ನೀರಿಗಾಗಿ ಗೋಳಾ(ಕೆ)ದಲ್ಲಿ ನಿತ್ಯ ಗೋಳಾಟ

ಶಾಲೆ ಬಿಟ್ಟು ನೀರು ತರಲು ತೆರಳುತ್ತಿದ್ದಾರೆ ಮಕ್ಕಳು

Team Udayavani, Jun 6, 2019, 12:38 PM IST

06-June-21

ಶಹಾಬಾದ: ಗೋಳಾ (ಕೆ) ಗ್ರಾಮದ ನಿಜಾಮ ಬಜಾರ್‌ನಲ್ಲಿರುವ ಕಸ ಕಡ್ಡಿಯಿಂದ ತುಂಬಿ ಗಬ್ಬೆದ್ದು ನಾರುತ್ತಿರುವ ಬಾವಿ.

ಮಲ್ಲಿನಾಥ ಜಿ.ಪಾಟೀಲ
ಶಹಾಬಾದ:
ಬಿಸಿಲಿನ ತಾಪ, ಅಂತರ್ಜಲ ಕುಸಿತದಿಂದ ಕುಡಿಯಲು, ಬಟ್ಟೆ ಒಗೆಯಲು, ಮುಖ ತೊಳೆಯಲು ನೀರಿಲ್ಲದೇ ಜನ ನಿತ್ಯ ಪರದಾಡುವಂತಾಗಿದ್ದು, ನಿತ್ಯ ಕೆಲಸ-ಕಾರ್ಯ ಬಿಟ್ಟು ಬೆಳಗ್ಗೆಯಿಂದ ಸಂಜೆ ವರೆಗೂ ನೀರಿಗಾಗಿ ಅಲೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ತೊನಸನಹಳ್ಳಿ (ಎಸ್‌) ಗ್ರಾಪಂ ವ್ಯಾಪ್ತಿಯ ಗೋಳಾ (ಕೆ) ಗ್ರಾಮದ ನಿತ್ಯ ಗೋಳು.

ಗೋಳಾ (ಕೆ) ಗ್ರಾಮ ಕಾಗಿಣಾ ನದಿ ಪಕ್ಕದಲ್ಲಿದ್ದರೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಕೊಡ ನೀರಿಗೂ ಪರಿತಪಿಸುವಂತೆ ಆಗಿದೆ. ಗ್ರಾಮದಲ್ಲಿ ಸುಮಾರು ಐದು ಸಾವಿರ ಜನಸಂಖ್ಯೆಯಿದೆ. ಗ್ರಾಮದ ಮುಖಂಡರೇ ಗ್ರಾಪಂ ಅಧ್ಯಕ್ಷರಾದರೂ ನೀರಿಗೆ ಬರವಿದೆ. ಅದರಲ್ಲೂ ಗ್ರಾಮದ ಹೊಸಕೇರಿ, ನಿಜಾಮ ಬಜಾರ್‌ನಲ್ಲಿ ನೀರಿಗೆ ತೀವ್ರ ಬರವಿದೆ. ಕಳೆದ 20 ದಿನಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ಶಾಲೆಗೆ ಹೋಗುವ ಮಕ್ಕಳನ್ನು ಬಿಡಿಸಿ ನೀರು ತರಲು ಕಳುಹಿಸಲಾಗುತ್ತಿದೆ. ಇದರಿಂದ ಮಕ್ಕಳ ಭವಿಷ್ಯ ಡೋಲಾಯಮಾನ ಎನ್ನುವಂತಾಗಿದೆ.

ಇರುವ ಎರಡು ಕೊಳವೆ ಬಾವಿಯಲ್ಲಿ ಅಂತರ್ಜಲ ಕಡಿಮೆಯಾದ ಕಾರಣ ಮಹಿಳೆಯರು ರಾತ್ರಿ-ಹಗಲು ಎನ್ನದೇ ನೀರಿಗಾಗಿ ನೂರಾರು ಕೊಡಗಳನ್ನಿಟ್ಟು ಸರದಿಯಲ್ಲಿ ನಿಲ್ಲುವಂತಾಗಿದೆ. ಕುಡಿಯುವ ನೀರಿಗಾಗಿ ಪೈಪೋಟಿಗಿಳಿದು ವಾದಕ್ಕಿಳಿಯುವಂತ ಘಟನೆಗಳು ನಡೆಯುತ್ತಿವೆ. ನಿಜಾಮ ಬಜಾರ್‌ನಲ್ಲಿ ಇರುವ ಒಂದು ಬಾವಿಯಲ್ಲಿ ನೀರು ಗಬ್ಬೆದ್ದು ನಾರುತ್ತಿದೆ. ಅಲ್ಲದೇ ಕಳೆದ ಎರಡು ತಿಂಗಳ ಹಿಂದಷ್ಟೇ ಮಹಿಳೆಯೊಬ್ಬಳು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆ ಶರೀರವನ್ನು ತೆಗೆದು ಹಾಕಲಾಗಿತ್ತು. ಗ್ರಾಮಸ್ಥರು ಬಾವಿ ಸ್ವಚ್ಛಗೊಳಿಸಲು ಗ್ರಾ.ಪಂ.ಗೆ ತಿಳಿಸಿದ್ದರು. ಗ್ರಾಪಂ ಅಧ್ಯಕ್ಷರು ಸ್ಥಳಕ್ಕೆ ಧಾವಿಸಿ ಮೋಟಾರ ಅಳವಡಿಸಿ ನೀರನ್ನು ಹೊರತೆಗೆಯಲು ಕ್ರಮ ಕೈಗೊಂಡಿದ್ದರು. ಆದರೆ ವಿದ್ಯುತ್‌ ಟಿಸಿ ಸಮಸ್ಯೆಯಿಂದ ಸ್ವಚ್ಛಗೊಳಿಸುವ ಕಾರ್ಯ ನಿಂತು ಹೋಗಿದ್ದು, ಜನರು ನೀರಿಗಾಗಿ ಹಾತೊರೆಯುವುದು ಮಾತ್ರ ನಿಂತಿಲ್ಲ. ಈ ಹಿಂದೆ ಶಹಾಬಾದ ನಗರಸಭೆ ಹಳೆ ಜಾಕವೆಲ್ ಮುಖಾಂತರ ನಗರಕ್ಕೆ ಸರಬರಾಜು ಮಾಡುವ ನೀರಿನ ಪೈಪಲೈನ್‌ ಮೂಲಕ ಗ್ರಾಮಕ್ಕೆ ನೀರು ಸರಬರಾಜಾಗುತ್ತಿತ್ತು. ಇದರಿಂದ ಯಾವುದೇ ತೊಂದರೆ ಇರಲಿಲ್ಲ. ಆದರೆ ನಗರಸಭೆಯವರು ಎಡಿಬಿ ಯೋಜನೆ ಮೂಲಕ 24×7 ಶಾಶ್ವತ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡ ನಂತರ ಈ ಹಳೆ ಜಾಕವೆಲ್ನ ಪೈಪ್‌ಲೈನ್‌ ಬಂದ್‌ ಮಾಡಿದ್ದಾರೆ. ಇದೇ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ನಿಜಾಮ ಬಜಾರ್‌ನ ರತನರಾಜ ಕೋಬಾಳಕರ್‌.

ಎಡಿಬಿ ನಿರ್ಲಕ್ಷ್ಯ: ಎಡಿಬಿಯವರು ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಭೀಮಾ ನದಿಯಿಂದ ಶಹಾಬಾದ ನಗರಕ್ಕೆ ಸರಬರಾಜು ಮಾಡುತ್ತಿದ್ದಾರೆ. ಈ ಪೈಪಲೈನ್‌ ಗೋಳಾ (ಕೆ) ಗ್ರಾಮದ ಮೂಲಕ ಹಾಯ್ದು ಹೋಗುವಾಗ ಗ್ರಾಮಸ್ಥರು ನಮಗೆ ನೀರು ಕೊಟ್ಟರೇ ಮಾತ್ರ ಪೈಪ್‌ಲೈನ್‌ನ್ನು ನಮ್ಮ ಗ್ರಾಮದಲ್ಲಿ ಹಾಕಲು ಅನುಮತಿ ನೀಡುತ್ತೇವೆ. ಇಲ್ಲವಾದರೆ ಪೈಪ್‌ಲೈನ್‌ ಹಾಕಲು ಬಿಡುವುದಿಲ್ಲ ಎಂದಾಗ, ಎಡಿಬಿ ಅಧಿಕಾರಿಗಳು ಗೋಳಾ ಗ್ರಾಮದಲ್ಲಿ ವಾಲ್ ಮಾಡಿದ್ದಾರೆಯೇ ಹೊರತು ಪೈಪ್‌ಲೈನ್‌ ಹಾಕಿಲ್ಲ. ಎರಡು ವರ್ಷದಿಂದ ನೀರಿನ ಸಮಸ್ಯೆಯಿದೆ. ಪೈಪ್‌ಲೈನ್‌ ಹಾಕಿ ನೀರು ಕೊಡಿ ಎಂದು ಗ್ರಾಮಸ್ಥರು ಅಂಗಲಾಚಿದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಇಷ್ಟೆಲ್ಲ ಆದರೂ ಸಮಸ್ಯೆಗೆ ಸ್ಪಂದಿಸುವ ಗೋಜಿಗೆ ಗ್ರಾಪಂ ಅಥವಾ ತಾಲೂಕಾ ಆಡಳಿತ ಮುಂದಾಗದೇ ಇರುವುದು ಮಾತ್ರ ವಿಪರ್ಯಾಸವೇ ಸರಿ.

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewewqe

Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

SIddu-Phone

Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್‌ಪಿಗೆ ಕರೆ 

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.