![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 6, 2022, 9:48 PM IST
ಶಿವಮೊಗ್ಗ: ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಮುಗಿದ ಬಳಿಕ ಚರ್ಚೆ ಮಾಡೋ ಅವಶ್ಯಕತೆಯಿಲ್ಲ. ರಾಜ್ಯದ ಜನ ಒಳ್ಳೆದಾಗ್ಲೀ ಎಂದು ಶುಭ ಕೋರಿದ್ದಾರೆ. ರಾಷ್ಟ್ರದ ಹಿತದೃಷ್ಟಿಯಿಂದ ರಾಷ್ಟ್ರದ್ರೋಹಿಗಳಿಗೆ ಬೆಂಬಲ ಕೊಡಬೇಡಿ. ನೂರು ವರ್ಷ ಬದುಕಿ, ರಾಷ್ಟ್ರಭಕ್ತರಿಗೆ ಬೆಂಬಲ ಕೊಡಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮ ನೋಡಿ ಸಂತೋಷ ಪಡೋರು ಸಂತೋಷ ಪಟ್ಟಿದ್ದಾರೆ. ಹೊಟ್ಟೆ ಉರಿದುಕೊಳ್ಳೋರು ಉರಿದುಕೊಂಡಿದ್ದಾರೆ. ಯಾರು ಎಂದು ನಿಮಗೆ ಗೊತ್ತಲ್ಲಾ? ನಾನು ಹೇಳಲೇ ಎಂದು ಮರುಪ್ರಶ್ನೆ ಹಾಕಿದರು.
ಸಿದ್ದರಾಮಯ್ಯ ಅಮೃತ ಮಹೋತ್ಸವ ನೋಡಿ ಬಿಜೆಪಿಯವರು ವಿಚಲಿತ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೌದು, ಪಾಪ ನಿದ್ದೆ, ಊಟ, ತಿಂಡಿ ಏನು ಮಾಡ್ತಿಲ್ಲ ನಾವು. ಸ್ವಾಮಿ ಇಂತಹ ಕಾರ್ಯಕ್ರಮ ನೂರು ಮಾಡಿದ್ದೇವೆ. ಇತ್ತೀಚಿಗೆ ಒಂದು ಕಾರ್ಯಕ್ರಮ ಮಾಡಿ ಅದೇ ದೊಡ್ಡದು ಅವರಿಗೆ. ಒಟ್ಟಾಗಿ ಮಾಡಿದ್ದೇವೆ ಎಂದು ಹೇಳಿಕೊಳ್ಳೋದೆ ಅವರಿಗೆ ಸಂತೋಷ. ಒಟ್ಟಾಗಿ ಅನ್ನೋದು ಅವರ ಜೀವನದಲ್ಲಿ ಗೊತ್ತಿಲ್ಲ. ಒಂದಾಗಿರೋ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲ ಇದರಿಂದ ಜಾಸ್ತಿಯಾಗಿದೆ. ರಾಹುಲ್ ಗಾಂಧಿ ಮುಂದೆ ತೋರಿಸೋಕೆ ಅಪ್ಪಿಕೊಂಡಿದ್ದಾರಷ್ಟೇ’ ಎಂದು ಹೇಳಿದರು.
ನಾಯಕರ ಮುಂದೆ ಸರ್ಕಸ್, ಡ್ಯಾನ್ಸ್ ಮಾಡಿ ಎಂದು ಹೇಳುವ ಸ್ಥಿತಿ ಕಾಂಗ್ರೆಸ್ನದ್ದು. ರಾಜ್ಯದಲ್ಲಿ ಕಾಂಗ್ರೆಸ್ನವರ ಹಾಗೆ ಕನಸು ಯಾರಿಗೂ ಬೀಳಲ್ಲ. ಅ ಧಿಕಾರ ನಡೆಸುತ್ತಿದ್ದ ಅವರನ್ನು ಅಯೋಗ್ಯರು ಎಂದು ಜನ ಮನೆಗೆ ಕಳುಹಿಸಿದ್ದಾರೆ. ಬಡವರು, ಹಿಂದುಳಿದವರ ಪರ ಇಲ್ಲ ಎಂದು ಕಿತ್ತು ಬಿಸಾಕಿದ್ದಾರೆ. ಆದ್ರೂ, ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣಾ¤ ಇದ್ದಾರೆ. ಕಾಂಗ್ರೆಸ್ನವರು ಭ್ರಮೆಯಿಂದ ಹೊರಬರಬೇಕು ಎಂದು ಕುಟುಕಿದರು.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.