![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Nov 20, 2020, 12:54 PM IST
ರಾಮನಗರ: ಟೊಯೋಟಾ ಲಾಕೌಟ್ ಮತ್ತು ನೌಕರರ ಮುಷ್ಕರ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಟೊಯೋಟಾಕಂಪನಿ ಲಾಕೌಟ್ ತೆರವುಗೊಳಿಸಿತ್ತಾದರೂ, ನೌಕರರು ತಮ್ಮ ಮುಷ್ಕರವನ್ನು ಗುರು ವಾರವೂ ಮುಂದುವರಿಸಿದ್ದಾರೆ.
ಟೊಯೋಟಾ ಹೇಳಿಕೆ: ಟೊಯೋಟಾಕಿರ್ಲೋಸ್ಕರ್ ಮೋಟಾರ್ (ಟಿಕೆಎಂ)ಕಂಪನಿ ಗುರುವಾರ ಲಾಕೌಟ್ ತೆರವುಗೊಳಿಸಿದೆ. ಸರ್ಕಾರ ಲಾಕೌಟ್ ನಿಷೇಧಿಸಿ ಹೊರಡಿಸಿರುವ ಆದೇಶದ ಅನುಸಾರ ಲಾಕೌಟ್ ತೆರ ವಾಗಿದೆ. ಮೊದಲ ಶಿಫ್ಟ್ ಕಾರ್ಯಾರಂಭವಾಗುತ್ತಿದೆ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ತನ್ನ ನೌಕರರು ಸೇರಿದಂತೆ ಸಂಬಂಧಿಸಿದ ಎಲ್ಲರ ಯೋಗಕ್ಷೇಮ ಕಾಯಲು ಬದ್ಧವಾಗಿದೆ. ಸ್ಪರ್ಧಾತ್ಮಕ ಪರಿಹಾರ ಪ್ಯಾಕೇಜ್ಗಳು ಮತ್ತು ಶಾಸನಬದ್ಧ ಅವಶ್ಯಕತೆಗಳ ಮೇಲೆ ಮತ್ತು ಅದಕ್ಕಿಂತ ಹೆಚ್ಚಿನ ವಿಶೇಷ ಕಲ್ಯಾಣ ಕ್ರಮಗಳನ್ನು ಒದಗಿಸುತ್ತಿದೆ ಎಂದು ಹೇಳಿಕೊಂಡಿದೆ.
ನೌಕರರ ನಿಲುವು: ಟೊಯೋಟಾ ಲಾಕೌಟ್ ತೆರವಾಗಿದ್ದರೂ, ಮುಷ್ಕರ ಹೂಡಿದ್ದ ನೌಕರರು ಗುರುವಾರ ಕೆಲಸಕ್ಕೆ ಹಾಜರಾಗಲಿಲ್ಲ. ಮುಷ್ಕರದ ಸ್ಥಳದಲ್ಲೇ ನೌಕರರು ಕುಳಿತಿದ್ದರು. ಮುಷ್ಕರ ನಡೆಸುವುದನ್ನು ಸರ್ಕಾರ ನಿಷೇಧಿಸಿದೆ ಎಂದು ಸ್ಥಳಕ್ಕಾಗಮಿಸಿದ ಪೊಲೀಸರು ನೌಕರರಿಗೆ ತಿಳಿ ಹೇಳಿದರು. ಆದರೆ, ಕಾರ್ಮಿಕ ಸಂಘದ ಪದಾಧಿಕಾರಿ ಗಳು ತಾವು ಸಂಘದ ವಿವಿಧ ವಿಭಾಗಗಳ ಮುಖ್ಯಸ್ಥರ ಸಭೆ ನಡೆಸುತ್ತಿರುವುದಾಗಿ ತಿಳಿಸಿದರು. ತಾವು ಸರ್ಕಾ ರದ ಆದೇಶಕ್ಕೆ ಗೌರವ ಕೊಟ್ಟು ಮುಷ್ಕರ ನಡೆಸುತ್ತಿಲ್ಲ, ಆದರೆ ಸಭೆ ನಡೆಸುತ್ತಿರುವುದಾಗಿ ತಿಳಿಸಿದರು.
ಅಮಾನತ್ತುಗೊಂಡಿರುವ ನೌಕರರ ಆದೇಶ ರದ್ದು ಮಾಡಬೇಕು ಎಂಬ ಬೇಡಿಕೆ ಸೇರಿ ವಿವಿಧ ಬೇಡಿಕೆ ಈಡೇರಬೇಕು ಎಂಬುದು ತಮ್ಮ ಆಗ್ರಹ. ಬೇಡಿಕೆ ಈಡೇರುವವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದಿರುವ ನೌಕರರ ಸಂಘದ ಪದಾಧಿಕಾರಿಗಳು, ಸಂಘಟನೆಯೊಳಗೆ ಚರ್ಚೆಗಳ ನಂತರ ನೌಕರರ ನಿರ್ಧಾರ ಪ್ರಕಟಿಸಿವುದಾಗಿ ತಿಳಿಸಿದ್ದಾರೆ.
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
Ramanagara: ಬೆಂ.-ಮೈ. ಎಕ್ಸ್ ಪ್ರೆಸ್ವೇ ಬಿಡದಿ ಎಕ್ಸಿಟ್ ಬಂದ್
Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?
Kudur: ಬಿಡಿಸಿಸಿ ಬ್ಯಾಂಕ್ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ
You seem to have an Ad Blocker on.
To continue reading, please turn it off or whitelist Udayavani.