ಶಿವರಾತ್ರಿ: ಅಂತರಗಂಗೆ ಪ್ರಸನ್ನ ಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ
Team Udayavani, Mar 1, 2022, 12:05 PM IST
ಕುದೂರು: ಶಿವರಾತ್ರಿ ಶಿವಭಕ್ತರಿಗೆ ಪುಣ್ಯ ದಿನವಾಗಿದ್ದು ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಅಂತರಗಂಗೆ ಪ್ರಸನ್ನ ಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಅಲಂಕಾರ ಅಭಿಷೇಕ ಶಿವನಾಮಸ್ಮರಣೆ ರುದ್ರ ಹೋಮ ಗಣ ಹೋಮ ನವಗ್ರಹ ಹೋಮ ಅತ್ಯಂತ ವೈಭವದಿಂದ ನಡೆಯುತ್ತಿದೆ.
ಯುವಕರ ಸಾಧನೆ: ನಮ್ಮಲ್ಲಿ ಯುವಶಕ್ತಿ ಸದ್ಬಳಕೆಯಾಗುತ್ತಿಲ್ಲ ಎಂಬ ಆರೋಪವಿದೆ ಆದರೆ ಕುದೂರು ಯುವಕರು ಈ ಅಪವಾದಕ್ಕೆ ಹೊರತಾಗಿದ್ದಾರೆ ಶ್ರೀ ಗಂಗಾಧರೇಶ್ವರ ಯುವಕ ಸಂಘ ಕಟ್ಟಿಕೊಂಡು ಶಿಥಿಲ ಅವಸ್ಥೆಯಲ್ಲಿದ್ದ ಪುರಾಣಪ್ರಸಿದ್ಧ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ಕಂಗೊಳಿಸುವಂತೆ ಮಾಡಿದ್ದಾರೆ ಬೆಂಗಳೂರಿನ ನಂದಕುಮಾರ್. ಮಾಜಿ ಸಂಸದೆ ತೇಜಸ್ವಿನಿ ಗೌಡ. ಗ್ರಾಮದ ಹನುಮಂತರಾಯಪ್ಪ .ಕೃಷ್ಣಮೂರ್ತಿ .ಶೇಖರ್ ಮತ್ತು ಗ್ರಾಮಸ್ಥರು ಯುವಕರು ಸಹಕಾರ ನೀಡಿದ್ದಾರೆ. 7 ವರ್ಷಗಳ ಹಿಂದೆ ಈ ದೇವಾಲಯ ಜೂಜು. ಕುಡಿತ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿತ್ತು .ಗ್ರಾಮದ ಯುವಕರು ಅಕ್ರಮ ಚಟುವಟಿಕೆ ತಡೆಯುವ ನಿಟ್ಟಿನಲ್ಲಿ ದೇವಾಲಯ ಕಾರ್ಯ ಕೈಗೊಂಡರು ಈಗ ತೀರ್ಮಾನ ಮಾಡಿದ ಯುವಕರಲ್ಲ ವಿದ್ಯಾವಂತರಲ್ಲ. ಹಣವಂತರ ಅಲ್ಲ ಬದಲಾಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವವರು.
ಕರ್ನಾಟಕದಲ್ಲಿ 2 ಅಂತರಗಂಗೆ ಗಳಿವೆ ಒಂದು ಕೋಲಾರ ಜಿಲ್ಲೆಯಲ್ಲಿ ಇದ್ದರೆ ಮತ್ತೊಂದು ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕುದೂರು ಗ್ರಾಮದಲ್ಲಿದೆ. ಈ ದೇವಾಲಯದಲ್ಲಿ ಶ್ರೀ ಪ್ರಸನ್ನ ಗಂಗಾಧರೇಶ್ವರ ಪಾರ್ವತಿದೇವಿ ಒಳಗೊಂಡಂತೆ 14 ದೇವಾಲಯಗಳಿವೆ ಅದರಲ್ಲಿ ಬಹಳವಾಗಿದೆ ಅದರಲ್ಲಿ ಷಣ್ಮುಖ ವಿಗ್ರಹ ಬಹಳ ಅಪರೂಪವಾಗಿದೆ ಶಿಲ್ಪದ ಹಿಂದೆ ಮತ್ತು ಮುಂದೆ ಒಂದೇ ರೀತಿಯ ಐದು ಮುಖಗಳನ್ನು ಕೆತ್ತಿ ಶಿಲ್ಪಿ ನೈಪುಣ್ಯತೆ ಮೆರೆದಿದ್ದಾನೆ ದೇವಾಲಯದ ಮುಂದೆ ಸುಂದರವಾದ ಕಲ್ಯಾಣಿ ಇದೆ ಅಂತರ್ಜಲ ಬರ್ತಿದೆ ಆದರೆ ಕಲ್ಯಾಣಿಯ ಅಂದ ಕೇಳಬಾರದೆಂದು ಕೃತಕ ನೀರು ವ್ಯವಸ್ಥೆ ಕಲ್ಪಿಸಲಾಗಿದೆ ಕುದೂರಿನ ಅಂತರಗಂಗೆಗೂ.ಶಿವಗಂಗೆಯ ಪಾತಾಳಗಂಗೆ ಅನ್ಯೋನ್ಯ ಸಂಬಂಧವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nandini Milk ಮತ್ತಷ್ಟು ತುಟ್ಟಿ? ಶೀಘ್ರವೇ ದರ ಪರಿಷ್ಕರಣೆ: ಸಿದ್ದರಾಮಯ್ಯ ಸುಳಿವು
CM Siddaramaiah ಸುಳ್ಳು ಹೇಳುವ ಬಿಜೆಪಿ ನಂಬಬೇಡಿ
Ramanagara: ಎಚ್ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ
Ramnagar: ಜಿಲ್ಲೆಯಲ್ಲಿ 70ಕ್ಕೂ ಹೆಚ್ಚು ಕಿಮೀ ಎಸ್ಟಿಆರ್ಆರ್ ರಸ್ತೆ
Ramanagar: ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಬಿಜೆಪಿಗನಿಂದ ಲೈಂಗಿಕ ಕಿರುಕುಳ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.