![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 6, 2022, 3:32 PM IST
ಕನಕಪುರ: ಫಲಾನುಭವಿಗಳ ಖಾತೆಗೆ ತಲುಪಬೇಕಾದ ಪಿಂಚಣಿ ಹಣವನ್ನು ಬೇರೊಂದು ಖಾತೆಗೆ ಪಾವತಿ ಮಾಡಿ ಕರ್ತವ್ಯ ಲೋಪವೆಸಗಿರುವ ಸಾಮಾಜಿಕ ಭದ್ರತಾ ಪಿಂಚಣಿ ಆಪರೇಟರ್ ರಘು ಎಂಬಾತನಿಗೆ ತಾಲೂಕು ಆಡಳಿತ ನೋಟಿಸ್ ನೀಡಿದೆ.
ತಾಲೂಕಿನ ನಿರ್ಮಲಾ ಕೋ. ಲೇಟ್ ಕೃಷ್ಣ ಎಂಬ ಫಲಾ ನುಭವಿಗೆ ಪಿಂಚಣಿ ಬಾರದೆ ನಿಂತುಹೋಗಿತ್ತು. ಫಲಾನುಭವಿ ಗಳು ನೀಡಿದ ದೂರಿನ ಮೇರೆಗೆ ಪಿಂಚಣಿ ತಂತ್ರಾಂಶದಲ್ಲಿ ಪರಿಶೀಲಿಸಲಾಗಿ ಫಲಾನುಭವಿ ನಿರ್ಮಲಾ ಅವರ ಖಾತೆ ಸಂಖ್ಯೆಯನ್ನು ಏ.25. 2019ರಲ್ಲಿ ಬದಲಾವಣೆ ಮಾಡಿ ಬೇರೊಬ್ಬರ ಖಾತೆಗೆ ಹಣ ಹಣ ಜಮೆಯಾಗಿರುವುದು ಕಂಡುಬಂದಿತ್ತು. ಅಲ್ಲದೆ ಇದು ಪುನರಾವರ್ತನೆಯಾಗಿ ಮೇ 01ರಂದು ಮತ್ತೂಮ್ಮೆ ಖಾತೆ ಸಂಖ್ಯೆ ಬದಲಾವಣೆ ಮಾಡಿ ಇಂಡಿಕರಿಸಿ ಅನುಮೋದನೆ ನೀಡಲಾಗಿದೆ ಎಂದು ಪಿಂಚಣಿ ನಿರ್ದೇಶನಾಲಯದಿಂದ ತಿಳಿದು ಬಂದಿದೆ.
ಸಾಮಾಜಿಕ ಭದ್ರತೆ, ಪಿಂಚಣಿ ನಿರ್ದೇಶನಾಲಯ ನೀಡಿರುವ ದಾಖಲಾತಿ ಪ್ರಕಾರ ಫಲಾನುಭವಿ ನಿರ್ಮಲಾ ಅವರ ಪಿಂಚಣಿ ಹಣ ಬೇರೆಯವರ ಖಾತೆಗೆ ಜಮೆಯಾಗಿ ರುವ ಬಗ್ಗೆ ದಾಖಲೆ ಕಂಡುಬಂದಿವೆ. ಉಲ್ಲೇಖ (3)ರ ಪತ್ರದಲ್ಲಿ ಈ ರೀತಿಯ ಪ್ರಕರಣ ಪುನರಾವರ್ತಿಯಾಗಿರು ವುದರಿಂದ ಸದರಿ ಪ್ರಕರಣಗಳಲ್ಲಿ ಕರ್ತವ್ಯ ಲೋಪವೆಸಗಿ ರುವ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಪೂರಕ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸಾಮಾಜಿಕ ಭದ್ರತಾ ಮತ್ತು ಪಿಂಚಣಿ ನಿರ್ದೇಶನಾ ಲಯ ನೀಡಿದ ಸೂಚನೆ ಮೇರೆಗೆ ಸಾಮಾಜಿಕ ಭದ್ರತಾ ಆಪರೇಟರ್ ರಘು ಎಂಬಾತನಿಗೆ ತಾಲೂಕು ಆಡಳಿತ ನೋಟಿಸ್ ನೀಡಿದೆ.
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
Ramanagara: ಬೆಂ.-ಮೈ. ಎಕ್ಸ್ ಪ್ರೆಸ್ವೇ ಬಿಡದಿ ಎಕ್ಸಿಟ್ ಬಂದ್
Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?
Kudur: ಬಿಡಿಸಿಸಿ ಬ್ಯಾಂಕ್ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.