ಜಾನಪದ ಕಲಾವಿದರ ರಕ್ಷಣೆಗೆ ಪ್ರಾಧಿಕಾರ ರಚಿಸಿ


Team Udayavani, Nov 16, 2020, 3:37 PM IST

ಜಾನಪದ ಕಲಾವಿದರ ರಕ್ಷಣೆಗೆ ಪ್ರಾಧಿಕಾರ ರಚಿಸಿ

ರಾಮನಗರ: ಆಧುನಿಕತೆಯ ಭರಾಟೆಯಲ್ಲಿ ಈ ನೆಲದ ಮೂಲ ಸಂಸ್ಕೃತಿ ಜನಪದ ಉಳಿಯಬೇಕು, ಸರ್ಕಾರ ಕಲಾ ವಿದರ ನೆರವಿಗೆ ಬರಲು,ಪ್ರಾಧಿಕಾರ ರಚನೆ ಮಾಡಬೇಕು ಎಂದು ಜನಪದಕಲಾವಿದ ಅಪ್ಪಗೆರೆ ತಿಮ್ಮರಾಜುಆಗ್ರಹಿಸಿದರು.

ನಗರದ ಸಾಹಸ ಕಲಾ ಶಿಕ್ಷಣ ಕೇಂದ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಅಖೀಲ ಕರ್ನಾಟಕ ಕಲಾವಿದರ ಒಕ್ಕೂಟ, ರಾಮನಗರ ಜಿಲ್ಲೆ, ಇವರ ಸಹಯೋಗದಲ್ಲಿ ರಾಮನಗರ ಜಿಲ್ಲಾ ಜಾನಪದ ಸಂಭ್ರಮ-2020 ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಧಿಕಾರ ರಚನೆಯ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಚಿಂತನೆ ನಡೆಸಬೇಕು, ಪ್ರಾಧಿಕಾರದ ಮೂಲಕ ಕಲಾವಿದರಿಗೆ ವಿಶೇಷ ಸೌಲಭ್ಯ ಗಳನ್ನು ಕೊಡಬೇಕು ಎಂದರು.

ಜನಪದ ಕಲೆಗಳು ಪುರಾತನ ಕಾಲದಿಂದಲೂ ಆಚರಣೆಯಲ್ಲಿವೆ. ಆದರೆ, ಇಂತಹ ಕಲೆಗಳಿಗೆ ಸರ್ಕಾರದಿಂದ ಸೂಕ್ತ ಪ್ರೋತ್ಸಾಹ, ಮನ್ನಣೆ ಸಿಗುತ್ತಿಲ್ಲ, ಹೀಗಾಗಿ ಪ್ರಾಧಿಕಾರದ ರಚನೆ ಅಗತ್ಯವಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಮಾತನಾಡಿ, ದೇಶದಲ್ಲಿಯೇ ಮೊದಲ ಬಾರಿಗೆ ತೃತೀಯ ಲಿಂಗಿಯಾದ ತಮಗೆ ಅಕಾಡೆಮಿಯ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸರ್ಕಾರ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಜೀವನ ನಡೆಸುವ ಸಲುವಾಗಿ ಜೋಗತಿ ನೃತ್ಯ ಮಾಡುತ್ತಿದ್ದ ತಾವು ಜನಪದ ಕಲಾವಿದರ ಬದುಕು-ಬವಣೆಯ ಬಗ್ಗೆ ತಿಳಿವಳಿಕೆ ಇದೆ. ತಮಗೆ ಸಿಕ್ಕಿರುವ ಅಧಿಕಾರವನ್ನು ಬಳಸಿಕೊಂಡು ಜನಪದ ಕಲಾವಿದರ ಸೇವೆಯನ್ನು ನಿಷ್ಠೆಯಿಂದ ಮಾಡುವುದಾಗಿ ತಿಳಿಸಿದರು.

ಸಮೀಕ್ಷೆ ಕಾರ್ಯ: ಪ್ರಸಕ್ತ ಸಾಲಿನಲ್ಲಿ ಅಕಾಡೆಮಿ ವತಿಯಿಂದ ಜನಪದ ಕಲಾವಿದರ ಸಮೀಕ್ಷೆ ನಡೆಸುವುದರ ಜೊತೆಗೆ ಕಲಾವಿದರಿಗೆ ಸೂಕ್ತ ಸಮಯಕ್ಕೆ ಮಾಸಾಸನ ಸಿಗಲು ಪ್ರಯ ತ್ನಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಕಲಾವಿದರು ಡೊಳ್ಳುಕುಣಿತ, ಪೂಜಾ ಕುಣಿತ, ವೀರಗಾಸೆ, ಹುಲಿವೇಷ, ಗಾರುಡಿಗೊಂಬೆ ಸೇರಿದಂತೆ 25ಕ್ಕೂ ಹೆಚ್ಚು ವಿವಿಧ ಜಾನಪದ ಕಲೆಗಳ ಪ್ರದರ್ಶನ ನೀಡಿದರು.

ಈ ವೇಳೆ ಕರ್ನಾಟಕ ವಿಶ್ವದ್ಯಾಲ ಯದ ಸಿಂಡಿಕೇಟ್‌ ಸದಸ್ಯ ಹಾಸನ ರಘು, ಅಖೀಲ ಕರ್ನಾಟಕ ಕಲಾವಿದರಿದ್ದರು.

ಟಾಪ್ ನ್ಯೂಸ್

Lap

Governmnet Encourage: ಎಸೆಸೆಲ್ಸಿ ಸಾಧಕರಿಗೆ ಲ್ಯಾಪ್‌ಟಾಪ್‌

Accident-Logo

Sulya: ನಗರದ ಜ್ಯೋತಿ ವೃತ್ತದ ಬಳಿ ರಿಕ್ಷಾ ಢಿಕ್ಕಿ: ಬಾಲಕಿಗೆ ಗಾಯ

Accident-Logo

Bantwala: ಬೋಳಂಗಡಿ: ಹೆದ್ದಾರಿ ಕಾಮಗಾರಿ ಯಂತ್ರ ಢಿಕ್ಕಿ; ಪಾದಚಾರಿಗೆ ಗಾಯ

Police

Police Compliant: ಸಂಜೀವ ಕಾಣಿಯೂರು ವಿರುದ್ಧ ಕುಣಿತ ಭಜನೆಯ ಹೆಣ್ಮಕ್ಕಳಿಂದ ದೂರು

police

Kumbale: ವಂಚನೆ: ಸಚಿತಾ ಮನೆಗೆ ಪೊಲೀಸ್‌ ದಾಳಿ

LiQer

Dakshina Kannada: ಅಬಕಾರಿ ಕಾರ್ಯಾಚರಣೆ; ಮದ್ಯ, ಗಾಂಜಾ ವಶ

High-Court

Mangaladevi Temple: ಹೈಕೋರ್ಟ್‌ ತಡೆಯಾಜ್ಞೆ ಆದೇಶಕ್ಕೆ ಆಡಳಿತ ಮಂಡಳಿಯಿಂದ ಅರ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nikhil

By Election: ನಿಖಿಲ್‌ ಸ್ಪರ್ಧೆಗೆ ಒತ್ತಡ: ಜಯಮುತ್ತು ಕಣಕ್ಕೆ?

CPY

By Election: ಸಿ.ಪಿ. ಯೋಗೇಶ್ವರ್‌ ಮೈತ್ರಿ ಅಭ್ಯರ್ಥಿಯೋ? ಬಂಡಾಯವೋ? ಕಾಂಗ್ರೆಸ್ಸಿಗೋ?

baby 2

KSRTC ಬಸ್‌ನಲ್ಲೇ ಅವಳಿ ಮಕ್ಕಳು ಜನನ!

nisha yogeshwar

Video: ಎಲ್ಲಾ ಸತ್ಯ ಹೊರ ತರುತ್ತೇನೆ: ತಂದೆ ವಿರುದ್ದ ಬಾಂಬ್‌ ಹಾಕಿದ ಸಿಪಿವೈ ಪುತ್ರಿ ನಿಶಾ

BY Election: ಬಿಜೆಪಿಯಿಂದ ಟಿಕೆಟ್‌ ಸಿಗದಿದ್ದರೆ ಸಿಪಿವೈ ಬಿಎಸ್‌ಪಿಯಿಂದ ಸ್ಪರ್ಧೆ?

BY Election: ಬಿಜೆಪಿಯಿಂದ ಟಿಕೆಟ್‌ ಸಿಗದಿದ್ದರೆ ಸಿಪಿವೈ ಬಿಎಸ್‌ಪಿಯಿಂದ ಸ್ಪರ್ಧೆ?

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Lap

Governmnet Encourage: ಎಸೆಸೆಲ್ಸಿ ಸಾಧಕರಿಗೆ ಲ್ಯಾಪ್‌ಟಾಪ್‌

Accident-Logo

Sulya: ನಗರದ ಜ್ಯೋತಿ ವೃತ್ತದ ಬಳಿ ರಿಕ್ಷಾ ಢಿಕ್ಕಿ: ಬಾಲಕಿಗೆ ಗಾಯ

Accident-Logo

Bantwala: ಬೋಳಂಗಡಿ: ಹೆದ್ದಾರಿ ಕಾಮಗಾರಿ ಯಂತ್ರ ಢಿಕ್ಕಿ; ಪಾದಚಾರಿಗೆ ಗಾಯ

Police

Police Compliant: ಸಂಜೀವ ಕಾಣಿಯೂರು ವಿರುದ್ಧ ಕುಣಿತ ಭಜನೆಯ ಹೆಣ್ಮಕ್ಕಳಿಂದ ದೂರು

police

Kumbale: ವಂಚನೆ: ಸಚಿತಾ ಮನೆಗೆ ಪೊಲೀಸ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.