ಮಣ್ಣು ಒಯ್ಯಲು ಅಗೆದ ತಗ್ಗಲ್ಲಿ: ನೀರು ಶೇಖರಣೆ

ಈಜು ಕಲಿಯಲು ಯುವಕರ ಆಗಮನ

Team Udayavani, May 9, 2019, 5:33 PM IST

9-May-34

ಶಹಾಪುರ: ಬೆನಕನಹಳ್ಳಿ ಗ್ರಾಮ ಸಮೀಪದ ಜಮೀನೊಂದರಲ್ಲಿ ಮಣ್ಣು ಒಯ್ಯಲು ತೋಡಿದ್ದ ತೆಗ್ಗಿನಲ್ಲಿ ನೀರಿನ ಸೆಲೆ ಕಂಡು ಬಂದ ದೃಶ್ಯ.

ಶಹಾಪುರ: ಕೆಂಪು ಮಣ್ಣು ಒಯ್ಯಲು ಜೆಸಿಬಿ ಮೂಲಕ ಭೂಮಿ ಅಗೆಯುವಾಗ 50 ಅಡಿ ಅಗೆದ ಮೇಲೆ ಆಳದಲ್ಲಿ ನೀರಿನ ಸೆಲೆ ಉಂಟಾಗಿದ್ದು, ಅಂದಾಜು ಒಂದು ಎಕರೆದಷ್ಟು ಭೂಮಿಯಲ್ಲಿ 25ರಿಂದ 30 ಅಡಿ ನೀರು ತುಂಬಿಕೊಂಡಿದ್ದು, ಯುವಕರ ಮೈ ಮನ ತಣಿಸುವ ಪ್ರಕೃತಿ ನಿರ್ಮಿತ ಈಜುಕೊಳದಂತಾಗಿದೆ.

ತಾಲೂಕಿನ ಬೆನಕಹಳ್ಳಿ ಗ್ರಾಮ ಸಮೀಪ ಜಮೀನೊಂದರಲ್ಲಿ ಮಣ್ಣು ಅಗೆಯಲಾಗಿದೆ. ಪ್ರಸ್ತುತ ಇಲ್ಲಿಗೆ ನೂರಾರು ಯುವಕರು ಈಜು ಕಲಿಯಲು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಈ ಬಾರಿ ಮಳೆ ಅಭಾವದಿಂದ ಸಾಕಷ್ಟು ಹಳ್ಳ, ಕೊಳ್ಳ ತೆರೆದ ಬಾವಿಗಳಲ್ಲಿ ನೀರು ಬತ್ತಿದ್ದು, ಸಂಕಷ್ಟ ಎದುರಿಸುವ ಸಂದರ್ಭದಲ್ಲಿ ಭೂಮಿಯೊಂದರಲ್ಲಿ ಅಂತರ್ಜಲ ಪತ್ತೆಯಾಗಿ ನೀರು ತುಂಬಿಕೊಂಡಿರುವುದು ಜನರಲ್ಲಿ ಉತ್ಸಾಹ ಮೂಡಿಸಿದೆ.

ಬರದಿಂದ ಕಂಗಾಲಾದ ಜನಕ್ಕೆ ಕುಡಿಯಲು ನೀರು ದೊರೆಯದಂತ ಸ್ಥಿತಿಯಲ್ಲಿ ಯುವಕರಿಗೆ ಈಜಾಡಲು ಇಷ್ಟೊಂದು ದೊಡ್ಡ ಮಟ್ಟದಲ್ಲಿ ನೀರಿನ ಸೆಲೆ ಕಂಡು ಬಂದಿದ್ದು, ನಿಜಕ್ಕೂ ಆಶ್ಚರ್ಯವಾಗಿದೆ ಎನ್ನುತ್ತಾರೆ ಇಲ್ಲಿಗೆ ಆಗಮಿಸಿದ ಯುವಕರು.

ನಗರ ಸಮೀಪದ ಬೆನಕನಹಳ್ಳಿ ಗ್ರಾಮದ ಮೇಲ್ಭಾಗ ರೈಲು ನಿಲ್ದಾಣ ಕಾಮಗಾರಿ ಮತ್ತು ಈ ಮೂಲಕ ಹಾದು ಹೋಗಿರುವ ರೈಲು ಹಳಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕಾಮಗಾರಿಗಾಗಿ ಸಾಕಷ್ಟು ಕೆಂಪು ಮಣ್ಣು ಅಗತ್ಯವಿರುವ ಕಾರಣ ರೈಲು ಹಳಿ ನಿರ್ಮಾಣದ ಗುತ್ತಿಗೆದಾರರು ಸಮೀಪದ ಕೆಂಪು ಮಣ್ಣು ಹೊಂದಿದ ಜಮೀನುಗಳನ್ನು ದುಡ್ಡು ಕೊಟ್ಟು ಗುತ್ತಿಗೆ ಪಡೆದು ಆ ಮಣ್ಣು ತೋಡಿ ಅದನ್ನು ತೆಗೆದುಕೊಂಡು ಬಂದು ಕಾಮಗಾರಿಗೆ ಬಳಕೆ ಮಾಡುತ್ತಿದ್ದಾರೆ.

ಬೆನಕನಹಳ್ಳಿ ಸಮೀಪದ ಓರ್ವ ರೈತನ ಜಮೀನು ಪಡೆದಿದ್ದ, ರೈಲು ಹಳಿ ನಿರ್ಮಾಣ ಗುತ್ತಿಗೆದಾರರು, ಇಲ್ಲಿ ನಿಯಮಕ್ಕೂ ಮೀರಿ ಹೆಚ್ಚು ಆಳ ತೋಡಿದ್ದು, ನೀರಿನ ಸೆಲೆ ಬುಗ್ಗೆ ಮೇಲೆದ್ದಿವೆ. ಇದರಿಂದಾಗಿ ತೋಡಿದ್ದ ಅಷ್ಟು ಆಳ ನೀರಿನಿಂದ ಶೇಖರಣೆ ಆಗುತ್ತಿದೆ.

ರೈಲು ಹಳಿ ಕಾಮಗಾರಿಗೆ ಇಲ್ಲಿಂದ ಮಣ್ಣು ಒಯ್ಯುತ್ತಿದ್ದರು. ಸಾಕಷ್ಟು ಆಳ ತೋಡಿದ್ದು, ನೀರಿನ ಸೆಲೆ ಎದ್ದಿವೆ. ಅದರಿಂದ ಇಡಿ ತಗ್ಗು ಪ್ರದೇಶ ನೀರಿನಿಂದ ತುಂಬುತ್ತಿದೆ. ನೀರು ಚೆನ್ನಾಗಿವೆ. ಸದ್ಯ ಬಿಸಿಲ ಬೇಗೆ ತಣಿಸಿಕೊಳ್ಳಲು ಯುವ ಸಮೂಹಕ್ಕೆ ಸಹಕಾರವಾಗಿದೆ.
ಶರಣು ಕಟ್ಟಿಮನಿ, ಸ್ಥಳೀಯ

ಟಾಪ್ ನ್ಯೂಸ್

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.