![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 10, 2019, 3:37 PM IST
ಶಿವಮೊಗ್ಗ: ಸೇತುವೆ ಮೇಲಿನಿಂದ ನದಿ ನೀರು ವೀಕ್ಷಿಸಲು ಬಂದಿದ್ದ ಇಬ್ಬರಿಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಘಟನೆ ಶನಿವಾರ ತಾಲೂಕಿನ ಚೊರಡಿ ಬಳಿಯ ಕುಮುದ್ವತಿಯಲ್ಲಿ ನಡೆದಿದೆ.
ಬೊಲೆರೋ ಡಿಕ್ಕಿ ಹೊಡೆದು ಓರ್ವ ನೀರುಪಾಲಾಗಿದ್ದು ಮತ್ತೋರ್ವನ್ನು ರಕ್ಷಿಸಲಾಗಿದೆ. ಕುಂಸಿ ಗ್ರಾಮದ ಅಮರನಾಥ್ (55)ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ. ಅದೇ ಗ್ರಾಮದ ನಾಗರಾಜ್(50) ನನ್ನು ರಕ್ಷಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಕುಮುದ್ವತಿ ನದಿ ಉಕ್ಕಿ ಹರಿಯುತ್ತಿದ್ದು, ಸೇತುವೆ ಭಾಗಶಃ ಮುಳುಗಡೆಯಾಗಿದೆ.
ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
You seem to have an Ad Blocker on.
To continue reading, please turn it off or whitelist Udayavani.