Arasalu: ಅದೇ ಸ್ಥಳದಲ್ಲಿ ಬಿತ್ತು ಮತ್ತೊಂದು ಮರ; ರೈಲು ಸಂಚಾರದಲ್ಲಿ ಮತ್ತೆ ವ್ಯತ್ಯಯ
Team Udayavani, Jul 18, 2024, 5:41 PM IST
ಶಿವಮೊಗ್ಗ: ಅರಸಾಳು ಸಮೀಪದ ಬಟಾಣಿಜೆಡ್ಡು ಬಳಿ ರಾತ್ರಿ ಮರವೊಂದು ಬಿದ್ದು ರೈಲು ಸಂಚಾರಕ್ಕೆ ತೊಡಕಾಗಿತ್ತು. ಈಗ ಅದೇ ಜಾಗದಿಂದ ಕೆಲವೇ ಮೀಟರ್ ದೂರದಲ್ಲಿ ಮತ್ತೊಂದು ಮರ ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದು, ಮತ್ತೆ ರೈಲು ಸಂಚಾರದಲ್ಲಿ ತೊಡಕಾಗಿದೆ.
ಅರಸಾಳು ರೈಲ್ವೆ ನಿಲ್ದಾಣದಿಂದ ಒಂದು ಕಿ.ಮೀ ದೂರದಲ್ಲಿರುವ ಬಟಾಣಿಜೆಡ್ಡು ಬಳಿ ಬುಧವಾರ ರಾತ್ರಿ ಗಾಳಿ, ಮಳೆಗೆ ಮರ ಬಿದ್ದಿತ್ತು. ಮರ ಬಿದ್ದ ರಭಸಕ್ಕೆ ವಿದ್ಯುತ್ ಲೈನ್ ಕೂಡ ತುಂಡಾಗಿತ್ತು. ಹಳಿ ಮೇಲೆ ಮರ ಬಿದ್ದಿದ್ದನ್ನು ಗಮನಿಸಿದ ಲೋಕೋ ಪೈಲೆಟ್ ರೈಲು ನಿಲುಗಡೆ ಮಾಡಿದ್ದರು. ತಕ್ಷಣ ರೈಲ್ವೆ ಸಿಬ್ಬಂದಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದರಿಂದ ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟಿದ್ದು ರೈಲು ಒಂದೂವರೆ ಗಂಟೆ ಕಾಲ ತಡವಾಯಿತು. ಬೆಳಗ್ಗೆ 7.15ಕ್ಕೆ ಶಿವಮೊಗ್ಗ ತಲುಪಬೇಕಿದ್ದ ರೈಲು 9 ಗಂಟೆಗೆ ಶಿವಮೊಗ್ಗಕ್ಕೆ ಬಂದಿತ್ತು.
ಈಗ ಅದೇ ಪ್ರದೇಶದಲ್ಲಿ ಮತ್ತೊಂದು ಮರ ಬಿದ್ದಿದ್ದು ಶಿವಮೊಗ್ಗದಿಂದ – ತಾಳಗುಪ್ಪಕ್ಕೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲು ನಿಂತಲ್ಲೇ ನಿಂತಿದೆ. ಮೈಸೂರು – ತಾಳಗುಪ್ಪ ರೈಲು ಕೆಲವೇ ನಿಮಿಷಗಳ ಹಿಂದೆ ಹೋಗಿದ್ದರಿಂದ ಬಚಾವ್ ಆಗಿದೆ. ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಪ್ರಯಾಣಿಕರು ಹೈರಾಣಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.