
Anandapura: ಮದುವೆಯಾಗುತ್ತೇನೆ ಎಂದು ನಂಬಿಸಿ ಕೊಲೆಗೈದು ದೇಹವನ್ನು ಹೂತಿಟ್ಟ ಪ್ರಿಯಕರ…
Team Udayavani, Jul 24, 2024, 7:37 PM IST

ಆನಂದಪುರ: ಜೀವನದಲ್ಲಿ ಸುಂದರವಾಗಿ ಬದುಕಬೇಕು ಎಂದು ಬಣ್ಣಬಣ್ಣದ ಕನಸುಗಳನ್ನು ಕಟ್ಟಿಕೊಂಡಿದ್ದ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿ ಕೊಲೆಗೈದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಹತ್ಯೆಯಾದ ಯುವತಿಯನ್ನು ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಣವಂತೆ ಸಮೀಪ ಹಚ್ಚರಡಿ ಗ್ರಾಮದ ಸೌಮ್ಯ ಎನ್ನಲಾಗಿದೆ.
ಏನಿದು ಪ್ರಕರಣ :
ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಣವಂತೆ ಸಮೀಪ ಹಚ್ಚರಡಿ ಗ್ರಾಮದ ಸೌಮ್ಯಳನ್ನು ಕೊಪ್ಪದ ಭರತ್ ಫೈನಾನ್ಸಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ತಾಳಗುಪ್ಪ ಮೂಲದ ಸೃಜನ್ ಸೌಮ್ಯಳನ್ನು ಪ್ರೀತಿಸಿ ಮದುವೆಯಾಗುತ್ತೇನೆಂದು ಹೇಳಿದ್ದು, ತಾನು ಪ್ರೀತಿಸಿದ ಸೌಮ್ಯ ದಲಿತ ಜನಾಂಗಕ್ಕೆ ಸೇರಿದವಳು ಎಂದು ತಿಳಿದು ನಿರಾಕರಿಸಿದ.
ಈ ವಿಚಾರವಾಗಿ ಕಳೆದ ಒಂದು ವರ್ಷದ ಹಿಂದೆ ಸೌಮ್ಯ ಆತ್ಮಹತ್ಯೆಗೆ ಯತ್ನಿಸಿದಳು. ಈ ವಿಷಯ ಕೊಪ್ಪ ಪೊಲೀಸ್ ಠಾಣೆಯ ಪೊಲೀಸರು ಸೃಜನ್ ಅನ್ನು ಕರೆಸಿ ಸೌಮ್ಯಳ ಪ್ರೀತಿಯ ಬಗ್ಗೆ ವಿಚಾರಿಸಿದಾಗ ಇನ್ನು ಆರು ತಿಂಗಳು ಬಿಟ್ಟು ಮದುವೆಯಾಗುತ್ತೇನೆಂದು ಪೊಲೀಸ್ ಠಾಣೆಯಲ್ಲಿ ತಿಳಿಸಿದ್ದಾನೆಂದು ಸೌಮ್ಯಳ ಅಕ್ಕ ಸುಮಾ ತಿಳಿಸಿದ್ದಾಳೆ.
ಸೌಮ್ಯ ನರ್ಸಿಂಗ್ ಕಲಿಯುತ್ತಿದ್ದಳು ಜುಲೈ 2ರಂದು ಈಕೆ ಕಾಣೆಯಾಗಿದ್ದಾಳೆ, ಇತ್ತ ಮನೆಯವರು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅನುಮಾನಗೊಂಡ ಪೊಲೀಸರು ಸೃಜನನ್ನು ವಿಚಾರಣೆ ನಡೆಸಿದಾಗ ಸಾಗರ ದಿಂದ ಆಕೆಯನ್ನು ಬಸ್ಸಿನಲ್ಲಿ ಕಳಿಸಿರುವುದಾಗಿ ಸೃಜನ್ ತಿಳಿಸಿದ್ದ ಎಂದು ಕೊಲೆಯಾದ ಸೌಮ್ಯಳ ಅಕ್ಕ ಸುಮಾ ಹೇಳಿದ್ದಾಳೆ.
ಆದರೆ ಯುವತಿಯ ಮೊಬೈಲ್ ರಿಪ್ಪನ್ ಪೇಟೆಯ ಸಮೀಪ ಹೆದ್ದಾರಿಪುರದಲ್ಲಿ ಲೊಕೇಶನ್ ಪತ್ತೆಯಾಗಿದ್ದು. ಸೃಜನ್ ಸೌಮ್ಯಳನ್ನು ಅಲ್ಲಿ ಕೊಲೆ ಮಾಡಿ. ದೇಹವನ್ನು ಆನಂದಪುರ ಸಮೀಪದ ಮುಂಬಾಳು ರೈಲ್ವೆ ಗೇಟ್ ನ ಪಕ್ಕದಲ್ಲಿ ಮದ್ಲೆಸರ ಗ್ರಾಮದ ರಸ್ತೆಯ ಪಕ್ಕದಲ್ಲಿ ನೀರಿನ ಪೈಪ್ ಅಳವಡಿಕೆಗೆ ತೆಗೆದಿರುವ ಗುಂಡಿಯಲ್ಲಿ ಹೂತು ಹಾಕಿರುವುದಾಗಿ ತಿಳಿದು ಬಂದಿದೆ.
ಸೌಮ್ಯ ಕುಟುಂಬದವರು ಕೊಲೆ ಮಾಡಿದ ಕಟುಕನಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನೊಂದ ಕುಟುಂಬದವರು ಆನಂದಪುರಕ್ಕೆ ಬಂದಿದ್ದು ಸಂಜೆಯಾದರೂ ಕೊಲೆ ಮಾಡಿ ಹೂತಿರುವ ಯುವತಿಯ ಶವವನ್ನು ಮಾತ್ರ ತೆಗೆದಿರಲಿಲ್ಲ.
ಇದನ್ನೂ ಓದಿ: Vitla: ಅಂಗನವಾಡಿಗೆ ಕನ್ನ… ಗರ್ಭಿಣಿಯರಿಗೆ, ಮಕ್ಕಳಿಗೆ ತರಿಸಿದ್ದ ಆಹಾರ ಸಾಮಗ್ರಿ ಕಳವು
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BSY: ಬಿಎಸ್ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್ಪಿಪಿ

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ

Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ

Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.