ಬಮೂಲ್ ಚುನಾವಣೆ: ಜೆಡಿಎಸ್‌ನಿಂದ ನಾಗರಾಜ್‌ ಕಣಕ್ಕೆ

ಬಮೂಲ್ ನಿರ್ದೇಶಕ ಸ್ಥಾನಕ್ಕೆ ಮೇ 12ರಂದು ನಡೆಯುವ ಚುನಾವಣೆ

Team Udayavani, Apr 30, 2019, 3:52 PM IST

ramanagar-2-tdy..

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜಶೇಖರ್‌ ಮಾತನಾಡಿದರು.

ರಾಮನಗರ: ಮೇ 12ರಂದು ನಡೆಯುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ (ಬಮೂಲ್) ನಿರ್ದೇಶಕ ಸ್ಥಾನ ಚುನಾವಣೆಗೆ ರಾಮನಗರ ಕ್ಷೇತ್ರದಿಂದ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಪಿ.ನಾಗರಾಜು ಅವರನ್ನು ಕಣಕ್ಕಿಳಿಸಿದ್ದು, ಎಂಪಿಸಿಎಸ್‌ ಅಧ್ಯಕ್ಷರು ಅವರಿಗೆ ಬೆಂಬಲ ನೀಡಬೇಕು ಎಂದು ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ರಾಜಶೇಖರ್‌ ಮನವಿ ಮಾಡಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ. ದೇವೇ ಗೌಡ, ಸಿಎಂ ಕುಮಾರಸ್ವಾಮಿ, ಶಾಸಕಿ ಅನಿತಾ ಈಗಾಗಲೇ ಪಿ.ನಾಗರಾಜು ಅವರ ಸ್ಪರ್ಧೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಎಂದರು.

2 ಬಾರಿ ಅವಿರೋಧ ಆಯ್ಕೆ: ಪಿ.ನಾಗರಾಜು ಅವರು ಇದು 5ನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಎರಡು ಬಾರಿ ಅವಿರೋಧವಾಗಿ ಆಯ್ಕೆಯಾ ಗಿದ್ದಾರೆ. ಕಳೆದ ನಾಲ್ಕು ಅವಧಿಯಲ್ಲಿ ಹೈನುಗಾ ರಿಕೆಯ ಅಭಿವೃದ್ಧಿಗೆ ಮತ್ತು ಹೈನುಗಾರ ಕುಟುಂ ಬಗಳಿಗೆ ಆರ್ಥಿಕವಾಗಿ ಸಬಲರಾಗುವಲ್ಲಿ ಶ್ರಮಿಸಿದ್ದಾರೆ. ಅವರ ಕಾರ್ಯ ವೈಖರಿ, ಕ್ರಿಯಾ ಶೀಲತೆಯನ್ನು ಜನಸಾಮಾನ್ಯರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಮೆಚ್ಚಿಕೊಂಡಿದ್ದಾರೆ ಎಂದರು. ಹಾಲು ಸಹಕಾರ ಕ್ಷೇತ್ರಕ್ಕೆ ಅವರ ಸೇವೆ ಇನ್ನೂ ಅಗತ್ಯವಿದೆ. ಹೀಗಾಗಿ ಎಲ್ಲಾ ಡೇರಿಗಳ ಅಧ್ಯಕ್ಷರು ಪಿ.ನಾಗರಾಜು ಅವರನ್ನು ಬಮೂಲ್ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಆರೋಪ ನಿರಾಧಾರ: ರಾಮನಗರ ಕ್ಷೇತ್ರ ದಿಂದ ನಿರ್ದೇಶಕ ಸ್ಥಾನದ ಚುನಾವಣೆಗೆ ಕರಡು ಮತದಾರರ ಪಟ್ಟಿಯಲ್ಲಿ ವಿವಿಧ ಕಾರಣಗಳಿಗೆ 74 ಎಂಪಿಸಿಎಸ್‌ ಅಧ್ಯಕ್ಷರ ಮತ ದಾನಕ್ಕೆ ಅನರ್ಹರು ಎಂದು ಘೋಷಿಸಲಾಗಿತ್ತು. ಮತದಾನದಿಂದ ವಂಚಿತವಾಗಿರುವ ಸಂಘದ ಅಧ್ಯಕ್ಷರಿಗೆ ಆಗಿರುವ ಅನ್ಯಾಯವನ್ನು ನಾಗರಾಜ್‌ ಮಾರ್ಗದರ್ಶನದಲ್ಲಿ ಚಿಕ್ಕಕುಂಟನಹಳ್ಳಿ ಎಂಪಿಸಿಎಸ್‌ ಅಧ್ಯಕ್ಷ ಮುನಿಸ್ವಾಮಯ್ಯ ಸೇರಿದಂತೆ 58 ಸಂಘಗಳ‌ ಅಧ್ಯಕ್ಷರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ನ್ಯಾಯಾಧೀಶ ಎಸ್‌.ಎನ್‌.ಸತ್ಯನಾರಾಯಣ ಅರ್ಜಿ ವಿಚಾರಣೆ ನಡೆಸಿ ಮಧ್ಯಂತರ ಆದೇಶದ ಮೂಲಕ ಎಲ್ಲಾ 58 ಸಂಘಗಳ ಅಧ್ಯಕ್ಷರಿಗೂ ಮತದಾನಕ್ಕೆ ಅವಕಾಶ ನೀಡಿದ್ದಾರೆ.

159 ಸಂಘದ ಅಧ್ಯಕ್ಷರಿಗೆ ಅವಕಾಶ: ಆದರೆ ಈ ವಿಚಾರದಲ್ಲಿ ಬಿಡದಿ ಹೋಬಳಿ ರಾಮನಹಳ್ಳಿ ಎಂಪಿಸಿಎಸ್‌ನ ಅಧ್ಯಕ್ಷ ಆರ್‌.ಎ. ಗೋಪಾಲ್ ಹಾಗೂ ಇಟ್ಟಮಡು ಎಂಪಿಸಿಎಸ್‌ನ ಮಾಜಿ ಕಾರ್ಯದರ್ಶಿ ಎನ್‌.ಪುಟ್ಟಪ್ಪ ಅವರು ಪಿ.ನಾಗರಾಜು ಅವರ ವಿರುದ್ಧ ಸಲ್ಲದ ಆರೋಪ ಮಾಡಿದ್ದಾರೆ. ಸಂಘಗಳ ಅಧ್ಯಕ್ಷರ ವಕಾಲತ್ತಿಗೆ ಸಹಿ ಹಾಕಿಸಿಕೊಂಡಿದ್ದರು, ನ್ಯಾಯಾ ಲಯಕ್ಕೆ ಕೊಡಲಿಲ್ಲ ಎಂಬಿತ್ಯಾದಿ ಆರೋಪ ಗಳೆಲ್ಲ ನಿರಾಧಾರ. ಅಸಲಿಗೆ ಪಿ.ನಾಗರಾಜ್‌ ಅವರ ಮಾರ್ಗದರ್ಶನದಂತೆ 58 ಅಧ್ಯಕ್ಷರ ರಿಟ್ ಅರ್ಜಿ ಏ.15ರಂದೇ ಹೈಕೋರ್ಟಿಗೆ ಸಲ್ಲಿಕೆಯಾಗಿತ್ತು ಎಂದು ಪಿ.ನಾಗರಾಜ್‌ರನ್ನು ಸಮರ್ಥಿಸಿ ಕೊಂ ಡರು. ಇದೀಗ ರಾಮನಗರ ತಾಲೂಕಿನ 159 ಸಂಘಗಳ ಅಧ್ಯಕ್ಷರಿಗೆ ಮತದಾನಕ್ಕೆ ಅವಕಾಶ ಸಿಕ್ಕಂತಾಗಿದ ಎಂದು ಮಾಹಿತಿ ನೀಡಿದರು.

ಅಧ್ಯಕ್ಷರಿಗೆ ಮತದಾನ ಮಾಡಲು ಅವಕಾಶ:

ಮೇ 12ರಂದು ನಡೆಯುವ ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಗೆ ರಾಜ್ಯ ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶದಲ್ಲಿ ಈ ಎಂ.ಪಿ.ಸಿ.ಎಸ್‌ಗಳ ಅಧ್ಯಕ್ಷರಿಗೆ ಮತಾದನಕ್ಕೆ ಅವಕಾಶ ಸಿಕ್ಕಿದೆ. ಚಿಕ್ಕಕುಂಟನಹಳ್ಳಿ, ಕರಡೀಗೌಡನ ದೊಡ್ಡಿ, ಮೊಟ್ಟೆದೊಡ್ಡಿ, ನಿಜಿಯಪ್ಪನದೊಡ್ಡಿ, ಹೆಗ್ಗಡ ಗೆರೆ, ಅರಳೀಮರದದೊಡ್ಡಿ, ಬಿಲ್ಲಕೆಂಪನ ಹಳ್ಳಿ, ಐಜೂರು, ಬಿ.ಗೊಲ್ಲಳ್ಳಿ, ಅರಳಾಳು ಸಂದ್ರ, ಹರಳೀಮರದದೊಡ್ಡಿ, ಗಾಣಕಲ್, ಮದರ್‌ಸಾಬರದೊಡ್ಡಿ, ಕೊಡಿಯಾಲ, ತಡಿಕವಾಗಿಲು, ಅಂಚೀಪುರ, ಜೆ.ಕುರುಬರಹಳ್ಳಿ, ವೀರೇಗೌಡನ ದೊಡ್ಡಿ, ಅರ್ಚಕರಹಳ್ಳಿ, ಬೋರೇಹಳ್ಳಿ, ಕಲ್ಲುಗೋ ಪಳ್ಳಿ, ಮನಗನಹಳ್ಳಿ, ಅವ್ವೇರಹಳ್ಳಿ, ನಾಗೋ ಹಳ್ಳಿ, ವಾಜರಹಳ್ಳಿ, ತೆಂಗಿನಕಲ್ಲು, ಹುಣಸೆ ದೊಡ್ಡಿ, ಪಾದರಹಳ್ಳಿ, ಮೇಡನಹಳ್ಳಿ, ಗುನ್ನೂರು, ತಿಮ್ಮಸಂದ್ರ, ಲಕ್ಷ್ಮೀಪುರ, ನಂಜೇಗೌಡನದೊಡ್ಡಿ, ಚಾಮುಂಡಿಪುರ, ಪೇಟೆ ಕುರುಬರಹಳ್ಳಿ, ಕೃಷ್ಣಪ್ಪನ ದೊಡ್ಡಿ, ಬಿಳಗುಂಬ, ತುಂಬೇನಹಳ್ಳಿ, ಸಂಜೀವಯ್ಯನದೊಡ್ಡಿ, ಜೋಗನಪಾಳ್ಯ, ಜಿ.ಅಂಕನಹಳ್ಳಿ, ನಾಗರಕಲ್ಲುದೊಡ್ಡಿ, ಎಂ.ಜಿ.ಪಾಳ್ಯ, ಚಿಕ್ಕಬೈರಮಂಗಲ, ಅಂಚೀ ಪುರ ಕಾಲೋನಿ, ಚನ್ನಮಾರೇ ಗೌಡನ ದೊಡ್ಡಿ, ಕದಲೀಗೌಡನದೊಡ್ಡಿ, ಜಡೇನ ಹಳ್ಳಿ, ಶ್ಯಾನುಭೋಗನಹಳ್ಳಿ, ಕಾಂಚೀ ದೊಡ್ಡಿ, ಕೆಂಚನಕುಪ್ಪೆ, ಬಿ.ಬನ್ನಿಕುಪ್ಪೆ, ಹುಣ ಸನಹಳ್ಳಿ, ಕೂಟಗಲ್, ಲಕ್ಕೋಜನಹಳ್ಳಿ, ಕೃಷ್ಣರಾಜಪುರ, ತಾಳವಾಡಿ, ವಡ್ಡರಹಳ್ಳಿ.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

BY Election: ಚನ್ನಪಟ್ಟಣ ಜೆಡಿಎಸ್‌ಗೇ ಉಳಿಸಿಕೊಳ್ಳಲು ತೀರ್ಮಾನ? ಮೈತ್ರಿ ಅಭ್ಯರ್ಥಿ ಜಿಜ್ಞಾಸೆ

Channapatna: ಜೆಡಿಎಸ್‌ಗೇ ಉಳಿಸಿಕೊಳ್ಳಲು ತೀರ್ಮಾನ? ಮೈತ್ರಿ ಅಭ್ಯರ್ಥಿ ಜಿಜ್ಞಾಸೆ

Channapatna ಗರಿಗೆದರಿದ ʼಕೈʼ ಕಸರತ್ತು; ಡಿಕೆ ಸುರೇಶ್‌ ಪರವಾಗಿ ಎಂ.ಸಿ.ಅಶ್ವಥ್ ಚಂಡಿಕಾಯಾಗ

1-yog

Channapatna By Election; ಮೈತ್ರಿ ಅಭ್ಯರ್ಥಿ ನಾನೆ: ಸಿ.ಪಿ.ಯೋಗೇಶ್ವರ್ ವಿಶ್ವಾಸದ ನುಡಿ

1-bb-ele

Channapatna By Election; 3 ಸಾವಿರ ಮಂದಿಗೆ ಸಿದ್ದ ಮಾಡಿದ್ದ ಬಿರಿಯಾನಿ ವಶಕ್ಕೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.