Shivamogga ಬದುಕಿದ ಭಾನುಮತಿ 4ನೇ ಮಗು!

ಎದೆಹಾಲು ಉಣಿಸದ್ದಕ್ಕೆ ಮೃತಪಟ್ಟಿದ್ದ ಮೂರು ಆನೆ ಮರಿಗಳು

Team Udayavani, Nov 8, 2023, 7:15 AM IST

ShivamoggaShivamogga ಬದುಕಿದ ಭಾನುಮತಿ 4ನೇ ಮಗು!

ಶಿವಮೊಗ್ಗ: ಮೂರು ಮಕ್ಕಳ ಹೆತ್ತರೂ ಬದುಕಿಸಿಕೊಳ್ಳುವ ಯೋಗ ಅವಳಿಗಿರಲಿಲ್ಲ. ಈಗ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಈ ಮಗು ಕೂಡ ಬದುಕುತ್ತದೆಯೇ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮೂರು ಮಕ್ಕಗಳಿಗೆ ಹಾಲುಣಿಸಲಾಗದೆ ನೋವು ಅನುಭವಿಸುತ್ತಿದ್ದ ಭಾನುಮತಿ (ಆನೆ) ಈಗ ಹಾಲುಣಿಸಲು ಶಕ್ತಳಾಗಿದ್ದಾಳೆ. ಮಗಳ ಜತೆ ಈಗ ಮಗುವಾಗಿದ್ದಾಳೆ.

ಇದು ಯಾವುದೋ ಮನೆಯ ಕಥೆ ಅಲ್ಲ, ಸಕ್ರೆಬೈಲು ಆನೆ ಬಿಡಾರದ ಅತಿ ಸೌಮ್ಯ ಸ್ವಭಾವದ ಹೆಣ್ಣಾನೆ ಭಾನುಮತಿ ಕಥೆ.

ಬಾಟಲ್‌ ಹಾಲು ಫ‌ಲ ನೀಡಿರಲಿಲ್ಲ
ಸಕ್ರೆಬೈಲು ಆನೆ ಬಿಡಾರಕ್ಕೆ 2014ರಲ್ಲಿ ಮರಿ ಆನೆ ಜತೆ ಬಂದ ಭಾನುಮತಿಗೆ ಇದು ನಾಲ್ಕನೇ ತಾಯ್ತನ. ಮೂರು ಮರಿಗಳಿಗೂ ಹಾಲುಣಿಸಲು ಸಾಧ್ಯವಾಗದೆ, ಯಾತನೆ ವ್ಯಕ್ತಪಡಿಸಲಾಗದೆ ಒದ್ದಾಡುತ್ತಿತ್ತು. 2021ರಲ್ಲಿ ಜನ್ಮ ನೀಡಿದ್ದ ಮರಿಯನ್ನೂ ಸಹ ಹತ್ತಿರ ಸೇರಿಸುತ್ತಿರಲಿಲ್ಲ. ಹಾಲುಣಿಸುತ್ತಿರಲಿಲ್ಲ. ವೈದ್ಯಾಧಿಕಾರಿಗಳು ಬಾಟಲ್‌ನಲ್ಲಿ ಹಾಲುಣಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ನಾಲ್ಕನೇ ಮರಿ ಬದುಕುವುದೇ ಎಂಬ ಅನುಮಾನ ಎಲ್ಲರಿಗೂ ಮೂಡಿತ್ತು. ಆದರೆ ಪ್ರಕೃತಿ ಕೃಪೆಯಿಂದ ಈ ಬಾರಿ ಭಾನುಮತಿ ಹಾಲುಣಿಸಲು ಶಕ್ತವಾಗಿದ್ದು, 4ನೇ ಮಗು (ಆನೆ) ಬದುಕುವ ವಿಶ್ವಾಸ ವ್ಯಕ್ತವಾಗಿದೆ.

ಆನೆ ಬಿಡಾರಗಳಲ್ಲಿ ಯಾವುದೇ ಆನೆ ಮರಿಗಳು ಗರಿಷ್ಠ 2 ವರ್ಷದವರೆಗೂ ತಾಯಿಯ ಜತೆ ಇರುತ್ತವೆ. ಅನಂತರ ಅವುಗಳನ್ನು ಬಲವಂತವಾಗಿ ತಾಯಿಯಿಂದ ಬೇರ್ಪಡಿಸುವ ಕೆಲಸ ನಡೆಯುತ್ತದೆ. ಈ ದೃಶ್ಯ ನೋಡಿದ ಯಾರಿಗೂ ಮನಸ್ಸು ಕರಗದೆ ಇರದು. ಆದರೆ ಭಾನುಮತಿ ಹಸುಗೂಸುಗಳನ್ನೇ ದೂರ ಮಾಡಿದ್ದು ಮನಸ್ಸಿಗೆ ಭಾರ ಮಾಡಿತ್ತು. ಭಾನುಮತಿಯ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದ್ದು ಬಿಡಾರದ ಸಿಬಂದಿಯಲ್ಲಿ ಸಂತಸ ಮೂಡಿದೆ.

ಬಾಲಕ್ಕೆ ಕತ್ತಿ ಹಾಕಿದ್ದು ಸಿಬಂದಿಯೇ
ಗರ್ಭಿಣಿ ಭಾನುಮತಿ ಆನೆಯ ಬಾಲಕ್ಕೆ ಕತ್ತಿ ಹಾಕಿದ್ದು ಬಿಡಾರದ ಸಿಬ್ಬಂದಿಯೇ ಎಂದು ತಿಳಿದುಬಂದಿದೆ. ಆದರೆ ಘಟನೆ ಅಚಾತುರ್ಯದಿಂದ ಆಗಿರುವುದಾಗಿ ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ. ಆನೆಗಳನ್ನು ಕಾಡಿಗೆ ಬಿಡುವಾಗ ಮರದ ಕೊಂಬೆ, ಗಿಡಗಳನ್ನು ಕಡಿಯಲು ಕತ್ತಿ, ಇತರೆ ವಸ್ತುಗಳನ್ನು ಕೊಂಡೊಯ್ಯಲಾಗುತ್ತದೆ. ಈ ವೇಳೆ ಅಚಾರ್ತುಯದಿಂದ ಸಿಬಂದಿಯಿಂದಲೇ ಕತ್ತಿ ಏಟು ಬಿದ್ದಿದೆ. ಭಾನುಮತಿ ಆನೆ ನೋಡಿಕೊಳ್ಳುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ವನ್ಯಜೀವಿ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ. ಬಿಡಾರದಲ್ಲಿನ ಸಿಬ್ಬಂದಿಯ ಆಂತರಿಕ ಸಂಘರ್ಷದಿಂದ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿತ್ತು. ಇದನ್ನು ಅಧಿಕಾರಿಗಳು ಅಲ್ಲಗೆಳೆದಿದ್ದಾರೆ.

ಭಾನುಮತಿ ಆನೆ ಮರಿಯೊಂದಿಗೆ ಬೆರೆಯುತ್ತಿದೆ, ಹಾಲುಣಿಸುತ್ತಿದೆ. ಈ ಹಿಂದೆ ಮೂರು ಮರಿಗಳು ಅವಧಿಪೂರ್ವ ಪ್ರಸವವಾಗಿದ್ದರಿಂದ ತಾಯಿಗೆ ಹಾಲುಣಿಸುವ ಶಕ್ತಿ ಇರಲಿಲ್ಲ ಎಂದು ಅಂದಾಜಿಸಲಾಗಿದೆ. ಈ ಬಾರಿ ಆ ಸಮಸ್ಯೆ ಇಲ್ಲ. ಮರಿ ಜತೆ ಆಟವಾಡಿಕೊಂಡು ಚೆನ್ನಾಗಿದೆ. ಅದರ ತಾಯ್ತನವನ್ನು ಅನುಭವಿಸಲು ಬೇರೆ ಆನೆಗಳನ್ನು ಕಟ್ಟುತ್ತಿಲ್ಲ.
– ಪ್ರಸನ್ನ ಕೃಷ್ಣ ಪಟಗಾರ್‌, ಡಿಎಫ್‌ಒ, ವನ್ಯಜೀವಿ ವಲಯ

ಟಾಪ್ ನ್ಯೂಸ್

ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್‌

Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು

Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು

Tirupati Case; Hurtful work for Hindus by converted Jagan: KS Eshwarappa

Tirupati Case; ಮತಾಂತರಗೊಂಡ ಜಗನ್‌ ರಿಂದ ಹಿಂದೂಗಳಿಗೆ ನೋವುಂಟು ಮಾಡುವ ಕೆಲಸ: ಈಶ್ವರಪ್ಪ

Thirthahalli: ಮರವೇರಿ ಕುಳಿತ್ತಿದ್ದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

ಗಾಂಜಾ ಸೇವನೆ ತಡೆಗೆ ಪೊಲೀಸ್ ಇಲಾಖೆ ಮುಂದಾಗಬೇಕು: ಮೋಹನ್ ಕುಮಾರ್

Anandpura: ಗಾಂಜಾ ತಡೆಗೆ ಪೊಲೀಸ್ ಇಲಾಖೆ ಮುಂದಾಗಬೇಕು: ಮೋಹನ್ ಕುಮಾರ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

Mahalingapura: ಗಮನ ಸೆಳೆದ ಮಹಾಲಿಂಗೇಶ್ವರ ಜಾತ್ರೆಯ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ…

Mahalingapura: ಗಮನ ಸೆಳೆದ ಮಹಾಲಿಂಗೇಶ್ವರ ಜಾತ್ರೆಯ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ…

Desi Swara: ಮೊಂತಿ ಆಚರಣೆ- ವರ್ಷದ ಮೊದಲ ಸುಗ್ಗಿ ಸಂಭ್ರಮ

Desi Swara: ಮೊಂತಿ ಆಚರಣೆ- ವರ್ಷದ ಮೊದಲ ಸುಗ್ಗಿ ಸಂಭ್ರಮ

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.