![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jan 12, 2021, 10:10 AM IST
ಶಿವಮೊಗ್ಗ: ಕಾಳಿಂಗ ಸರ್ಪವನ್ನು ಹಿಡಿಯಲು ಹೋದ ಉರಗ ತಜ್ಞರೊಬ್ಬರು ಸರ್ಪದ ಕಡಿತದಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಜಿಲ್ಲೆಯ ಕೋಡೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಮತ್ತಿಘಟ್ಟದಲ್ಲಿ ನಡೆದಿದೆ.
ಮತ್ತಿಘಟ್ಟದ ಮನೆಯ ಬಳಿ ಬಂದ ಕಾಳಿಂಗ ಸರ್ಪವನ್ನು ರಿಪ್ಪನಪೇಟೆ ಬಳಿಯ ಚಿಕ್ಕಜೇನಿ ಸ್ನೇಕ್ ಪ್ರಭಾಕರ್ ಎಂಬವರು ಹಿಡಿಯಲು ಹೋದಾಗ ಈ ಘಟನೆ ನಡೆದಿದೆ.
ಮನೆಯ ಬಳಿಯ ತೋಟದಲ್ಲಿದ್ದ ಕಾಳಿಂಗಸರ್ಪವನ್ನು ಸ್ನೇಕ್ ಪ್ರಭಾಕರ್ ಹಿಡಿಯಲು ಹೋದಾಗ ಅದು ತೋಟದ ನಡುವೆ ಇದ್ದ ಕೆರೆಗೆ ಹೋಗಿದೆ. ಈ ವೇಳೆ ಕೆರಯಲ್ಲಿದ್ದ ಮರದ ತುಂಡಿನ ಮೇಲೆ ನಿಂತು ಕಾಳಿಂಗ ಸರ್ಪವನ್ನು ನೀರಿನಿಂದ ಮೇಲೆತ್ತಿ ಹಿಡಿಯಲು ಹೋದಾಗ ಅದು ಸ್ನೇಕ್ ಪ್ರಭಾಕರ್ ಮೇಲೆಯೇ ದಾಳಿ ನಡೆಸಲು ಮುಂದಾಯಿತು.
ಕಾಳಿಂಗ ಸರ್ಪ ಪ್ರಭಾಕರ ಕಾಲಿಗೆ ಕಡಿಯಲು ಮುಂದಾಯಿತು. ಕೂಡಲೇ ಅದರಿಂದ ಸ್ನೇಕ್ ಪ್ರಭಾಕರ್ ತಪ್ಪಿಸಿಕೊಂಡಿದ್ದಾರೆ. ಆದರೆ ಈ ವೇಳೆ ಅವರು ಕಾಲು ಜಾರಿ ಬಿದ್ದಿದ್ದಾರೆ. ಆಗ ಮತ್ತೆ ದಾಳಿ ಮಾಡಿದ ಕಾಳಿಂಗ ಸರ್ಪವು ಪ್ರಭಾಕರ್ ಮುಖಕ್ಕೆ ಕಚ್ಚಲು ಮುಂದಾಗಿದೆ.
ಇದನ್ನೂ ಓದಿ:ಮೇಲಾಧಿಕಾರಿಗಳ ಕಾಟದಿಂದ ಬೇಸತ್ತು ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ KSRTC ಬಸ್ ನಿರ್ವಾಹಕ
ಕೂಡಲೇ ಜಾಗೃತರಾದ ಅವರು ಹಾವಿನ ತಲೆಯನ್ನು ಹಿಡಿದುಕೊಂಡಿದ್ದಾರೆ. ಅವರ ಜೊತೆಯಿದ್ದ ಸಹಾಯಕನೂ ಕೂಡಲೇ ಸರ್ಪವನ್ನು ಹಿಡಿದುಕೊಂಡಿದ್ದಾರೆ. ಒಟ್ಟಿನಲ್ಲಿ ಸೂಕ್ತ ಸಮಯ ಪ್ರಜ್ಞೆಯಿಂದ ಸ್ನೇಕ್ ಪ್ರಭಾಕರ್ ಕೂದಲೆಳೆ ಅಂತರದಲ್ಲಿ ಕಾಳಿಂಗಸರ್ಪದ ಕಡಿತದಿಂದ ಪಾರಾಗಿದ್ದಾರೆ.
ನಂತರ ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಹಿಡಿದು ಸಮೀಪದ ಕಾಡಿಗೆ ಬಿಡಲಾಗಿದೆ.
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
You seem to have an Ad Blocker on.
To continue reading, please turn it off or whitelist Udayavani.