Eshwarappa ವಿರುದ್ಧ ಕೇಸ್‌ ದಾಖಲು ಸಂತೋಷದ ಸಂಗತಿ: ಮಧು ಬಂಗಾರಪ್ಪ


Team Udayavani, Feb 10, 2024, 6:33 PM IST

Eshwarappa ವಿರುದ್ಧ ಕೇಸ್‌ ದಾಖಲು ಸಂತೋಷದ ಸಂಗತಿ: ಮಧು ಬಂಗಾರಪ್ಪ

ಶಿವಮೊಗ್ಗ: ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಕೇಸ್‌ ದಾಖಲಾಗಿರುವುದು ಬಹಳ ಸಂತೋಷದ ವಿಚಾರ. ದೇಶದಲ್ಲಿ ಕಾನೂನಿದೆ ಎಂಬುದು ಸಾಬೀತಾಗಿದೆ. ಯಾರ್ಯಾರು ಈ ತರಹ ಮಾತನಾಡುತ್ತಾರೋ ಅವರ ಮೇಲೆಲ್ಲ ಮುಂದೆ ಇದೇ ರೀತಿ ಕೇಸ್‌ ದಾಖಲಾಗಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಇದೆ ಎಂದು ನಮ್ಮ ಸರ್ಕಾರ ತೋರಿಸಿದೆ. ಕಾನೂನಿಗೆ ವಿರುದ್ಧವಾಗಿ ಮಾತನಾಡಿದರೆ ಅಂತವರ ವಿರುದ್ಧ ಕೇಸ್‌ ದಾಖಲಾಗಬೇಕು. ಯಾರು ಕಾನೂನು ಪಾಲಿಸುವುದಿಲ್ಲವೋ ಅವರ ಮೇಲೆ ಕೇಸ್‌ ಆಗಬೇಕು. ಡಾ|ಅಂಬೇಡ್ಕರ್‌ ಅವರು ಸಂವಿಧಾನ ಕೊಟ್ಟಿರೋದು ಈ ತರಹ ಹೇಳಿಕೆ ನೀಡೋಕೆ ಅಲ್ಲ. ಸಮಾಜದಲ್ಲಿ ಅಸಹ್ಯ ರೀತಿಯಲ್ಲಿ ಮಾತನಾಡಿದ್ರೆ ಅದನ್ನು ನಾವು ಖಂಡಿಸುತ್ತೇವೆ. ಚಕ್ರವರ್ತಿ ಸೂಲಿಬೆಲೆ ಸಹ ಇದೇ ಕೆಲಸ ಮಾಡಿರೋದು ಎಂದರು.

ಡಿ.ಕೆ.ಸುರೇಶ್‌ ಹೇಳಿಕೆಯನ್ನು ಈಶ್ವರಪ್ಪನವರು ಸರಿಯಾಗಿ ಅರ್ಥ ಮಾಡಿಕೊಳ್ಳಲಿ. ಅವರು ದೇಶ ಒಡೆಯೋದಾಗಿ ಹೇಳಿಲ್ಲ. ಜನರ ಕೂಗನ್ನು ಡಿ.ಕೆ.ಸುರೇಶ್‌ ಹೇಳಿದ್ದಾರೆ. ದೇಶ ವಿಭಜನೆ ಮಾತನ್ನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಸುರೇಶ್‌ ಅವರ ವಿರುದ್ಧ ಕೇಸ್‌ ಹಾಕಲಿ. ಕಾನೂನು ಇದೆ. ಕಾನೂನು ಅದನ್ನು ನೋಡಿಕೊಳ್ಳುತ್ತದೆ ಎಂದರು.

ಈಶ್ವರಪ್ಪನವರು ಕಾನೂನು ಹೋರಾಟ ಮಾಡುವ ಹೇಳಿಕೆ ಕೊಟ್ಟರೆ ಮುಗಿಯುವುದಿಲ್ಲ. ಕೋರ್ಟ್‌ ಮುಂದೆ ಹೇಳಬೇಕು, ತಾವು ಆಡಿದ ಮಾತಿಗೆ ಕೋರ್ಟ್‌ನಲ್ಲಿ ಉತ್ತರ ಕೊಡಲಿ. ಆಗ ಕೋರ್ಟ್‌ ತೀರ್ಮಾನ ಕೈಗೊಳ್ಳುತ್ತದೆ. ರಾಜ್ಯ-ದೇಶದಲ್ಲಿ ಕಾನೂನು ಉಳಿಯಬೇಕು. ನಾವು ಹುಟ್ಟುವ ಮೊದಲೇ ದೇಶ ಇತ್ತು. ಸ್ವಾತಂತ್ರ್ಯ ಬಂದಿತ್ತು, ಸಂವಿಧಾನ ಇತ್ತು. ಪ್ರಶ್ನೆ ಕೇಳುವ ಅ ಧಿಕಾರ ಕೊಟ್ಟಿದ್ದು ಅಂಬೇಡ್ಕರ್‌. ಉತ್ತರ ಕೊಡುವ ಅಧಿ ಕಾರ ಕೊಟ್ಟಿದ್ದು ಅಂಬೇಡ್ಕರ್‌ ಅವರ ಸಂವಿಧಾನ ಎಂದರು.

ಡಿ.ಕೆ. ಸುರೇಶ್‌ ಈಶ್ವರಪ್ಪ ಅವರ ಮನೆಗೆ ಬರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಈಶ್ವರಪ್ಪನವರಿಗೆ ಧೈರ್ಯ ಇಲ್ಲ. ಅವರು ಹೇಳಿಕೆಗೆ ಮಾತ್ರ ಸೀಮಿತ. ಎದೆಗಾರಿಕೆ ತೋರಿಸುವಂತಹ ಸುರೇಶ್‌ ಅಂತಹವರು ಈ ದೇಶದಲ್ಲಿ, ನಮ್ಮ ರಾಜ್ಯದಲ್ಲಿದ್ದಾರೆ ಎಂಬುದು ಸಂತೋಷದ ಸಂಗತಿ ಎಂದರು.

ಕೇಂದ್ರದಿಂದ ಜನರ ತೆರಿಗೆ ಹಣ ಕೇಳಲಾಗುತ್ತಿದೆ. ಈ ರಾಜ್ಯದಿಂದ ಗೆದ್ದು ಅಧಿ ಕಾರ ನಡೆಸುತ್ತಿರುವವರು ನಿರ್ಮಲಾ ಸೀತಾರಾಮನ್‌. ರಾಜ್ಯಕ್ಕೆ ಸುಳ್ಳು ಹೇಳ್ತಾ ಇರೋರು ಹಣಕಾಸು ಸಚಿವರು. ಅವರು ಸರಿಯಾದ ಲೆಕ್ಕ ಕೊಡಲಿ ಎಂದರು.

ಶ್ವೇತಪತ್ರ ಹೊರಡಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೊದಲು ಕೇಂದ್ರ ಸರಕಾರ ರಾಜ್ಯಕ್ಕೆ ಎಷ್ಟು ಕೊಟ್ಟಿದೆ ಎಂದು ಹೇಳಬೇಕು. ಆಮೇಲೆ ರಾಜ್ಯದಿಂದ ಶ್ವೇತಪತ್ರ ಹೊರಡಿಸಲಾಗುವುದು. ಅವರು ನಮಗೆ ಎಷ್ಟು ಕೊಟ್ಟಿದ್ದಾರೆ ಎಂದು ಹೇಳಿದರೆ ಐದು ನಿಮಿಷದಲ್ಲೇ ಶ್ವೇತಪತ್ರ ಹೊರಡಿಸುತ್ತೇವೆ ಎಂದು ಹೇಳಿದರು.

ಬಿಜೆಪಿಯ ಪುತ್ತಿಲ, ಕಟೀಲ್‌ ಅವರೆಲ್ಲ ಮಾಡಿದ್ದು ಬೆಂಕಿ ಹಚ್ಚುವ ಕೆಲಸ. ಸಾಮಾಜಿಕ ಜಾಲತಾಣ ದುರುಪಯೋಗ ಮಾಡಿಕೊಂಡು ಬಿಜೆಪಿ ಅ ಧಿಕಾರಕ್ಕೆ ಬಂದಿದೆ. ಬ್ಯುಸಿನೆಸ್‌ ಮಾಡಿ ಅ ಧಿಕಾರಕ್ಕೆ ಬಂದವರು ಬಿಜೆಪಿಯವರು. ಜೀವನದಲ್ಲಿ ಒಂದು ಬಾರಿಯೂ 113 ಸ್ಥಾನ ಗಳಿಸಿಲ್ಲ. ಇವರಿಂದ ಇನ್ನೇನು ಬಯಸಲು ಸಾಧ್ಯ ಎಂದು ಕುಟುಕಿದರು.

“ಸರ್ವಜನಾಂಗದ ಶಾಂತಿಯ ತೋಟ’ ಶಿವಮೊಗ್ಗದ ರಾಗಿಗುಡ್ಡದಲ್ಲಿದೆ. ಅಲ್ಲಿ ಬಿಜೆಪಿಯವರು ಶಾಂತಿ ಕದಡುವ ಕೆಲಸ ಮಾಡಿದ್ದರು. ದೇಶದಲ್ಲಿ ಕಾನೂನು ಗೆಲ್ಲಬೇಕು. ನಾವು ಅ ಧಿಕಾರದಲ್ಲಿ ಇಲ್ಲದಿದ್ದಾಗ ಈ ತರಹ ಹೇಳಿಕೆ ಕೊಡೋದು, ಶಾಂತಿ ಕದಡೋದು ಮಾಡಿದ್ದೇವಾ? ಮಾಡಿದ್ದರೆ ನಮ್ಮ ವಿರುದ್ಧ ಕೇಸ್‌ ಮಾಡಬೇಕಿತ್ತು. ಕೆಲವೊಮ್ಮೆ ಅ ಧಿಕಾರ ಇರುತ್ತದೆ, ಮತ್ತೂಮ್ಮೆ ಇರೋದಿಲ್ಲ. ಆದರೆ ಕಾನೂನು ಶಾಶ್ವತ. ಅದು ಯಾವಾಗಲೂ ಗೆಲ್ಲಬೇಕು. ಅದು ಈಗ ಗೆದ್ದಿದೆ ಎಂದರು.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK-Shiavamogga

Industry: ಕುದುರೆಮುಖದ ಕಂಪನಿಗೆ ದಿನಕ್ಕೆ 27 ಕೋಟಿ ರೂ.ನಷ್ಟ: ಎಚ್‌.ಡಿ.ಕುಮಾರಸ್ವಾಮಿ

Beluru

Shivamogga: ಸಾಗರ ಜನರಲ್ ಆಸ್ಪತ್ರೆ ಮೇಲ್ದರ್ಜೆಗೆ, ನೂರು ಹಾಸಿಗೆ ವ್ಯವಸ್ಥೆ: ಶಾಸಕ ಬೇಳೂರು

Shimoga; ಕೆಂಪಣ್ಣ ಆಯೋಗ ವರದಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಲಿ: ಕುಮಾರಸ್ವಾಮಿ

Shimoga; ಕೆಂಪಣ್ಣ ಆಯೋಗ ವರದಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಲಿ: ಕುಮಾರಸ್ವಾಮಿ

Theertha-Land

Landslide: ಆಗುಂಬೆ ಬಳಿಯ ಕಾರ್ ಬೈಲು ಗುಡ್ಡ ಕುಸಿತ!

Theerthalli

Theerthahalli: ವಾಹನ ಚಲಾಯಿಸುವ ವೇಳೆಯೇ ಕುಸಿದು ಬಿದ್ದು ಯುವಕ ದುರ್ಮರಣ!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.