![Charmadi Ghat ಕಸ ಎಸೆದ ಚಾಲಕನಿಗೆ ಕೇಸ್; ಚಾಲಕನಿಂದಲೇ ಕಸ ತೆರವು](https://www.udayavani.com/wp-content/uploads/2024/07/police-1-415x253.jpg)
ಹೊಳೆಹೊನ್ನೂರು: ನವಜಾತ ಗಂಡು ಶಿಶು ಶವವಾಗಿ ಪತ್ತೆ
ಬೈಕ್ ನಲ್ಲಿ ಬಂದ ಯುವಕ-ಯುವತಿ...
Team Udayavani, Jun 20, 2024, 10:30 PM IST
![1-shishu](https://www.udayavani.com/wp-content/uploads/2024/06/1-shishu-620x426.jpg)
ಹೊಳೆಹೊನ್ನೂರು: ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಗ್ರಾಮದ ಬನ್ನಿ ಮರದ ಹತ್ತಿರ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿದೆ.
ಗುರುವಾರ ಬೆಳಗ್ಗೆ ಸುಮಾರು 9 ಗಂಟೆಯ ಸಮಯಕ್ಕೆ ಬೈಕ್ ನಲ್ಲಿ ಬಂದ ಯುವಕ-ಯುವತಿ ಗ್ರಾಮದ ಶಿವಮೊಗ್ಗದಿಂದ ಹರಿಹರ ಮಾರ್ಗದ ಬಿ.ಎಚ್. ರಸ್ತೆಯ ಪಕ್ಕದಲ್ಲಿರುವ ಬನ್ನಿ ಮರದ ಹತ್ತಿರಕ್ಕೆ ಹೋಗಿದ್ದಾರೆ. ಸ್ಥಳೀಯ ಅಂಗಡಿಯವರು ಇದನ್ನು ಗಮನಿಸಿದ್ದಾರೆ. ದಿನ ನಿತ್ಯದ ಕೆಲಸಕ್ಕೆ ಹೋಗಿರಬಹುದೆಂದು ಸುಮ್ಮನ್ನಾಗಿದ್ದಾರೆ. ನಂತರ ಅರ್ಧ ಗಂಟೆಯ ನಂತರ ವ್ಯಕ್ತಿಯೊಬ್ಬರು ದಿನನಿತ್ಯದ ಕೆಲಸಕ್ಕೆ ಹೋದಾಗ ಸ್ಥಳದಲ್ಲೇ ಹೆರಿಗೆಯಾಗಿದ್ದ ನವಜಾತ ಗಂಡು ಶಿಶು ಕಾಣಿಸಿಕೊಂಡಿದ್ದು, ಅದು ತತ್ ಕ್ಷಣವೇ ಮೃತಪಟ್ಟಿದೆ. ಒಟ್ಟಿನಲ್ಲಿ ತಾಯಿಯ ಮಡಿಲಲ್ಲಿ ಬೆಳೆಯ ಬೇಕಿದ್ದ ಹಸುಗೂಸು ತಾಯಿಯಿಂದಲೇ ಮೃತ ಪಟ್ಟಿರುವ ಘಟನೆ ನಡೆದಿದೆ.
ಸ್ಥಳಕ್ಕೆ ಆಗಮಿಸಿದ ವೈದ್ಯರ ಅಂದಾಜಿನ ಪ್ರಕಾರ ಕೆಲವೇ ನಿಮಿಷಗಳ ಹಿಂದೆ ಹೆರಿಗೆಯಾಗಿದೆ. ತತ್ ಕ್ಷಣವೇ ಮಗುವನ್ನ ಬಿಟ್ಟು ಹೋಗಿದ್ದರಿಂದ ಉಸಿರಾಟದ ತೊಂದರೆಯಿಂದಾಗಿ ಮರಣ ಹೊಂದಿರಬಹುದು. ಇಂತಹ ಹೀನ ಕೃತ್ಯವನ್ನು ಯಾರೂ ಸಹ ಮಾಡಬಾರದು ಎಂದರು.
ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸರು ಬಂದು ಸ್ಥಳ ಮಜೂರು ಮಾಡಿಕೊಂಡು ದೂರು ದಾಖಲಿಸಿಕೊಂಡಿದ್ದಾರೆ. ನಂತರ ಹೊಳಲೂರು ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಕೊಂಡ್ಯೂಯ್ದು, ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಟಾಪ್ ನ್ಯೂಸ್
![Charmadi Ghat ಕಸ ಎಸೆದ ಚಾಲಕನಿಗೆ ಕೇಸ್; ಚಾಲಕನಿಂದಲೇ ಕಸ ತೆರವು](https://www.udayavani.com/wp-content/uploads/2024/07/police-1-415x253.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು](https://www.udayavani.com/wp-content/uploads/2024/07/2-1-150x90.jpg)
Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು
![K. S. Eshwarappa ಬಿಜೆಪಿಯಿಂದ ಆಹ್ವಾನ ಬಂದಿದೆ, ಸೇರುವ ಬಗ್ಗೆ ಶೀಘ್ರ ನಿರ್ಧಾರ](https://www.udayavani.com/wp-content/uploads/2024/07/k.-s.-eshwarappa-150x94.jpg)
K. S. Eshwarappa ಬಿಜೆಪಿಯಿಂದ ಆಹ್ವಾನ ಬಂದಿದೆ, ಸೇರುವ ಬಗ್ಗೆ ಶೀಘ್ರ ನಿರ್ಧಾರ
![1-csaddasd](https://www.udayavani.com/wp-content/uploads/2024/07/1-csaddasd-150x85.jpg)
Hosanagara: ಅಪಘಾತವಾಗಿ ಪಲ್ಟಿಯಾದ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸರಕಾರಿ ಬಸ್
![1-sagara](https://www.udayavani.com/wp-content/uploads/2024/07/1-sagara-150x94.jpg)
Sagara; ಮರ ಕತ್ತರಿಸುತ್ತಿದ್ದಾಗ ಕೊಂಬೆ ಬಿದ್ದು ವ್ಯಕ್ತಿ ಸಾವು
![Sagara: ತಮ್ಮ ವ್ಯಾಪ್ತಿಯಲ್ಲೇ ಕೆಲಸ ಮಾಡಲು ವಿಎಗಳಿಗೆ ಸೂಚನೆ; ಕಾಗೋಡು ಆಗ್ರಹ](https://www.udayavani.com/wp-content/uploads/2024/07/thimmappa-150x100.jpg)
Sagara: ತಮ್ಮ ವ್ಯಾಪ್ತಿಯಲ್ಲೇ ಕೆಲಸ ಮಾಡಲು ವಿಎಗಳಿಗೆ ಸೂಚನೆ; ಕಾಗೋಡು ಆಗ್ರಹ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.