By Election: ಎಚ್ಡಿಕೆ ಯಾವ ಒಕ್ಕಲಿಗ ನಾಯಕ ಬೆಳೆಯುವುದನ್ನೂ ಸಹಿಸಲ್ಲ: ಡಿ.ಕೆ.ಸುರೇಶ್
ಕುಮಾರಸ್ವಾಮಿ ಆಟ ನೋಡಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಬಂದ್ರು
Team Udayavani, Oct 27, 2024, 11:17 PM IST
ರಾಮನಗರ: ರಾಜೀನಾಮೆ ನೀಡಿದಾಗಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಗನನ್ನು ಇಲ್ಲಿಂದ ಎಂಎಲ್ಎ ಮಾಡುವ ಆಸೆ ಇತ್ತು. ಕುಮಾರಸ್ವಾಮಿ ಯಾವ ಒಕ್ಕಲಿಗ ನಾಯಕ ಬೆಳೆಯುವುದನ್ನೂ ಸಹಿಸಿಕೊಳ್ಳುವುದಿಲ್ಲ. ಅವರವರ ನಡುವೆಯೇ ಕಿತ್ತಾಟ ತಂದು ಅವರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಎಚ್ಡಿಕೆ ವಿರುದ್ಧ ವಾಗ್ಧಾಳಿ ನಡೆಸಿದರು.
ಚನ್ನಪಟ್ಟಣ ತಾಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಮಾತನಾಡಿ, ಚನ್ನಪಟ್ಟಣದ ಕೆರೆಗಳನ್ನು ತುಂಬಿಸಿದರು ಎಂದು ಯೋಗೇಶ್ವರ್ಗೆ ಬೆಳ್ಳಿಕಿರೀಟ ಹಾಕಿ ಮೆರವಣಿಗೆ ಮಾಡಿದಿರಿ. ಆದರೆ ಚುನಾವಣೆಯಲ್ಲಿ ನೀರುಕೊಟ್ಟವರನ್ನು ಜನತೆ ಮರೆತುಬಿಟ್ಟಿರಿ. ಯೋಗೇಶ್ವರ್ ಮೇಲೆ ಎರಡು ಬಾರಿ ಗೆದ್ದಿದ್ದೀನಿ ಅಂತ ಹೇಳಿ ಎಚ್ಡಿಕೆ ಅವರಿಗೆ ಟಿಕೆಟ್ ಕೊಡಬಹುದಿತ್ತು. ಆಗ ಅವರ ಹೃದಯ ಶ್ರೀಮಂತಿಕೆ ಗೊತ್ತಾಗೊದು ಎಂದು ಲೇವಡಿ ಮಾಡಿದರು.
ತಮ್ಮನ್ನು ನಂಬಿಕೊಂಡು ಬಂದ ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡುವ ಬದಲು, ಸಭೆ ಮಾಡಿ ಮಗನಿಗೆ ಚನ್ನಪಟ್ಟಣ ಪ್ರವಾಸ ಮಾಡು ಎಂದರು. ಇವರ ಎಲ್ಲಾ ಆಟ ನೋಡಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಬಂದರು. ಯೋಗೇಶ್ವರ್ ಜೊತೆ ವೇದಿಕೆ ಹಂಚಿಕೊಳ್ಳುತ್ತೇನೆ ಎಂದು ನಾವು ಕನಸಿನಲ್ಲಿಯೂ ಎಣಿಸಿರಲಿಲ್ಲ. ಯೋಗೇಶ್ವರ್ ತತ್ವ-ಸಿದ್ಧಾಂತ ಒಪ್ಪಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ನಾವು ಅಭಿವೃದ್ಧಿಗಾಗಿ ಒಂದಾಗಿದ್ದೇವೆ. ಯೋಗೇಶ್ವರ್ ಅವರನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿ ರಾಜಕಾರಣಕ್ಕೆ ಮುನ್ನುಡಿ ಬರೆಯೋಣ ಎಂದು ಕರೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ
Gangavathi: ಕಾಲುಬಾಯಿ ರೋಗ… ಒಂದೇ ವಾರದಲ್ಲಿ 30ಕ್ಕೂ ಹೆಚ್ಚು ಕುರಿ-ಮೇಕೆಗಳ ಸಾವು
Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…
Actor Darshan: ನಟ ದರ್ಶನ್ ಜಾಮೀನು ಅರ್ಜಿ ಹೈಕೋರ್ಟ್ನಲ್ಲಿ ಇಂದು ವಿಚಾರಣೆ
Assembly By Election: ಗೆದ್ದು ಬನ್ನಿ; ಕಾಂಗ್ರೆಸ್ ಸಚಿವರಿಗೆ ರಣದೀಪ್ ಸುರ್ಜೇವಾಲ ಹುಕುಂ
MUST WATCH
ಹೊಸ ಸೇರ್ಪಡೆ
Son of Muthanna; ಮುತ್ತಣ್ಣನಿಗೆ ಶಿವಣ್ಣ ಸಾಥ್: ತಂದೆ-ಮಗನ ಬಾಂಧವ್ಯದ ಸುತ ಸಿನಿಮಾ
BBK11: ಯಾರದೋ ಮನೆಯಲ್ಲಿ ಪಾತ್ರೆ ತಿಕ್ಕುತ್ತಿದ್ದೆ.. ದೊಡ್ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ
Mangaluru: ನಾಳೆಯಿಂದ ನೀತಿ ಸಂಹಿತೆ ಸಡಿಲಿಕೆ; ನೂತನ ಮೇಯರ್ ಆಡಳಿತ ಶುರು
AUSvsPAK: ಪಾಕ್ ಸರಣಿಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ: ತಂಡಕ್ಕೆ ನಾಯಕನೇ ಇಲ್ಲ!
Mangaluru: ಸಂಗ್ರಹಿಸಿದ ಪ್ಲಾಸ್ಟಿಕನ್ನು ಏನ್ಮಾಡ್ತಾರೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.