Shivamogga: ಜೈಲಿನಿಂದ ಮೊಬೈಲ್ ಬಳಸಿ ಪತ್ನಿಗೆ ಬೆದರಿಕೆ ಹಾಕಿದ ಕೈದಿ!
ಶಿವಮೊಗ್ಗದ ಸೋಗಾನೆ ಕಾರಾಗೃಹದಲ್ಲಿ ನಡೆದ ಘಟನೆ
Team Udayavani, Oct 15, 2024, 6:38 PM IST
ಶಿವಮೊಗ್ಗ:ಜೈಲಿನಲ್ಲಿ ಈಗಲೂ ಮೊಬೈಲ್ ಸಿಗುತ್ತದೆ ಎಂಬ ಆರೋಪಗಳಿಗೆ ಮತ್ತೊಂದು ಪ್ರಕರಣ ಪುಷ್ಠಿ ನೀಡಿದ್ದು, ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಿಂದ ತನ್ನ ಪತಿ ಕರೆ ಮಾಡಿ ಜೀವ ಬೆದರಿಕೆ ಒಡ್ಡುತ್ತಿದ್ದು ಹಣಕ್ಕೆ ಒತ್ತಾಯಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದಾರೆ.
ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿತ್ರದುರ್ಗ ಜೈಲಿನಿಂದ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಗಿರುವ ಕೈದಿ ನಾಗರಾಜ ತನ್ನ ಪತ್ನಿಗೆ ಜೈಲಿನಿಂದಲೇ ಕರೆ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
2024ರ ಮಾರ್ಚ್ ತಿಂಗಳಿಂದ ಹಲವು ಬಾರಿ ಕರೆ ಮಾಡಿ ಒಂದು ಸಾವಿರ, ಎರಡು ಸಾವಿರದಂತೆ ಹಣ ಹಾಕುವಂತೆ ಒತ್ತಾಯಿಸುತ್ತಿದ್ದಾನೆ.
ಹಣ ಹಾಕದಿದ್ದಲ್ಲಿ ಜೈಲಿನಿಂದ ಹೊರ ಬಂದ ನಂತರ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿ ಆತನ ಪತ್ನಿ ದೂರು ನೀಡಿದ್ದಾರೆ. ಆರೋಪ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಟ ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಬೆನ್ನಲ್ಲೇ ಶಿವಮೊಗ್ಗ ಪೊಲೀಸರು ಜೈಲಿನ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಮೊಬೈಲ್ ಚಾರ್ಜರ್ಗಳು ಪತ್ತೆಯಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ನಗರಸಭೆ ಬಿಜೆಪಿ ಸದಸ್ಯರ ದಲಿತ ವಿರೋಧಿ ನೀತಿ; ಕಾಂಗ್ರೆಸ್ ಖಂಡನೆ, ಪ್ರತಿಭಟನೆ
K. S. Eshwarappa: ಅ.20ರಂದು ಬ್ರಿಗೇಡ್ ಹೆಸರು ಘೋಷಣೆ
MLA Channabasappa: ಸೈಟ್ ವಾಪಸ್ ಕೊಟ್ಟರೆ ಖರ್ಗೆ ಕುಟುಂಬ ಶಿಕ್ಷೆಯಿಂದ ಪಾರಾಗಲ್ಲ
Sagara: ಫ್ಲೆಕ್ಸ್ ಹಾಕಿದ್ದಕ್ಕೆ ವಿಶೇಷ ಅರ್ಥ ಬೇಡ; ಬೇಳೂರು ಸ್ಪಷ್ಟನೆ
Shimoga: ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರು ಪಲ್ಟಿ
MUST WATCH
ಹೊಸ ಸೇರ್ಪಡೆ
Channapatna: ಬಿಜೆಪಿ ಕಚೇರಿಯಲ್ಲಿದ್ದ ದೇವೇಗೌಡ, ಎಚ್ಡಿಕೆ ಬ್ಯಾನರ್ ತೆರವು
Yadagiri: ಸಿಡಿಲು ಬಡಿದು ರೈತ ಸಾವು
Panaji: ದೀಪಾವಳಿಗೆ ಸಿಗಲಿದೆ ಗೋವಾ ಜನರಿಗೆ ಗಿಫ್ಟ್
Valmiki Nigama: ಹಣ ದುರ್ಬಳಕೆಯಾದರೂ ಈ ವರ್ಷದ ಅನುದಾನ ಕೊಡಲು ಸೂಚಿಸಿರುವೆ: ಸಿದ್ದರಾಮಯ್ಯ
Davanagere: ವರದಕ್ಷಿಣೆ ಸಂಬಂಧ ಪತ್ನಿಯ ಸಾವಿಗೆ ಕಾರಣವಾಗಿದ್ದ ಪತಿಗೆ ಕಠಿಣ ಕಾರಾಗೃಹ ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.