ಕಿರುಕುಳ ನೀಡುತ್ತಿ ದೆ ಕಾಡಾನೆ ಅಭಯಾರಣ್ಯಕ್ಕಟ್ಟುವಲ್ಲಿ ಯಶಸ್ವಿ

ಸಕ್ರೆಬೈಲು ಆನೆ ಬಿಡಾರದ 12, ಅರಣ್ಯ ಇಲಾಖೆಯ 25 ಸಿಬ್ಬಂದಿ ಕಾರ್ಯಾಚರಣೆ

Team Udayavani, Feb 5, 2021, 6:26 PM IST

5-19

ಶಿವಮೊಗ್ಗ: ಉಂಬ್ಳೆಬೈಲು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟು ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದ ಕಾಡಾನೆಗಳನ್ನು ಭದ್ರಾ ಅಭಯಾರಣ್ಯದೊಳಗೆ ಓಡಿಸಲು ಅರಣ್ಯ ಇಲಾಖೆ ಹಾಗೂ ಸಕ್ರೆಬೈಲು ಆನೆ ಬಿಡಾರದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಉಂಬ್ಳೆಬೈಲು ಭಾಗದ ಹಾಲ್‌ಲಕ್ಕವಳ್ಳಿ ಪ್ರದೇಶದಲ್ಲಿ ಆನೆಗಳು ಬೀಡುಬಿಟ್ಟಿದ್ದವು. ಬುಧವಾರ ಉಂಬ್ಳೆಬೈಲು, ಕೈದೊಟ್ಲು ನಡುವಿನ ರಸ್ತೆ ಮೂಲಕ ಚೆಕ್‌ಪೋಸ್ಟ್‌ ಮತ್ತು ಕಾಕನಹಸೂಡಿ ರಸ್ತೆ ನಡುವೆ ಎನ್‌.ಆರ್‌. ಪುರ ರಸ್ತೆ ದಾಟಿಸಿ ಭದ್ರಾ ಅಭಯಾರಣ್ಯ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಬೆಳಗ್ಗೆಯಿಂದ ಅಭಯಾರಣ್ಯದ ದಟ್ಟ ಕಾಡಿನೊಳಗೆ ಸೇರಿಸಿದ್ದು ಮತ್ತೆ ವಾಪಾಸ್‌ ಬರದಂತೆ ಕಾಕನಹಸೂಡಿ ಬಳಿ ತಾತ್ಕಾಲಿಕವಾಗಿ ಬೀಡು ಬಿಡಲಾಗಿದೆ. ಬುಧವಾರ ಯಾವುದೇ ಆನೆಗಳನ್ನು ಬಳಸದೇ ಸಿಬ್ಬಂದಿ ಮೂಲಕವೇ ಹಿಮ್ಮೆಟಿಸಲಾಗಿತ್ತು. ಗುರುವಾರ ಸಕ್ರೆಬೈಲು ಆನೆಗಳನ್ನು ಗಡಿಯಲ್ಲಿ ಇರಿಸಲಾಗಿದೆ. ಸಕ್ರೆಬೈಲು ಆನೆಬಿಡಾರದ 12 ಮಂದಿ, ಅರಣ್ಯ ಇಲಾಖೆಯ 25 ಸಿಬ್ಬಂದಿ ಪಾಲ್ಗೊಂಡಿದ್ದರು.

ಉಂಬ್ಳೆಬೈಲು ಅರಣ್ಯ ಪ್ರದೇಶ ಬಫರ್‌ ಝೋನ್‌ ವ್ಯಾಪ್ತಿಯಲ್ಲಿದ್ದು 20ಕ್ಕೂ ಹೆಚ್ಚು ಹಳ್ಳಿಗಳಿವೆ. ಹೇರಳವಾಗಿ ಭತ್ತ, ಬಾಳೆ, ಅಡಕೆ, ತೆಂಗು ಬೆಳೆಯಲಾಗುತ್ತಿದ್ದು ಕೆರೆಗಳು ಸಹ ಇವೆ. ಕಾಡಾನೆಗಳಿಗೆ ಉತ್ತಮ ಆಹಾರ ಸಿಗುತ್ತಿದ್ದುದರಿಂದ ಅವುಗಳು ಈ ಭಾಗದಲ್ಲಿ ಬೀಡು ಬಿಟ್ಟು ರೈತರಿಗೆ ನಷ್ಟ ಮಾಡುತ್ತಿದ್ದವು. ಇದರಿಂದ ಬೇಸತ್ತ ಜನ ಆನೆ ಹಿಡಿದು ಬೇರೆಡೆ ಬಿಡಲು ಮನವಿ ಮಾಡಿದ್ದರು. ಆನೆ ಹಿಡಿಯುವ ಕಾರ್ಯಾಚರಣೆ ಬಹಳ ವೆಚ್ಚದಾಯಕವಾದ್ದರಿಂದ ಸರಕಾರ ಓಡಿಸಲು ಅನುಮತಿ ನೀಡಿತ್ತು.

ತಾತ್ಕಾಲಿಕ ಕ್ರಮ ಬೇಡ: ಆನೆಗಳನ್ನು ಅರಣ್ಯ ಪ್ರದೇಶಗಳಿಗೆ ಓಡಿಸಿರುವುದು ತಾತ್ಕಾಲಿಕ ರಿಲೀಫ್‌ ನೀಡಿದ್ದು ಅವುಗಳನ್ನು ಬೇರೆಡೆ ಸ್ಥಳಾಂತರ ಮಾಡದಿದ್ದರೆ ಮತ್ತೆ ಬರುತ್ತವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಮನುಷ್ಯನಿಗೆ ಗಡಿ ಇದೆ. ಆನೆಗಳಿಗೆ ಅದ್ಯಾವುದೂ ತಿಳಿಯುವುದಿಲ್ಲ ಎಂಬುದು ಗ್ರಾಮಸ್ಥರ ವಾದ. ಕಾಡಾನೆಗಳು ನೆಲೆಸಿರುವ ಜಾಗದಲ್ಲಿ ಬೇರೆ ಆನೆಗಳು ಬಂದರೆ ಅವು ಮತ್ತೆ ಆ ಕಡೆ ಸುಳಿಯುವುದಿಲ್ಲ. ಆದ್ದರಿಂದ ಸದ್ಯಕ್ಕೆ ಬರುವುದಿಲ್ಲ ಎಂಬುದು ಆನೆಗಳ ತಜ್ಞರ ಅಭಿಮತ.

ಟ್ರಂಚ್‌ ಬೇಕು: ಆನೆಗಳನ್ನು ಓಡಿಸಿರುವುದು ತಾತ್ಕಾಲಿಕ ಕ್ರಮವಾಗಿದೆ. ಮತ್ತೆ ಬರಬಹುದು. ಭದ್ರಾ ಅಭಯಾರಣ್ಯದ ಗಡಿಯಲ್ಲಿ ಸೋಲಾರ್‌ ಬೇಲಿ ಹಾಕಿದರೆ ಇದಕ್ಕೆಲ್ಲ ಕಡಿವಾಣ ಬೀಳಲಿದೆ. ಈ ಹಿಂದೆ ಎಲಿಫಂಟ್‌ ಪ್ರೂಫ್‌ ಫೆನ್ಸಿಂಗ್‌ ಮಾಡಲಾಗಿತ್ತು. ಆದರೆ ಅದನ್ನೂ ದಾಟಿಕೊಂಡು ಆನೆಗಳು ಬರುತ್ತಿವೆ. ನಮ್ಮ ಭಾಗದಲ್ಲಿ 33 ಕಿ.ಮೀ ಕಂದಕ ನಿರ್ಮಾಣ ಮಾಡಲು 2.80 ಕೋಟಿ ವೆಚ್ಚದ ಯೋಜನೆಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ವನ್ಯಜೀವಿ ವಲಯ ಹಾಗೂ ನಮ್ಮ ಕಡೆಯಿಂದ ಬೇಲಿ ಹಾಗೂ ಕಂದಕ ನಿರ್ಮಾಣವಾದರೆ ಶಾಶ್ವತ ಪರಿಹಾರ ಸಿಗಬಹುದು ಎನ್ನುತ್ತಾರೆ ಉಂಬ್ಳೆಬೈಲು ವಲಯ ಆರ್‌ಎಫ್‌ಒ ಆರ್‌.ಟಿ. ಮಂಜುನಾಥ್‌. ಅರಣ್ಯ ಪ್ರದೇಶದ ಆಯಕಟ್ಟಿನ ಜಾಗಗಳಲ್ಲಿ ಆನೆಗಳು ಒಳಬರುತ್ತವೆ. ಅಂತಹ ಪ್ರದೇಶಗಳನ್ನು ಈಗಾಗಲೇ ಗುರುತಿಸಿದ್ದು ಜಮೀನು, ಅರಣ್ಯ ಪ್ರದೇಶದ ಕೆಲವು ಕಡೆ ಈ ಟ್ರಂಚ್‌ಗಳು ಕಾರ್ಯರೂಪಕ್ಕೆ ಬರಲಿವೆ.

ಓದಿ : ಬಾವಿಗೆ ಹಾರಿ ಬಾಲಕಿ ಆತ್ಮಹತ್ಯೆ : ಕಾರಣ ನಿಗೂಢ

ಟಾಪ್ ನ್ಯೂಸ್

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರMangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Eshwarappa

Shivamogga; ತುರ್ತಾಗಿ ಬಿಜೆಪಿ ಸೇರುವ ಚಿಂತನೆ ಇಲ್ಲ: ಈಶ್ವರಪ್ಪ

1-wddsadas

Shivamogga; ತಳ್ಳುವ ಗಾಡಿಯವನ ಮೇಲೆ ಪೊಲೀಸ್ ಹಲ್ಲೆ ಆರೋಪ: ವರ್ತಕರ ಆಕ್ರೋಶ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

1-BC

Shivamogga:ಅಳಿಯನ ಸಾವಿನ ಕುರಿತು ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್

Shimoga; ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಶಿವಣ್ಣ; ತಲಾ 1 ಲಕ್ಷ ಪರಿಹಾರ ನೀಡಿದ ದಂಪತಿ

Shimoga; ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಶಿವಣ್ಣ; ತಲಾ 1 ಲಕ್ಷ ಪರಿಹಾರ ನೀಡಿದ ದಂಪತಿ

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

police crime

BSP ಅಧ್ಯಕ್ಷ ಹತ್ಯೆ ಬೆನ್ನಲ್ಲೇ ಚೆನ್ನೈ ಪೊಲೀಸ್‌ ಕಮಿಷನರ್‌ ಎತ್ತಂಗಡಿ

1-mm

France ಸಂಸತ್‌ ಅತಂತ್ರ?: ಎಡಪಕ್ಷ ಕೂಟಕ್ಕೆ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.