ಕಾರ್ಯಪಡೆಗಳಿಂದ ಸೋಂಕು ತಡೆಗೆ ಶ್ರಮ
Team Udayavani, May 24, 2021, 6:16 PM IST
ಮಾಗಡಿ: ಜಿಲ್ಲೆಯಲ್ಲಿ ಸೋಂಕು ನಿಯಂತ್ರಿಸಲುಪ್ರತಿಯೊಂದು ಗ್ರಾಮಪಂಚಾಯಿತಿಯಲ್ಲಿಕಾರ್ಯಪಡೆ ರಚಿಸಲಾಗಿದೆ ಎಂದು ಜಿಪಂ ಸಿಇಒ ಕ್ರಮ್ ತಿಳಿಸಿದರು.
ಅಗಲಕೋಟೆ ಗ್ರಾಪಂನಲ್ಲಿ ಇತ್ತೀಚೆಗೆ ನಡೆದ ಕೋವಿಡ್ಸೋಂಕುನಿಯಂತ್ರಣ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಕೊರೊನಾ ಸೋಂಕು ತೊಲಗಿಸಲು ಪ್ರತಿಯೊಂದು ಗ್ರಾಮದಲ್ಲೂಗ್ರಾಮಕಾರ್ಯಪಡೆ ರಚಿಸಲಾಗಿದೆ. ಗ್ರಾಪಂನಿಂದಗ್ರಾಮಗಳ ಪ್ರತಿಯೊಂದು ಮನೆಗೂ ಸೋಂಕುನಿವಾರಕ ದ್ರಾವಣಸಿಂಪಡಿಸಲೇಬೇಕು. ಆಶಾ ಮತ್ತುಅಂಗನವಾಡಿಕಾರ್ಯಕರ್ತೆಯರು, ಗ್ರಾಪಂಅಧ್ಯಕ್ಷ,ಉಪಾಧ್ಯಕ್ಷ, ಸದಸ್ಯರು, ಪಿಡಿಒ, ಕಾರ್ಯದರ್ಶಿಹಾಗೂ ಯುವಕರ ಸಂಘದ ಪದಾಧಿಕಾರಿಗಳಸಹಕಾರದಲ್ಲಿ ಸರ್ವರೂ ಸಮರೋಪಾದಿಯಲ್ಲಿಸೋಂಕು ಹರಡದಂತೆ ತಡೆಗಟ್ಟಲು ಪ್ರಾಮಾಣಿಕವಾಗಿ ದುಡಿಯಬೇಕು.
ಎಲ್ಲಾ ಗ್ರಾಮಗಳಿಗೂ ಮುಖ್ಯಮಂತ್ರಿಗಳೆ ಬಂದು ಕೋವಿಡ್ ಸೋಂಕು ನಿಯಂತ್ರಿಸಲು ಸಾಧ್ಯವಿಲ್ಲ. ಗ್ರಾಮಸ್ಥರೆಲ್ಲರೂ ಸಂಘಟಿತರಾಗಿ ಸೋಂಕು ನಿವಾರಣೆಗೆ ಶ್ರಮಿಸಬೇಕು. 15ನೆಹಣಕಾಸು ಯೋಜನೆಯ ಅನುದಾನ ಬಳಸಿಕೊಂಡು ಆಶಾ,ಅಂಗನವಾಡಿ ಕಾರ್ಯಕರ್ತೆಯರಿಗೆ ಎನ್.95 ಮಾಸ್ಕ್, ಸ್ಯಾನಿಟೈಸರ್ ಕೊಡಿಸಬೇಕು.
ಹೋಮ್ ಕ್ವಾರಂಟೈನ್: ನಗರದಿಂದ ಹಳ್ಳಿಗಳಿಗೆಬಂದಿರುವವರನ್ನು ಕಡ್ಡಾಯವಾಗಿ ಹೋಮ್ಕ್ವಾರಂಟೈನ್ ಮಾಡಬೇಕು. ಸೋಂಕಿತರ ಪ್ರಥಮಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸಿ,ಕೋವಿಡ್ ಟೆಸ್ಟ್ ಮಾಡಿಸಿ. ಆರ್ಟಿಪಿಸಿಆರ್ಲ್ಯಾಬ್ನಲ್ಲಿ 24 ಗಂಟೆಯ ಒಳಗೆ ಕೊರೊನಾ ಟೆಸ್ಟ್ನ ಫಲಿತಾಂಶ ಪಡೆದು ಕ್ರಮಕೈಗೊಳ್ಳಬೇಕು.ಜನಸಾಮಾನ್ಯರ ಆರೋಗ್ಯ ಸುರಕ್ಷತೆಯದೃಷ್ಟಿಯಿಂದ ಕೋವಿಡ್ ಸೋಂಕು ಹರಡದಂತೆತಡೆಗಟ್ಟಲುಕಠಿಣಕ್ರಮಕೈಗೊಳ್ಳಬೇಕಿದೆ. ತಾಲೂಕುಆಡಳಿತದ ಜೊತೆಗೆ ಜಿಪಂನ ಸಂಪೂರ್ಣ ಸಹಕಾರವಿದೆ.
ನಗರದಿಂದ ಬಂದ ಸೋಂಕಿತರುಹಳ್ಳಿಗಳಲ್ಲಿ ಕೊರೊನಾ ಸೋಂಕು ಬಿತ್ತಿದರು.ಗ್ರಾಮೀಣ ಭಾಗದಲ್ಲಿ ಶೇ. 80 ಸೋಂಕಿತರುಕೋವಿಡ್ಟೆಸ್ಟ್ಮಾಡಿಸಲುಹಿಂಜರಿಯುತ್ತಿದ್ದಾರೆ.ಪ್ರತಿಯೊಂದು ಮನೆ ಮನೆಗೂ ತೆರಳಿ ಕೋವಿಡ್ಟೆಸ್ಟ್ ಮಾಡಿಸಿ, ಪಿಡಿಒಗಳು ವರದಿ ಕೊಡಬೇಕುಎಂದು ಜಿಪಂ ಸಿಇಒ ಇಕ್ರಮ್ ಅಧಿಕಾರಿಗಳಿಗೆತಾಕೀತು ಮಾಡಿದರು.ಜಿಪಂಉಪಕಾರ್ಯದರ್ಶಿಉಮೇಶ್,ಮುಖ್ಯಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ಜಿಲ್ಲಾಯೋಜನಾ ನಿರ್ದೇಶಕ ಶಿವಕುಮಾರ್, ತಾಪಂಇಒ ಟಿ.ಪ್ರದೀಪ್ ಇದ್ದರು. ತಾಲೂಕಿನ ಹಂಚಿಕುಪ್ಪೆ, ಮತ್ತಿಕೆರೆ, ಸಾತನೂರು,ಅಗಲಕೋಟೆ ಗ್ರಾಪಂಗಳಲ್ಲಿ ಸೋಂಕು ನಿಯಂತ್ರಿಸಲು ಜಾಗೃತಿ ಸಭೆ ನಡೆಸಲಾಯಿತು.ಗ್ರಾಪಂಗಳ ಅಧ್ಯಕ್ಷರು,ಉಪಾಧ್ಯಕ್ಷರು, ಪಿಡಿಒಗಳು,ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ
Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ ಮಾಡಿದ ಮಹಿಳೆ; ಎಫ್ಐಆರ್
Magadi: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು; ಒಂದೇ ಕುಟುಂಬ ಐವರು ಸಾವು
Nandini Milk ಮತ್ತಷ್ಟು ತುಟ್ಟಿ? ಶೀಘ್ರವೇ ದರ ಪರಿಷ್ಕರಣೆ: ಸಿದ್ದರಾಮಯ್ಯ ಸುಳಿವು
CM Siddaramaiah ಸುಳ್ಳು ಹೇಳುವ ಬಿಜೆಪಿ ನಂಬಬೇಡಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.