Thirthahalli; ಭಾರೀ ಮಳೆ; ಕೆಲವೆಡೆ ಭೂ ಕುಸಿತ
Team Udayavani, Aug 3, 2024, 8:47 AM IST
ತೀರ್ಥಹಳ್ಳಿ: ಭಾರೀ ಮಳೆಯಿಂಧಾಗಿ ತಾಲೂಕಿನ ಕೆಲವು ಕಡೆ ಭೂ ಕುಸಿತ ಉಂಟಾದ ಘಟನೆಗಳು ಆ.3ರ ಶನಿವಾರ ವರದಿಯಾಗಿವೆ.
ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಕೂಡಿಗೆಯ ಬೆಕ್ಕನೂರು ಗ್ರಾಮದ ಮಂಜುನಾಥ್ ಎಂಬವರ ಮನೆ ಪಕ್ಕದಲ್ಲಿಯೇ ಗುಡ್ಡವೊಂದು ಕುಸಿದಿದೆ. ಗುಡ್ಡದ ಮಣ್ಣು ಮನೆಯ ಕೊಟ್ಟಿಗೆ ಸೇರಿದಂತೆ ಸುತ್ತಮುತ್ತ ಆವರಿಸಿದೆ.
ಮತ್ತೊಂದೆಡೆ, ಮೇಗರವಳ್ಳಿ ಸಮೀಪ ಉಡುಪಿ – ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ಧಾರಿ ಬದಿ ಭೂ ಕುಸಿತವಾಗಿದೆ. ಭಾರೀ ಪ್ರಮಾಣದ ಮಣ್ಣು ಕುಸಿದಿದ್ದು, ಸಂಬಂಧಿಸಿದ ಇಲಾಖೆಯವರು ಕುಸಿತವಾದ ಸ್ಥಳದಲ್ಲಿ ಕುಸಿತ ತಡೆ ನಿಟ್ಟಿನಲ್ಲಿ ತಾತ್ಕಾಲಿಕ ಪರಿಹಾರ ಕ್ರಮಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ತಾಲೂಕಿನ ಸಾಲೂರು ಗ್ರಾ.ಪಂ. ವ್ಯಾಪ್ತಿಯ ಕುನ್ನಿಕೇವಿ ಸೇತುವೆಯು ಮಳೆಯಿಂದ ಅಪಾಯಕಾರಿ ಸ್ಥಿತಿಗೆ ತಲುಪಿದ್ದು, ಕುಸಿದು ಬೀಳುವ ಸಾಧ್ಯತೆಯಿದೆ.
ಬೆಜ್ವವಳ್ಳಿ ಸಮೀಪ ದಾನಸಲೆ ಗ್ರಾ.ಪಂ. ವ್ಯಾಪ್ತಿಯ ಬಸಾಪುರ ನಾಗೇಶ್ ಎಂಬವರ ತೋಟದ ಧರೆ ಕುಸಿದಿದ್ದು, ತೋಟದಲ್ಲಿ ಅಪಾರ ಪ್ರಮಾಣದ ಅಡಿಕೆ ಮರಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.