ಮಳೆ ನೀರು ಪೈಪ್‌ನಲ್ಲಿ ಸಿಲುಕಿದ್ದ ವ್ಯಕ್ತಿ ರಕ್ಷಣೆ


Team Udayavani, Jul 5, 2021, 5:18 PM IST

ramanagara news

ರಾಮನಗರ: ನೂತನವಾಗಿ ನಿರ್ಮಾಣವಾಗುತ್ತಿರುವಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿರಸ್ತೆಯ ಕೆಳೆಗೆ ಅಳವಡಿಸಿರುವ ಮಳೆ ನೀರು ಹರಿದುಹೋಗುವ ಪೈಪ್‌ನೊಳಗೆ ನುಸುಳಿದ್ದ ವ್ಯಕ್ತಿಯೊಬ್ಬಹಿಂದಕ್ಕೂ ಬರಲಾಗದೆ, ಮುಂದಕ್ಕೂ ಹೋಗಲಾಗದೆ ಸಿಲುಕಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ಅಗ್ನಿ ಶಾಮಕದಳದ ಸಿಬ್ಬಂದಿ ರಕ್ಷಿಸಿದ ಘಟನೆ ಸಿಂಗ್ರಾಬೋವಿದೊಡ್ಡಿಬಳಿಯಲ್ಲಿ ನಡೆದಿದೆ.

ಘಟನೆ: ನಗರದ ಸಿಂಗ್ರಾಬೋವಿದೊಡ್ಡಿ ಬಳಿಯಲ್ಲಿಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ ಕೆಳಗಡೆಮಳೆ ನೀರು ಹರಿದು ಹೋಗಲು ಸುಮಾರು 4 ಅಡಿಅಗಲದ ಸಿಮೆಂಟ್‌ ಪೈಪು ಅಳವಡಿಸಲಾಗಿದೆ.

ಸಿಂಗ್ರಾಬೋವಿ ದೊಡ್ಡಿ ನಿವಾಸಿ ರೈತ ರಾಜಣ್ಣ ಅಲಿಯಾಸ್‌ಗೋವಿಂದರಾಜು (48) ಅವರ ಜಮೀನು ರಸ್ತೆಯಎರಡೂ ಬದಿಗಳಲ್ಲಿದೆ. ಒಂದು ಬದಿಯಲ್ಲಿದ್ದಕೊಳವೆಬಾವಿಯಿಂದ ಮತ್ತೂಂದು ಬದಿಯ ತಮ್ಮ ಜಮೀನಿಗೆ ನೀರು ಹರಿಸಬೇಕಿತ್ತು. ಇದಕ್ಕೆ ಅವರು ಪ್ಲಾಸ್ಟಿಕ್‌ಪೈಪ್‌ ಎಳೆಯಬೇಕಿತ್ತು. ಭಾನುವಾರ ಬೆಳಗ್ಗೆ10 ಗಂಟೆವೇಳೆಗೆ ರಸ್ತೆ ಕೆಳೆಗೆ ಇದ್ದ ಮಳೆ ನೀರು ಹರಿಯುವಪೈಪಿನೊಳಗೆ ಪ್ಲಾಸಿಟಿಕ್‌ ಪೈಪ್‌ ಹಿಡಿದು ತೆವಳುತ್ತಾಸಾಗಿದ್ದಾರೆ.

ವ್ಯಕ್ತಿಗೆ ಆಮ್ಲ ಜನಕ ಪೂರೈಕೆ: ಸುಮಾರು 150 ಅಡಿತೆವಳುತ್ತಾ ಸಾಗಿದ ನಂತರ ಮಳೆ ನೀರು ಪೈಪಿನಲ್ಲಿಮಣ್ಣು ಸೇರಿಕೊಂಡು ಕೆಸರಿನಂತಾಗಿದ್ದು, ಅಲ್ಲಿ ಸಿಲುಕಿದ್ದಾರೆ. ಮತ್ತೆ ವಾಪಸ್ಸು ಬರಲಾಗದೆ, ಮುಂದಕ್ಕೂಹೋಗಲಾಗದೆ ಚೀರಾಡ ತೊಡಗಿದ್ದಾರೆ. ಚೀರಾಟಕೇಳಿದ ಅಲ್ಲೆ ಇದ್ದ ಅವರ ಮಗ ವೇಣುಗೋಪಾಲಮತ್ತು ಇತರರು ತಕ್ಷಣ ಗ್ರಾಮಾಂತರ ಪೊಲೀಸರಿಗೆಕರೆ ಮಾಡಿದ್ದಾರೆ. ಪೊಲೀಸರು ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಜೆಸಿಬಿ ಯಂತ್ರಗಳ ಸಹಾಯದಲ್ಲಿ ಹೆದ್ದಾರಿ ರಸ್ತೆ ಬದಿಯಲ್ಲಿ ಹಳ್ಳತೋಡಿ ಸಿಮೆಂಟ್‌ ಪೈಪ್‌ ಒಡೆದು ಹಾಕಿದ್ದಾರೆ.ಗೋವಿಂದರಾಜು ಪೈಪ್‌ನೊಳಗೆ ಇರುವುದನ್ನು ಖಾತ್ರಿಪಡಿಸಿಕೊಂಡು ಧೈರ್ಯ ತುಂಬಿ, ಆಮ್ಲ ಜನಕ ಪೂರೈಸಿದ್ದಾರೆ. ತದ ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿಸಹ ಸುಮಾರು 10-15 ಅಡಿ ತೆವಳಿ ರಾಜಣ್ಣರನ್ನುರಕ್ಷಿಸಿದ್ದಾರೆ.

ಕುಟುಂಬದ ಸದಸ್ಯರ ಹರ್ಷ: ಸುಮಾರು ಒಂದುಗಂಟೆಯಕಾಲ ಹರಸಾಹಸದ ನಂತರ ಗೋವಿಂದರಾಜುರನ್ನು ಕಂಡ ಅವರ ಪತ್ನಿ, ಮಗ ವೇಣುಗೋಪಾಲಮತ್ತು ಸಂಬಂಧಿಕರು ಆನಂದಬಾಷ್ಟ ಸುರಿಸಿಮತ್ತೂಂದು ಜನ್ಮ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪೈಪ್‌ನೊಳಗಿನಿಂದ ರಾಜಣ್ಣರನ್ನು ಹೊರ ಕರೆತಂದ ದೃಶ್ಯ ಕಂಡ ಅಲ್ಲಿ ಜಾಮಾಯಿಸಿದ್ದ ನಾಗರಿಕರುಚಪ್ಪಾಳೆ ತಟ್ಟಿ ಅಗ್ನಿ ಶಾಮಕ ದಳದ ಸಿಬ್ಬಂದಿಯನ್ನುಅಭಿನಂದಿಸಿದರು. ಅಗ್ನಿ ಶಾಮಕ ದಳದ ಸಿಬ್ಬಂದಿರಾಜಣ್ಣರಿಗೆ ಕುಡಿಯುವ ನೀರು ಕೊಟ್ಟು ಉಪಚರಿಸಿದ ನಂತರ ಅವರ ಆರೋಗ್ಯ ತಪಾಸಣೆಗೆ ಜಿಲ್ಲಾಸ್ಪತ್ರೆಗೆಕರೆದೊಯ್ಯಲಾಗಿದೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

10-ramanagara

Ramanagara: ಬೆಂ.-ಮೈ. ಎಕ್ಸ್‌ ಪ್ರೆಸ್‌ವೇ ಬಿಡದಿ ಎಕ್ಸಿಟ್‌ ಬಂದ್‌

Ramanagara: ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?

Ramanagara: ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?

3-bank

Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.