ಇ-ಸ್ವತ್ತು ಸಾಫ್ಟ್ ವೇರ್‌ಗೆ ಭೂಗಳ್ಳರ ಖನ್ನಾ?


Team Udayavani, Jul 17, 2023, 2:35 PM IST

tdy-10

ರಾಮನಗರ: ಗ್ರಾಪಂಗಳಲ್ಲಿ ಖಾತೆ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರೂಪಿಸಿರುವ ಇ-ಸ್ವತ್ತು ತಂತ್ರಾಂಶ ಇದೀಗ ಭೂಗಳ್ಳರಿಗೆ ಅನುಕೂಲವಾಗಿ ಪರಿಣಮಿಸಿದ್ದು, ವೆಬ್‌ ಪೋರ್ಟಲ್‌ಗೆ ಖನ್ನ ಹಾಕಿ ನಕಲಿ ಇ-ಖಾತೆಗಳನ್ನು ಸೃಷ್ಟಿಸುವ ಜಾಗ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಗತಿ ಇದೀಗ ಮತ್ತೂಮ್ಮೆ ಬಯಲಾಗಿದೆ.

2021ರಲ್ಲಿ ಬೆಂ. ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಪಂನಲ್ಲಿ ಅಕ್ರಮವಾಗಿ ಲಾಗಿನ್‌ ಆಗಿ 36 ನಕಲಿ ಇ-ಖಾತೆಗಳನ್ನು ಸೃಷ್ಟಿಸಿರುವ ಸಂಬಂಧ ಪ್ರಕ ರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ರಾಮನಗರ ಜಿಲ್ಲೆಯ ಡಾಟಾ ಎಂಟ್ರಿ ಆಪರೇಟರ್‌ ಮತ್ತು ಪಿಡಿಒ ಸೇರಿದಂತೆ ಐದಾರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದೀಗ ತಾಲೂಕಿನ ಹರೀಸಂದ್ರ ಗ್ರಾಪಂನ ಪಿಡಿಒ ತನ್ನ ಇ-ಸ್ವತ್ತು ಲಾಗಿನ್‌ ಅನ್ನು ತೆರೆಯಲು ಯಾರೋ ಪ್ರತ್ನಿಸಿದ್ದಾರೆ ಎಂದು ದೂರು ನೀಡುವುದರೊಂದಿಗೆ ಜಿಲ್ಲೆಯಲ್ಲಿ ಇ-ಸ್ವತ್ತು ತಂತ್ರಾಂಶಕ್ಕೆ ಖನ್ನ ಹಾಕಿ ನಕಲಿ ಇ- ಖಾತೆಗಳನ್ನು ಸೃಷ್ಟಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಭೂಗಳ್ಳರ ಕೈಚಳಕ: ಬೆಂಗಳೂರು ನಗರಕ್ಕೆ ಸಮೀಪ ದಲ್ಲಿರುವ ರಾಮನಗರ ಜಿಲ್ಲೆಯಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಕೆಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಬಡಾವಣೆಗಳನ್ನು ನಿರ್ಮಿಸಿ ಮಾರಾಟ ಮಾಡುವ ರಿಯಲ್‌ಎಸ್ಟೇಟ್‌ ಉದ್ಯಮ ಬಿರುಸಾಗಿ ನಡೆ ಯುತ್ತಿದೆ. ಸರ್ಕಾರದ ನಿಯಮಾನುಸಾರ ಲೇಔಟ್‌ ಗಳನ್ನು ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡುವುದು ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಲಾಭದಾಯಕವಲ್ಲ. ಹೀಗಾಗಿ ಅವರು ಭೂಪರಿವರ್ತನೆ ಸೇರಿದಂತೆ ಸಾಕಷ್ಟು ನಿಯಮಗಳನ್ನು ಉಲ್ಲಂಘಿಸಿ ಬಡಾವಣೆ ಗಳನ್ನು ನಿರ್ಮಿ ಸಿದ್ದು, ಈ ಬಡಾವಣೆಗಳಿಗೆ ಗ್ರಾಪಂಗಳಲ್ಲಿ ಖಾತೆ ಕೊಡು ವುದು ಸಾಧ್ಯವಿಲ್ಲದ ಕಾರಣ ಅಧಿಕಾರಿಗಳು ನಿರಾಕರಿಸು ತ್ತಾರೆ. ಇದಕ್ಕಾಗಿ ಇ-ಸ್ವತ್ತು ತಂತ್ರಾಂಶವನ್ನು ಹ್ಯಾಕ್‌ಮಾಡಿ ತಮ್ಮ ಸ್ವತ್ತಿಗೆ ಖಾತೆ ಮಾಡಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಈದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಇದಕ್ಕೆ ಗ್ರಾಪಂಗಳ ಕೆಲ ಅಧಿಕಾರಿ ಮತ್ತು ಸಿಬ್ಬಂದಿಗಳು ಶಾಮೀಲಾಗಿರುವುದು ಗುಟ್ಟಾಗಿ ಉಳಿದಿರುವ ಸಂಗತಿಯೇನು ಅಲ್ಲ.

ಹಲವು ದೂರುಗಳು ದಾಖಲು: ಜಿಲ್ಲೆಯ ಶ್ರೀಮಂತ ಪಂಚಾಯ್ತಿ ಎನಿಸಿರುವ ಮಂಚನಾಯ್ಕನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಇ-ಖಾತೆಯನ್ನು ಇದೇ ರೀತಿ ಮಾಡಿಕೊಡಲಾಗಿದೆ ಎಂದು ಅಲ್ಲಿನ ಪಿಡಿಒ ಜಿಲ್ಲಾ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದ್ದ ನಕಲಿ ಇ-ಖಾತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಬೈರಮಂಗಲ ಪಿಡಿಒ ಹಾರೋಹಳ್ಳಿ ಗ್ರಾಪಂ ಕಂಪ್ಯೂಟರ್‌ ಆಪರೇಟರ್‌ ಹಾಗೂ ಕನಕಪುರದ ಖಾಸಗಿ ಸೈಬರ್‌ ಮಾಲೀಕನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿ ದ್ದರು. ಇಷ್ಟಾದರೂ ಜಿಲ್ಲೆಯಲ್ಲಿ ಈ ದಂಧೆಗೆ ಕಡಿವಾಣ ಬಿದ್ದಿಲ್ಲ, ನಕಲಿ ಇ-ಖಾತೆಗಳ ಸೃಷ್ಟಿ ನಡೆಯುತ್ತಿದೆ ಎಂಬುದಕ್ಕೆ ಹರೀಸಂದ್ರ ಗ್ರಾಪಂ ಪಿಡಿಓ ಲಾಗಿನ್‌ ಐಡಿ, ಪಾಸ್‌ವಡ್‌ ಬಳಸಿ ಬೇರೆಡೆ ಲಾಗಿನ್‌ ಆಗಲು ಪ್ರಯತ್ನಿಸಿರುವುದು ಸಾಕ್ಷಿಯಾಗಿದೆ.

ಇ-ಸ್ವತ್ತು ತಂತ್ರಾಂಶವನ್ನು ಹ್ಯಾಕ್‌ಮಾಡಿ ಬೇನಾಮಿ ಇ-ಖಾತೆ ಸೃಷ್ಟಿಸುವ ಮೂಲಕ ಒಂದೆಡೆ ಸರ್ಕಾರ ಮತ್ತೂಂದೆಡೆ ಅಮಾಯಕರನ್ನು ವಂಚಿಸುತ್ತಿರುವ ಜಾಲವನ್ನು ಬೇಧಿಸಲು ಪೊಲೀಸ್‌ ಇಲಾಖೆ ಮುಂದಾಗ ಬೇಕಿದೆ. ಈ ದಂಧೆಯ ಹಿಂದೆ ಪಂಚಾಯತ್‌ ರಾಜ್‌ ಇಲಾಖೆ, ಭೂಮಾಫಿಯಾದ ಪ್ರಮುಖ ಕುಳಗಳು ಶಾಮೀಲಾಗಿದ್ದು, ಈ ದಂಧೆಯನ್ನು ಮಟ್ಟಹಾಕಲು ಪೊಲೀಸ್‌ ಇಲಾಖೆ ಮುಂದಾಗುವರೇ ಕಾಯ್ದು ನೋಡಬೇಕಿದೆ.

ಪಿಡಿಒ ಬಲಿಪಡೆದಿರುವ ದಂಧೆ: ಇ-ಸ್ವತ್ತು ತಂತ್ರಾಂಶವನ್ನು ಹ್ಯಾಕ್‌ಮಾಡುವ ದಂಧೆ ಜಿಲ್ಲೆಯಲ್ಲಿ ವ್ಯಾಪಕವಾಗಿದ್ದು ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಪಂನಲ್ಲಿ 36 ನಕಲಿ ಖಾತೆ ಸೃಷ್ಟಿಸುವಲ್ಲಿ ಬಿಡದಿ ಸಮೀಪದ ಬೈರಮಂಗಲ ಪಿಡಿಒ ರವಿ ಎಂಬುವರ ವಿರುದ್ಧ ಪೊಲೀಸರು ತನಿಖೆ ಕೈಗೊಂಡಿದ್ದರು. ಹಿಂದೆ ಹಾರೋಹಳ್ಳಿ ಗ್ರಾಪಂ ಪಿಡಿಒ ಆಗಿದ್ದಾಗ ಈತ ಪಿಡಿಪ ಹಾಗೂ ಗ್ರಾಪಂ ಅಧ್ಯಕ್ಷರ ಡಾಂಗಲ್‌ ಬಳಸಿ ಅಕ್ರಮ ಇ-ಖಾತೆ ಸೃಷ್ಟಿಸಿದ್ದರು. ಪ್ರಕರಣದ ವಿಚಾರಣೆ ನಡೆಯುತ್ತಿರುವ ನಡುವೆಯೇ ಇವರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದರು. ಆದರೂ ಜಿಲ್ಲೆಯಲ್ಲಿ ಈ ದಂಧೆಗೆ ಮಾತ್ರ ಕಡಿವಾಣ ಬಿದ್ದಿಲ್ಲ.

ಏನಿದು ಇ-ಸ್ವತ್ತು ಸಾಫ್ಟ್‌ವೇರ್‌ ಹ್ಯಾಕಿಂಗ್‌ ದಂಧೆ: ಗ್ರಾಮಾಡಳಿತವನ್ನು ಆನ್‌ಲೈನ್‌ ಗೊಳಿಸುವ ಜೊತೆಗೆ ದಾಖಲೆಗಳನ್ನು ಡಿಜಿಟಲಿಕರಣ ಮಾಡುವ ಉದ್ದೇಶದಿಂದ 2014ರಲ್ಲಿ ಗ್ರಾಪಂಗಳ ವ್ಯಾಪ್ತಿಯ ಎಲ್ಲಾ ಸ್ವತ್ತುಗಳಿಗೆ ಇ-ಖಾತೆ ನೀಡುವಂತೆ ಪಂಚಾಯತ್‌ರಾಜ್‌ ಇಲಾಖೆ ಆದೇಶಿಸಿತ್ತು. ಅದರಂತೆ ಇ-ಖಾತೆ ಯನ್ನು ಇ-ತಂತ್ರಾಂಶದಲ್ಲಿ ನೀಡಬೇಕು ಎಂದಾದಲ್ಲಿ ಅಗತ್ಯವಿರುವ ಎಲ್ಲಾ ದಾಖಲೆಗಳ ಪ್ರತಿಯನ್ನು ಅಪ್‌ಲೋಡ್‌ ಮಾಡಬೇಕು. ಸೂಕ್ತ ದಾಖಲೆಗಳನ್ನು ನೀಡದೆ ಹೋದರೆ ಅದು ಖಾತೆ ಮಾಡಿಕೊಡಲು ಅವಕಾಶ ನೀಡುವುದಿಲ್ಲ. ಇ-ಸ್ವತ್ತು ಸಾಪ್ಟ್ವೇರ್‌ನ ಮೂಲಕ ಗ್ರಾಪಂ ನಲ್ಲಿ ಸ್ವತ್ತಿನ ಇ-ಖಾತೆಗೆ ಅರ್ಜಿ ಸಲ್ಲಿಸುವ ಸಾರ್ವಜನಿಕರ ಅರ್ಜಿಯನ್ನು ನಮೂದು ಮಾಡಲಾಗುತ್ತದೆ. ಅರ್ಜಿಯ ಜೊತೆಗೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಗ್ರಾಪಂ ಕಾರ್ಯದರ್ಶಿ ಅಥವಾ ಎಸ್‌ಡಿಎ ಲಾಗಿನ್‌ಗೆ ಪರಿಶೀಲನೆಗೆ ನೀಡಲಾಗುತ್ತದೆ. ಅಗತ್ಯ ಕ್ರಮಗಳನ್ನು ಪೂರೈಸಿದಬಳಿಕ ಪಿಡಿಒ ಈ ಲಾಗಿನ್‌ನಲ್ಲಿ ಸಹಿ ಮಾಡಿ ಇ-ಖಾತೆ ಅನುಮೋದನೆಗಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಾಗಿನ್‌ಗೆ ಕಳುಹಿಸುತ್ತಾರೆ. ಕಾರ್ಯನಿರ್ವಾಹಕ ಅಧಿಕಾರಿ ದಾಖಲೆಗಳನ್ನು ಪರಿಶೀಲಿಸಿ ಲಾಗಿನ್‌ನಲ್ಲಿ ಡಿಜಿಟಲ್‌ ಸಹಿ ಮಾಡಿ ಅನುಮೋದನೆ ನೀಡದ ಬಳಿಕ ಮತ್ತೆ ಇ-ಖಾತೆಯ ದಾಖಲೆ ಪಿಡಿಒ ಲಾಗಿನ್‌ಗೆ ಮರಳುತ್ತದೆ. ಅಂತಿಮವಾಗಿ ಇ-ಖಾತೆ ಪಾರಂ ಆಗಿರುವ ನಮೂನೆ 9 ಮತ್ತು 10ಕ್ಕೆ ಸಹಿಮಾಡಿ ಪ್ರಿಂಟ್‌ಔಟ್‌ ತೆಗೆಯುವುದು ಆಯಾ ಗ್ರಾಪಂ ಪಿಡಿಓ. ಎನ್‌ ಐಸಿ(ರಾಷ್ಟ್ರೀಯ ಮಾಹಿತಿ ಕೇಂದ್ರ) ತಯಾರಿಸಿರುವ ಈ ತಂತ್ರಾಂಶಕ್ಕೆ ಪ್ರವೇಶ ಪಡೆಯಲು ಅಗತ್ಯ ವಿರುವ ಸಿಬ್ಬಂದಿ ಮತ್ತು ಅ—ಕಾರಿಗಳಿಗೆ ಲಾಗಿನ್‌ಐಡಿ ಮತ್ತು ಪಾಸ್‌ವರ್ಡ್‌ ನೀಡಲಾಗಿದೆ. ಅಲ್ಲದೆ ಅವರ ಡಿಜಿಟಲ್‌ ಸಹಿ ಹೊಂದಿರುವ ಡಾಂಗಲ್‌ ಅನ್ನು ನೀಡಲಾಗುತ್ತದೆ. ಈ ಡಾಂಗಲ್‌, ಪಾಸ್‌ವರ್ಡ್‌ ಹಾಗೂ ಐಡಿ ಬಳಸಿ ಇಸ್ವತ್ತು ತಂತ್ರಾಂಶಕ್ಕೆ ಲಾಗಿನ್‌ ಆಬೇಕು. ಗ್ರಾಪಂ ಸಿಬ್ಬಂದಿಗಳು ಎಂದಿನಂತೆ ಲಾಗಿನ್‌ ಆಗಿ ತಮ್ಮ ಕೆಲಸ ಮುಗಿಸುತ್ತಾರೆ. ಆದರೆ ಹ್ಯಾಕರ್‌ಗಳು ಯಾವುದೋ ಪಂಚಾಯ್ತಿ ಪಿಡಿಓ, ಸಿಬ್ಬಂದಿಯ ಲಾಗಿನ್‌ ಐಡಿ ಪಾಸ್‌ ವರ್ಡ್‌ಗಳನ್ನು ಬಳಸಿ ಲಾಗಿನ್‌ ಆಗಿ ಇನ್ಯಾವುದೋ ಪಂಚಾಯ್ತಿಗಳಿಗೆ ಸೇರಿದ ಇ-ಖಾತೆಯನ್ನು ಯಾರಿಗೂ ತಿಳಿಯದಂತೆ ಸೃಷ್ಟಿಸಿ, ಜನರಿಗೆ ಇ-ಖಾತೆ ಇದೆ ಎಂದು ಜಮೀನುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಾರೆ, ಇದರಿಂದಾಗಿ ಸಾಕಷ್ಟು ಅವ್ಯವಹಾರ ನಡೆಯುತ್ತಿದ್ದು ಬೇನಾಮಿ ಇ-ಖಾತೆಗೆ ಸಾಕಷ್ಟ ಹಣವನ್ನೂ ಪಡೆಯುತ್ತಿದ್ದಾರೆ.

-ಸು.ನಾ.ನಂದಕುಮಾರ್‌

ಟಾಪ್ ನ್ಯೂಸ್

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

kejriwal-2

AAP ಬೇಡಿಕೆ: ನಿರ್ಗಮಿತ ಸಿಎಂ ಕೇಜ್ರಿವಾಲ್ ಅವರಿಗೆ ಸರಕಾರಿ ವಸತಿ ಕಲ್ಪಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

10

Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ

ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Magadi: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು; ಒಂದೇ ಕುಟುಂಬ ಐವರು ಸಾವು

Magadi: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು; ಒಂದೇ ಕುಟುಂಬ ಐವರು ಸಾವು

cmNandini Milk ಮತ್ತಷ್ಟು ತುಟ್ಟಿ? ಶೀಘ್ರವೇ ದರ ಪರಿಷ್ಕರಣೆ: ಸಿದ್ದರಾಮಯ್ಯ ಸುಳಿವು

Nandini Milk ಮತ್ತಷ್ಟು ತುಟ್ಟಿ? ಶೀಘ್ರವೇ ದರ ಪರಿಷ್ಕರಣೆ: ಸಿದ್ದರಾಮಯ್ಯ ಸುಳಿವು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.