಿ ಒತ್ತುವರಿ ಎಂದು ಪರಿಗಣಿಸಿತ್ತು. ಸಿಸಿಎಫ್ ನ್ಯಾಯಾಲಯದಲ್ಲಿ ಕೆಲವರು ಮೇಲ್ಮನವಿ ಸಲ್ಲಿಸಿದರು. ಅಲ್ಲಿಯು ಸಹ ಅರಣ್ಯ ಇಲಾಖ

ಸರ್ಕಾರದ ಆದೇಶದಂತೆ 3 ಎಕರೆ ಒಳಪಟ್ಟಿರುವ ರೈತರನ್ನು ತೆರವು ಮಾಡಿಲ್ಲ, ಒತ್ತುವರಿ ಮಾಡಿಕೊಂಡಿದ್ದ ದೊಡ್ಡ ಹಿಡುವಳಿದಾರರಿಗೆ ಕಾನೂನಾತ್ಮಕವಾಗಿ ಎಲ್ಲ ಅವಕಾಶಗಳನ್ನು ಕೊಟ್ಟು, ಅರಣ್ಯ ಇಲಾಖೆ ಕೋರ್ಟ್‌ ಆದೇಶದಂತೆ 120 ಎಕರೆಯಷ್ಟು ಭೂಮಿಯನ್ನು ಒತು ವರಿ ತೆರವು ಮಾಡಿದ್ದೇವೆ. ಅರಣ್ಯ ಭೂಮಿ ಸಂರಕ್ಷಣೆ ಇಲಾಖೆ ಜವಬ್ದಾರಿ ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. – ದಾಳೇಶ್‌, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕನಕಪುರ

– ಬಿ.ಟಿ.ಉಮೇಶ್‌ ಬಾಣಗಹಳ್ಳಿ

ಟಾಪ್ ನ್ಯೂಸ್

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Kambala

Kambala; ಬೆಂಗಳೂರು ಕಂಬಳ ಈ ಬಾರಿ ಅನುಮಾನ

yahia-Sinwar

Terrorist Organization: ಹಮಾಸ್‌ ಉಗ್ರ ನಾಯಕ ಯಾಹ್ಯಾ ಸಿನ್ವರ್‌ ಹತ್ಯೆ

1-horoscope

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಗೌರವ ಹಾಗೂ ಆದಾಯ ವೃದ್ಧಿ

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್‌?

Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್‌?

NDA-Meet

NDA CMs Meet: ರಾಷ್ಟ್ರದ ಅಭಿವೃದ್ಧಿಗೆ ಎನ್‌ಡಿಎ ಬದ್ಧ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BY Election: ಚನ್ನಪಟ್ಟಣ ಜೆಡಿಎಸ್‌ಗೇ ಉಳಿಸಿಕೊಳ್ಳಲು ತೀರ್ಮಾನ? ಮೈತ್ರಿ ಅಭ್ಯರ್ಥಿ ಜಿಜ್ಞಾಸೆ

Channapatna: ಜೆಡಿಎಸ್‌ಗೇ ಉಳಿಸಿಕೊಳ್ಳಲು ತೀರ್ಮಾನ? ಮೈತ್ರಿ ಅಭ್ಯರ್ಥಿ ಜಿಜ್ಞಾಸೆ

Channapatna ಗರಿಗೆದರಿದ ʼಕೈʼ ಕಸರತ್ತು; ಡಿಕೆ ಸುರೇಶ್‌ ಪರವಾಗಿ ಎಂ.ಸಿ.ಅಶ್ವಥ್ ಚಂಡಿಕಾಯಾಗ

1-yog

Channapatna By Election; ಮೈತ್ರಿ ಅಭ್ಯರ್ಥಿ ನಾನೆ: ಸಿ.ಪಿ.ಯೋಗೇಶ್ವರ್ ವಿಶ್ವಾಸದ ನುಡಿ

1-bb-ele

Channapatna By Election; 3 ಸಾವಿರ ಮಂದಿಗೆ ಸಿದ್ದ ಮಾಡಿದ್ದ ಬಿರಿಯಾನಿ ವಶಕ್ಕೆ

Channapatana: ಮೈತ್ರಿ ಮುರಿಯಲು ರೆಡಿಯಾದ ಸಿ.ಪಿ.ಯೋಗೇಶ್ವರ್‌!

Channapatana: ಮೈತ್ರಿ ಮುರಿಯಲು ರೆಡಿಯಾದ ಸಿ.ಪಿ.ಯೋಗೇಶ್ವರ್‌!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Kambala

Kambala; ಬೆಂಗಳೂರು ಕಂಬಳ ಈ ಬಾರಿ ಅನುಮಾನ

yahia-Sinwar

Terrorist Organization: ಹಮಾಸ್‌ ಉಗ್ರ ನಾಯಕ ಯಾಹ್ಯಾ ಸಿನ್ವರ್‌ ಹತ್ಯೆ

1-horoscope

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಗೌರವ ಹಾಗೂ ಆದಾಯ ವೃದ್ಧಿ

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.