![Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ : ಪತ್ರಿಕೆ ವಿತರಕ ಸಾವು](https://www.udayavani.com/wp-content/uploads/2024/07/HEBRi-1-415x256.jpg)
Fruad: ಫೇಸ್ಬುಕ್ ನಲ್ಲಿ ಹುಡುಗಿ ಎಂದು ನಂಬಿಸಿ 7 ಲಕ್ಷ ವಂಚಿಸಿದ ತೀರ್ಥಹಳ್ಳಿಯ ಭೂಪ
Team Udayavani, Dec 15, 2023, 3:51 PM IST
![13-theerthahalli](https://www.udayavani.com/wp-content/uploads/2023/12/13-theerthahalli-620x372.jpg)
ತೀರ್ಥಹಳ್ಳಿ: ಫೇಸ್ಬುಕ್ ನಲ್ಲಿ ತಾನು ಹುಡುಗಿ ಎಂಬಂತೆ ಬಿಂಬಿಸಿಕೊಂಡಿದ್ದ ತೀರ್ಥಹಳ್ಳಿಯ ಯುವಕನೊಬ್ಬ ತುಮಕೂರು ಜಿಲ್ಲೆಯ ಶಿರಾ ಗೇಟ್ನ ಯುವಕನೊಬ್ಬನಿಗೆ 7.25 ಲಕ್ಷ ರೂ ವಂಚಿಸಿದ್ದಾನೆ.
ತೀರ್ಥಹಳ್ಳಿ ಯುವಕನ ವಿರುದ್ಧ ದಾಖಲಾದ ದೂರಿನನ್ವಯ ತುಮಕೂರು ಪೊಲೀಸರು ತೀರ್ಥಹಳ್ಳಿಯಲ್ಲಿದ್ದ ಆರೋಪಿಯನ್ನು ಹುಡುಕಿ ಆತನನ್ನು ಅರೆಸ್ಟ್ ಮಾಡಿದ್ದು, ಸದ್ಯ ಕೋರ್ಟ್ ಮೂಲಕ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತೀರ್ಥಹಳ್ಳಿಯ 21 ವರ್ಷದ ಯುವಕ ಆರೋಪಿಯಾಗಿದ್ದು, ಸದ್ಯ ಪೊಲೀಸರು ಈ ಜಾಲದಲ್ಲಿ ಇನ್ಯಾರಾರು ಇದ್ದಾರೆ ಎಂಬ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಹುಡುಗಿ ಹೆಸರಲ್ಲಿ ಪ್ರೊಫೈಲ್ ಕ್ರಿಯೆಟ್ ಮಾಡಿ, ಸಂತ್ರಸ್ತರನ್ನು ಪರಿಚಯ ಮಾಡಿಕೊಳ್ಳುತ್ತಾರೆ. ಆನಂತರ ಅವರೊಂದಿಗೆ ವಾಟ್ಸ್ಯಾಪ್ ಸಂಪರ್ಕದ ಮೂಲಕ ಇಲ್ಲದ ಸಲಿಗೆಯ ಮಾತನಾಡುತ್ತಾರೆ. ಬಳಿಕ ಕಥೆ ಕಟ್ಟಿ ಗೂಗಲ್ ಪೇ, ಪೋನ್ ಪೇ ಮೂಲಕ ಹಣ ಹಾಕಿಸಿಕೊಂಡು ವಂಚಿಸುತ್ತಾರೆ ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಇದೆ ವಿಚಾರದಲ್ಲಿ ಸದ್ಯ ತುಮಕೂರು ಪೊಲೀಸರು ಇನ್ನಷ್ಟು ಆರೋಪಿಗಳ ಪತ್ತೆಯಲ್ಲಿ ತೊಡಗಿದ್ದಾರೆ.
ಈ ಆರೋಪಿಯು ಶರ್ಮಿಳಾ ಮತ್ತು ದಿವ್ಯಾ ಎಂಬ ಹೆಸರಿನಲ್ಲಿ ಫೇಸ್ಬುಕ್ ಮೆಸೆಂಜರ್ ಹಾಗೂ ವಾಟ್ಸ್ಯಾಪ್ನಲ್ಲಿ ಸಂತ್ರಸ್ತ ಯುವಕನ್ನು ಪರಿಚಯ ಮಾಡುತ್ತಿದ್ದರಂತೆ. ಈತನ ಜೊತೆಗೆ ಇನ್ನೊಂದಿಷ್ಟು ಆರೋಪಿಗಳು ಇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಗನು ಈ ರೀತಿಯಲ್ಲಿ ಹಣ ಕಳೆದುಕೊಂಡು ಖಿನ್ನತೆಗೆ ಒಳಗಾಗಿರುವುದನ್ನು ಗಮನಿಸಿದ ತಂದೆ ಈ ಕುರಿತು ಕಳೆದ ಆಗಸ್ಟ್ 15 ರಂದು ಸಿಇಎನ್ ಪೊಲೀಸ್ ಸ್ಟೇಷನ್ಗೆ ತುಮಕೂರಿನಲ್ಲಿ ದೂರು ನೀಡಿದ್ದರು. ಅದರ ಅನ್ವಯ ಪೊಲೀಸರು ಇದೀಗ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
![Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ : ಪತ್ರಿಕೆ ವಿತರಕ ಸಾವು](https://www.udayavani.com/wp-content/uploads/2024/07/HEBRi-1-415x256.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Shimoga; ಬಂದ್ ಆಗದ ತಳಭಾಗದ ಗೇಟ್: ವ್ಯರ್ಥವಾಗುತ್ತಿದೆ ಭದ್ರಾ ಜಲಾಶಯದ ನೀರು](https://www.udayavani.com/wp-content/uploads/2024/07/bhadra-150x83.jpg)
Shimoga; ಬಂದ್ ಆಗದ ತಳಭಾಗದ ಗೇಟ್: ವ್ಯರ್ಥವಾಗುತ್ತಿದೆ ಭದ್ರಾ ಜಲಾಶಯದ ನೀರು
![Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು](https://www.udayavani.com/wp-content/uploads/2024/07/bison-150x98.jpg)
Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು
![Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು](https://www.udayavani.com/wp-content/uploads/2024/07/bidanur-150x85.jpg)
Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು
![Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ](https://www.udayavani.com/wp-content/uploads/2024/07/sagara-1-150x85.jpg)
Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ
![Hosanagar; ವಿಪರೀತ ಮಳೆ: ಸಂಕ ದಾಟುವ ವೇಳೆ ಕೊಚ್ಚಿ ಹೋದ ಮಹಿಳೆ ಸಾವು](https://www.udayavani.com/wp-content/uploads/2024/07/WOMEn-150x87.jpg)
Hosanagar; ವಿಪರೀತ ಮಳೆ: ಕಾಲುಸಂಕ ದಾಟುವಾಗ ನೀರಲ್ಲಿ ಕೊಚ್ಚಿ ಹೋಗಿ ಮಹಿಳೆ ಸಾವು
MUST WATCH
ಹೊಸ ಸೇರ್ಪಡೆ
![1-qewewq](https://www.udayavani.com/wp-content/uploads/2024/07/1-qewewq-150x90.jpg)
Yakshagana ರಂಗದಿಂದ ಮರೆಯಾದ ಮೃದು ಮಧುರ ಮಾತುಗಳ ಕುಂಬಳೆ ಶ್ರೀಧರ್ ರಾವ್
![Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ : ಪತ್ರಿಕೆ ವಿತರಕ ಸಾವು](https://www.udayavani.com/wp-content/uploads/2024/07/HEBRi-1-150x93.jpg)
Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ: ಪತ್ರಿಕೆ ವಿತರಕ ಸಾವು
![RadhaMohan-das](https://www.udayavani.com/wp-content/uploads/2024/07/RadhaMohan-das-150x90.jpg)
BJP Incharge: ರಾಜ್ಯ ಬಿಜೆಪಿಗೆ ಉಸ್ತುವಾರಿ, ಸಹ ಉಸ್ತುವಾರಿ ನೇಮಕ
![ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್](https://www.udayavani.com/wp-content/uploads/2024/07/lalu-150x83.jpg)
RJD: ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್
![ಕರ್ಮಫಲ ಶಿಕಣದಿಂದ ಆತ್ಮೋನ್ನತಿ; ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ಕರುಣ](https://www.udayavani.com/wp-content/uploads/2024/07/BK-Karuna-150x92.jpg)
ಕರ್ಮಫಲ ಶಿಕಣದಿಂದ ಆತ್ಮೋನ್ನತಿ; ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ಕರುಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.