Thirthahalli: ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ; ಆರಗ ಜ್ಞಾನೇಂದ್ರ
Team Udayavani, Jun 1, 2024, 3:02 PM IST
ತೀರ್ಥಹಳ್ಳಿ : ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ 136 ಸೀಟ್ ಬಂದಿದೆ. ನಾವು ಏನೇ ಮಾಡಿದರು ನಡೆಯುತ್ತದೆ ಎಂಬ ಮದದ ಭಾವನೆ ಸಿದ್ದರಾಮಯ್ಯ ಮತ್ತು ತಂಡದ ತಲೆಯಲ್ಲಿ ಹೊಕ್ಕಿದೆ. ಕಳೆದ ಸಾರಿ ಬಜೆಟ್ ನಲ್ಲಿ ದಲಿತರಿಗಾಗಿ ಮೀಸಲಾಗಿಟ್ಟಿದ್ದ 11 ಸಾವಿರ ಕೋಟಿ ಹಣವನ್ನು ಬೇರೆ ಉದ್ದೇಶಕ್ಕೆ ವರ್ಗಾವಣೆ ಮಾಡಿದ್ದಾರೆ. ವಾಲ್ಮೀಕಿ ನಿಗಮಕ್ಕೆ 180 ಕೋಟಿ ಹಣ ನೀಡಿದ್ದಾರೆ ಉಳಿದ ಯಾವ ನಿಗಮದಲ್ಲೂ 180 ರೂಪಾಯಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಶನಿವಾರ ಪಟ್ಟಣದ ಕೊಪ್ಪ ಸರ್ಕಲ್ ನಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಮಾನವ ಸರಪಳಿ ಜೊತೆ ರಸ್ತೆ ತಡೆ, ಹಾಗೂ ಪ್ರತಿಭಟನೆ ನಡೆಸಿ ಮಾತನಾಡಿದ ಅವರು 180 ಕೋಟಿ ಹಣವನ್ನು ತೆಲಂಗಾಣ ರಾಜ್ಯದ ಹೈದರಾಬಾದ್ ನ ರತ್ನಾಕರ ಎಂಬ ಬ್ಯಾಂಕ್ ಗೆ ಹಣ ವರ್ಗಾವಣೆ ಮಾಡಲಾಗಿದೆ. ಅಲ್ಲಿಂದ ಒಂಬತ್ತು ಐಟಿ ಬಿಟಿ ಕಂಪನಿಗಳಿಗೆ ಹಣ ವರ್ಗಾವಣೆ ಆಗಿದೆ.ಶಿವಮೊಗ್ಗದ ಚಂದ್ರಶೇಖರ್ ಎಂಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಕೊನೆಯದಾಗಿ ಬರೆದ ಡೆತ್ ನೋಟ್ ನಲ್ಲಿ ಸರ್ಕಾರದ ಹಣೆ ಬರಹ ಮತ್ತು ಸರ್ಕಾರದ ದುರುದ್ದೇಶದ ಮಾಹಿತಿ ಬರೆದಿದ್ದಾರೆ ಎಂದು ತಿಳಿಸಿದರು.
ದರೋಡೆ ಮಾಡುವುದನ್ನು ನೋಡಿದ್ದೇವೆ ಆದರೆ ಈ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. 180 ಕೋಟಿಯನ್ನು ವಾಲ್ಮೀಕಿ ನಿಗಮಕ್ಕೆ ಜಮಾ ಮಾಡಿ ಅಲ್ಲಿಂದ ಯೂನಿಯನ್ ಬ್ಯಾಂಕ್ ನಾ ಎರಡನೇ ಶಾಖೆಗೆ ಜಮಾ ಮಾಡಿ ಅಲ್ಲಿಂದ ತೆಲಂಗಾಣಕ್ಕೆ ಹೋಗಿದೆ. ಸಿದ್ದರಾಮಯ್ಯನವರಿಗೆ ಏನಾದರು ಒತ್ತಡ ಬಂತು ಎಂದರೆ ಎಸ್ ಐ ಟಿ ತನಿಖೆ ಮಾಡುವುದು.ಇದೇಲ್ಲವೂ ನಾಮಕವಸ್ಥೆ. ಎಸ್ ಐ ಟಿ ಎಂದರೆ ಅದೇ ಪೊಲೀಸರನ್ನು ಹಾಕಿ ತನಿಖೆ ನಡೆಸುವುದು ಅಷ್ಟೇ, ಯಾವುದೇ ಪ್ರಕರಣವನ್ನು ಸಗಣಿ ಸಾರಿಸಬೇಕು ಎಂದರೆ ಅಥವಾ ಯಾವುದೇ ಪ್ರಕರಣದಲ್ಲಿ ಯಾರನ್ನಾದರೂ ಮುಗಿಸಬೇಕು ಎಸ್ ಐ ಟಿ ಮಾಡುತ್ತದೆ ಎಂದರು.
ದೇವೇಗೌಡರ ಕುಟುಂಬವನ್ನು ಮುಗಿಸಲು ವಿಶೇಷವಾದ ಎಸ್ ಐ ಟಿ ರಚನೆ ಆಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡುವುದರಲ್ಲಿ ನಮ್ಮ ಸಮಸ್ಯೆ ಇಲ್ಲ. ಆದರೆ ತನಿಖೆ ನಡೆಯುವ ದಿಕ್ಕು ನೋಡಿದರೆ ಪ್ರಾಮಾಣಿಕವಾದ ತನಿಖೆ ಅಲ್ಲ ಎಂದು ತಿಳಿಯುತ್ತದೆ. ಧಾರವಾಡದಲ್ಲಿ ನಡೆದ ಇಬ್ಬರು ಹೆಣ್ಣುಮಕ್ಕಳ ಖಗ್ಗೊಲೆ ಅದಕ್ಕೂ ಎಸ್ ಐ ಟಿ ರಚನೆ ಮಾಡಿದ್ದಾರೆ. ಇವೆಲ್ಲವೂ ಕಣ್ಣೋರೆಸುವ ತಂತ್ರ ರಾಜ್ಯಸರ್ಕಾರ ಮಾಡುತ್ತಿದೆ. ತೆಲಂಗಾಣ ಚುನಾವಣೆಯ ಜವಾಬ್ದಾರಿ ಡಿ ಕೆ ಶಿವಕುಮಾರ್ ಹೊತ್ತಿದ್ದರು. ಹಣ ವರ್ಗಾವಣೆ ಕೂಡ ತೆಲಂಗಾಣಕ್ಕೆ ಹೋಗಿದೆ ಎಂದ ಮೇಲೆ ಯಾರ ನಿರ್ದೇಶನದ ಮೇಲೆ ಹೋಗಿದೆ ಎಂದು ಗೊತ್ತಾಗುತ್ತದೆ ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸ್ವಾಭಿಮಾನ ಇದ್ದರೆ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಸಂತೋಷ್ ಎಂಬ ಅಧಿಕಾರಿಯ ಆತ್ಮಹತ್ಯೆ ಸಂಬಂಧಟ್ಟಂತೆ ಈಶ್ವರಪ್ಪನವರು ರಾಜೀನಾಮೆ ನೀಡಿದ್ದರು. ತನಿಖೆ ನಡೆದ ನಂತರ ಅವರ ತಪ್ಪಿಲ್ಲ ಎಂದು ತಿಳಿಯಿತು. ಈ ಪ್ರಕರಣದಲ್ಲೂ ಹಾಗೆ ನಡೆಯಲಿ. ಇವತ್ತು ಆ ಡೆತ್ ನೋಟ್ ನಲ್ಲಿ ಮಂತ್ರಿಯೊಬ್ಬರ ಮೌಖಿಕ ನಿರ್ದೇಶನದಂತೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಬರೆದಿದ್ದಾರೆ. ತೆಲಂಗಾಣದಲ್ಲೂ ಕಾಂಗ್ರೆಸ್ ಬರಬೇಕು ಎಂಬ ಕಾರಣಕ್ಕೆ ಹಣವನ್ನು ಕಾಂಗ್ರೆಸ್ ಮಾಡಿದ್ದಾರೆ. ಕಾಂಗ್ರೆಸ್ ಎಂದರೆ ಮೋಸ, ದರೋಡೆ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಕುಕ್ಕೆ ಪ್ರಶಾಂತ್, ಬಾಳೆಬೈಲು ರಾಘವೇಂದ್ರ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಸಂತೋಷ್ ದೇವಾಡಿಗ, ಮಧುರಾಜ್ ಹೆಗಡೆ, ಪೂರ್ಣೇಶ್ ಪೂಜಾರಿ, ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ: Kalaburgi; ವಿಪಕ್ಷದವರು ಕೇಳಿದ ಮಾತ್ರಕ್ಕೆ ಸಚಿವರು ರಾಜೀನಾಮೆ ನೀಡಬೇಕೆ: ಪ್ರಿಯಾಂಕ್ ಖರ್ಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ
Shimoga; ನಿಮಗೊಂದು ಕಾನೂನು ನಮಗೊಂದು ಕಾನೂನು ಇದೆಯೇ..: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ
Belagavi; ದಸರಾ ಬಳಿಕ ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸಿಎಂಗೆ ಪತ್ರ: ಹೆಬ್ಬಾಳಕರ್
Shimoga; ಸಿದ್ದರಾಮಯ್ಯಗೆ ನ್ಯಾಯಾಧೀಶರ ಮೇಲೂ ನಂಬಿಕೆ ಇಲ್ಲ: ಶಾಸಕ ಚನ್ನಬಸಪ್ಪ
Significant Agreement: ವನ-ವನ್ಯಜೀವಿ ಸಂರಕ್ಷಣೆಗೆ ಯತ್ನ: ಸಚಿವ ಈಶ್ವರ ಖಂಡ್ರೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Google 25th Birthday! ಗ್ಯಾರೇಜ್ನಿಂದ ಮೌಂಟ್ವಿವ್ವರೆಗೆ….ಗೂಗಲ್ ರಜತ ಸಂಭ್ರಮ
Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್ ಖಾನ್
Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್ ಬಸ್’
Israel: ಬೈರೂತ್ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ಸಾವು: ಇಸ್ರೇಲ್ ಸೇನೆ
Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.