ಭದ್ರಾವತಿ: ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರ ಪ್ರತಿಭಟನೆ
Team Udayavani, Feb 17, 2022, 3:13 PM IST
ಭದ್ರಾವತಿ: ಹಿಜಾಬ್ ಧರಿಸಿ ಬಂದಿದ್ದ ಹಳೇನಗರದ ಸಂಚಿಯ ಹೊನ್ನಮ್ಮ ಸರಕಾರಿಬಾಲಕಿಯರ ಪಪೂ ಕಾಲೇಜಿನ ಪ್ರಥಮ ಪಿಯು ಮತ್ತು ಪ್ರೌಢಶಾಲಾ ವಿಭಾಗದವಿದ್ಯಾರ್ಥಿನಿಯರು ಬುಧವಾರ ಶಾಲೆಗೆ ಹಿಜಾಬ್ ಧರಿಸಿ ಪ್ರವೇಶಿಸಲು ಪೊಲೀಸರುಹಾಗೂ ಪ್ರಾಂಶುಪಾಲರು ನಿರಾಕರಿಸಿದಾಗ ಹಿಜಾಬ್, ಹಿಜಾಬ್ ಎಂದು ಕೂಗುತ್ತಾಶಾಲೆಯ ಆವರಣದೊಳಗೆ ಧರಣಿ ಕುಳಿತರು.
230 ಮುಸ್ಲಿಂ ಬಾಲಕಿಯರ ಪೈಕಿ ಪಪೂ, ಪಿಯು 70 ಮಂದಿ,ಪ್ರೌಢಶಾಲೆಯ 136 ಮುಸ್ಲಿಂ ವಿದ್ಯಾರ್ಥಿಗಳ ಪೈಕಿ 20ಕ್ಕೂ ಅಧಿ ಕ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಶಾಲೆಗೆ 11ಗಂಟೆಗೆ ಬಂದಾಗ ಹಿಜಾಬ್ ತೆಗೆದು ಒಳಗೆ ಬರುವಂತೆ ಶಾಲೆಯವರುತಿಳಿಸಿದಾಗ ಅದಕ್ಕೆ ಒಪ್ಪದೆ ಪ್ರತಿಭಟನೆಗೆ ಕುಳಿತರು. ಆಗ ಸ್ಥಳದಲ್ಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರಿಗೆ ತಿಳಿ ಹೇಳುವಂತೆ ಸೂಚಿಸಿದರಾದರೂ ವಿದ್ಯಾರ್ಥಿನಿಯರುಯಾರದೇ ಮಾತನ್ನು ಕೇಳುವ ಮನಸ್ಥಿತಿಯಲ್ಲಿರಲಿಲ್ಲ.
ಕಾಲೇಜು ಆವರಣದಲ್ಲಿಯೇಕುಳಿತಿದ್ದರು. ಉಳಿದವರು ಶಾಲಾ ಕೊಠಡಿಗಳಿಗೆ ತೆರಳಿದ್ದರು. ಉಪಪ್ರಾಚಾರ್ಯಶಾಂತಮ್ಮ ಮತ್ತು ಶಿಕ್ಷಕರ ಶಿಕ್ಷಕಿಯರ ತಂಡ ವಿದ್ಯಾರ್ಥಿಗಳಿಗೆ ಕೊಠಡಿಗಳಿಗೆ ಹೋಗಿ,ಇಲ್ಲದಿದ್ದರೆ ಮನೆಗಳಿಗಾದರೂ ಹೋಗಿ ಇಲ್ಲಿ ಕೂರಬಾರದು. ಮನೆಗೆ ಹೋದರೆ ಆನ್ಲೈನ್ ಪಾಠ ಮಾಡಿ ಹಾಜರಿ ಸಹ ಕೊಡುವುದಾಗಿ ತಿಳಿ ಹೇಳಿದರೂ ಜಗ್ಗದೆ ಮಧ್ಯಾಹ್ನ12 ಗಂಟೆಯಾದರೂ ಕುಳಿತಿದ್ದರು.
ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ಪ್ರದೀಪ್ ನಿಕ್ಕಂ, ಉಪತಹಶೀಲ್ದಾರ್ ಮಂಜನಾಯ್ಕ, ಕಂದಾಯಾಧಿ ಕಾರಿ ನಾನೋಜಿರಾವ್, ಕ್ಷೇತ್ರ ಶಿಕ್ಷಣಾ ಧಿಕಾರಿ ಟಿ.ಎನ್. ಸೋಮಶೇಖರಯ್ಯ, ಅ ಧಿಕಾರಿಗಳಾದರವಿಕುಮಾರ್ ವಿದ್ಯಾರ್ಥಿನಿಯರಿಗೆ ತಿಳಿ ಹೇಳಿ ಸರಕಾರ ಮತ್ತು ನ್ಯಾಯಾಲಯದಆದೇಶದಂತೆ ನಾವು ಕಾನೂನು ಪಾಲನೆ ಮಾಡಬೇಕಾಗುತ್ತದೆ ಎಂದು ವಿವರಿಸಿದನಂತರ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಪ್ರವೇಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Government Failure: ಹಿಂದೂಗಳ ಮೇಲೆ ಕಾಂಗ್ರೆಸ್ ಸರಕಾರ ದಬ್ಬಾಳಿಕೆ: ಬಿಜೆಪಿ
Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
ಕುಡಿದು ಆ್ಯಂಬ್ಯುಲೆನ್ಸ್ ಚಲಾಯಿಸಿ ಟ್ಯಾಂಕರ್ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು
School; ಶೀಘ್ರವೇ ಶಾಲಾ ಮಕ್ಕಳಿಗೆ ಆ್ಯಪ್ ಆಧಾರಿತ ಹಾಜರಾತಿ?
Kundapura: ಮುಳುಗುತ್ತಿದ್ದ ಬೋಟ್ ರಕ್ಷಣೆ: 6 ಮೀನುಗಾರರು ಪಾರು
Government Failure: ಹಿಂದೂಗಳ ಮೇಲೆ ಕಾಂಗ್ರೆಸ್ ಸರಕಾರ ದಬ್ಬಾಳಿಕೆ: ಬಿಜೆಪಿ
Daily Horoscope; ಈ ರಾಶಿಯ ಅವಿವಾಹಿತರಿಗೆ ಬಾಳ ಸಂಗಾತಿ ಲಭಿಸುವ ಚಿಂತೆ.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.