![1-sdsa-dasd](https://www.udayavani.com/wp-content/uploads/2024/07/1-sdsa-dasd-1-415x239.jpg)
ಫೇಸ್ಬುಕ್ ಸುಂದರಿ ಮೋಹಕ್ಕೆ 41ಲಕ್ಷ ಕಳಕೊಂಡ ಯುವಕ!
ಅಪರಿಚಿತ ಮೊಬೈಲ್ನಿಂದ ಈತನದ್ದೇ ಅಶ್ಲೀಲ ಫೋಟೋ ರವಾನಿಸಿ ಹಣ ಪಡೆದು ವಂಚನೆ
Team Udayavani, Aug 1, 2023, 9:12 PM IST
![ಫೇಸ್ಬುಕ್ ಸುಂದರಿ ಮೋಹಕ್ಕೆ 41ಲಕ್ಷ ಕಳಕೊಂಡ ಯುವಕ!](https://www.udayavani.com/wp-content/uploads/2023/08/fac-620x349.jpg)
ರಾಮನಗರ: ಫೇಸ್ಬುಕ್ ಸುಂದರಿಯ ಮೋಹಕ್ಕೆ ಸಿಲುಕಿದ ಯುವಕ 41 ಲಕ್ಷ ರೂ. ಹಣವನ್ನು ಕಳೆದುಕೊಂಡಿರುವ ಪ್ರಕರಣ ಇದೀಗ ಜಿಲ್ಲಾ ಸಿಇಎನ್ ಠಾಣೆ ಮೆಟ್ಟಿಲೇರಿದೆ.
6 ತಿಂಗಳ ಹಿಂದೆ ಜಿಲ್ಲೆಯ ಯುವಕನೊಬ್ಬ “ಗೀತಾಸೆಕ್ಸಿ’ ಎಂಬ ಫೇಸ್ಬುಕ್ ಖಾತೆ ಸುಂದರ ಯುವತಿಯ ಫೋಟೋ ನೋಡಿ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಬಳಿಕ ಆಕೆಯಿಂದ ಫೇಸ್ಬುಕ್ ಪೇಜ್ನಲ್ಲಿದ್ದ ಯುವತಿ ಮತ್ತು ಈತನ ನಡುವೆ ಆನ್ಲೈನ್ ಚಾಟಿಂಗ್, ವಿಡಿಯೋಕಾಲ್ ಮೂಲಕ ಸಂಭಾಷಣೆ ನಡೆದಿದೆ. ಅಪರಿಚಿತ ಫೇಸ್ಬುಕ್ ಖಾತೆಯಿಂದ ನಿನಗೆ ಯಾವ ಹುಡುಗಿ ಬೇಕೋ ಆಯ್ಕೆಮಾಡಿಕೋ ಎಂದು ಕೆಲ ಹುಡುಗಿಯರ ಫೋಟೋವನ್ನು ಕಳುಹಿಸಿದ್ದಾರೆ.
ಯುವತಿಯನ್ನು ಆಯ್ಕೆ ಮಾಡಿಕೊಂಡು 800 ರೂ. ಹಣವನ್ನು ಫೋನ್ ಪೇ ಮೂಲಕ ಕಳುಹಿಸಿದ್ದಾನೆ.
ಇದಾದ ಕೆಲ ದಿನಗಳ ಬಳಿಕ ಈತನ ಮೊಬೈಲ್ ಫೋನ್ನ ವ್ಯಾಟ್ಸಪ್ ಖಾತೆಗೆ ಅಪರಿಚಿತ ದೂರವಾಣಿ ಸಂಖ್ಯೆಯಿಂದ ಈತನದ್ದೇ ಅಶ್ಲೀಲ ಫೋಟೋವೊಂದನ್ನು ಕಳುಹಿಸಿ ಕಳೆದ 6 ತಿಂಗಳ ಅವಧಿಯಲ್ಲಿ ಫೋನ್ ಪೇ ಮೂಲಕ 41 ಲಕ್ಷ ರೂ. ಹಣವನ್ನು ಪಡೆದು ವಂಚಿಸಿದ್ದಾರೆ.
ಈ ಸಂಬಂಧ ಜಿಲ್ಲಾ ಸಿಇಎನ್ ಠಾಣೆಗೆ ದೂರು ದಾಖಲಿಸಿರುವ ಯುವಕ, ನನ್ನ ಫೇಸ್ ಬುಕ್ ಪೇಜ್ನಲ್ಲಿನ ಫೋಟೋವನ್ನು ಎಡಿಟ್ ಮಾಡಿ ನನಗೆ ಬೆದರಿಸಿ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾನೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ವಂಚಕಿ ಪತ್ತೆಗೆ ಬಲೆ ಬೀಸಿದ್ದಾರೆ.
ಟಾಪ್ ನ್ಯೂಸ್
![1-sdsa-dasd](https://www.udayavani.com/wp-content/uploads/2024/07/1-sdsa-dasd-1-415x239.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Channapatna Bypoll; I am the candidate of alliance party…: What did CP Yogeshwar say?](https://www.udayavani.com/wp-content/uploads/2024/07/channapatna-150x83.jpg)
Channapatna Bypoll; ಮೈತ್ರಿ ಪಕ್ಷದ ಅಭ್ಯರ್ಥಿ ನಾನೇ…: ಸಿ.ಪಿ ಯೋಗೇಶ್ವರ್ ಹೇಳಿದ್ದೇನು?
![Magadi; A bear attacked a man on his way to the farm](https://www.udayavani.com/wp-content/uploads/2024/07/bear-150x83.jpg)
Magadi; ಜಮೀನಿಗೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ; ಗಂಭೀರ ಗಾಯ
![DK-Shivakumar](https://www.udayavani.com/wp-content/uploads/2024/07/DK-Shivakumar-150x90.jpg)
Chennapattana ನನ್ನ ನಾಯಕತ್ವದಲ್ಲೇ ಬೆಂಗಳೂರಿಗೆ ಸೇರಲಿದೆ: ಡಿಕೆಶಿ
![JDS-BJP ನಾಳೆ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಹೆಸರು ಅಖೈರು?](https://www.udayavani.com/wp-content/uploads/2024/07/bjp-jds-150x82.jpg)
JDS-BJP ನಾಳೆ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಹೆಸರು ಅಖೈರು?
![DK Shivakumar ಚೇರ್ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ](https://www.udayavani.com/wp-content/uploads/2024/07/dk-dd-150x86.jpg)
DK Shivakumar ಚೇರ್ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.