ವಾರದ ಅಂತರದಲ್ಲಿ ಅವಳಿ ಜವಳಿ ಕರು ಹಾಕಿದ ಎಮ್ಮೆ!


Team Udayavani, Sep 19, 2022, 7:15 PM IST

tdy-20

ಸಾಗರ: ತಾಲೂಕಿನ ನಾಡಕಲಸಿ ಗ್ರಾಮದಲ್ಲಿ ಎಮ್ಮೆಯೊಂದು ಆರು ದಿನಗಳ ಅಂತರದಲ್ಲಿ ಅವಳಿ ಜವಳಿ ಕರು ಹಾಕಿದ ವಿಸ್ಮಯಕಾರಿ ಘಟನೆ ಸೋಮವಾರ ನಡೆದಿದೆ.

ಇಲ್ಲಿನ ದುರ್ಗಪ್ಪ ಎಂಬುವವರು ಸಾಕಿದ ಎಮ್ಮೆ ಒಂದು ಗಂಡು ಹಾಗು ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಸೆ. 13ರ ಮಂಗಳವಾರ ಈ ಎಮ್ಮೆ ಮೊದಲ ಬಾರಿಗೆ ಗಂಡು ಕರುವನ್ನು ಸಹಜವಾಗಿ ಹಾಕಿತ್ತು. ಆರೋಗ್ಯವಾಗಿಯೇ ಇದ್ದ ಎಮ್ಮೆ ಹುಲ್ಲು ಮೇಯಲು ಗುಡ್ಡಕ್ಕೆ ಹೋಗಿದ್ದ ಸಂದರ್ಭದಲ್ಲಿ ತನ್ನ ಎರಡನೇ ಕರುವನ್ನು ಸೋಮವಾರ ಹಾಕಿದೆ. ಇದನ್ನು ಗಮನಿಸಿದ ಪಶುಪಾಲಕ ದುರ್ಗಪ್ಪ ಪಶುಪಾಲನಾ ಇಲಾಖೆ ಪಶು ಪರೀಕ್ಷಕಿ ಡಾ. ಲಕ್ಷ್ಮೀ ಭಾಗವತ್ ಅವರನ್ನು ಕರೆಸಿದ್ದಾರೆ.

ಈ ಕುರಿತು ವಿವರಿಸುವ ಡಾ. ಲಕ್ಷ್ಮೀ ಭಾಗವತ್, ಅವಳಿ ಜವಳಿ ಕರು ಹಾಕುವ ಪ್ರಕ್ರಿಯೆ ಎಮ್ಮೆಗಳಲ್ಲಿ ಅತ್ಯಂತ ಅಪರೂಪ. ಅದರಲ್ಲೂ ವಾರದ ನಂತರ ಮತ್ತೊಂದು ಕರು ಹಾಕುವುದಂತೂ ಲಕ್ಷಗಳಲ್ಲಿ ಒಂದಾಗುವಂತದು. ಈ ಎಮ್ಮೆಯನ್ನು ಸಹಜವಾಗಿ ಮೇಯಲು ಬಿಟ್ಟಾಗ ಬೆದೆಗೆ ಬಂದು ಕೋಣದ ಸಂಪರ್ಕವಾಗಿ ಗಬ್ಬ ಕಟ್ಟಿದೆ. ಮೊದಲು ಬೆದೆಯ ನಂತರವೂ ಇನ್ನೊಮ್ಮೆ ಕೋಣದ ಸಂಪರ್ಕದಿಂದ ಪ್ರತ್ಯೇಕವಾದ ಇನ್ನೊಂದು ಗರ್ಭ ಕಟ್ಟಿದೆ. ಬೇರೆ ಬೇರೆ ಸಮಯದ ಗರ್ಭಧಾರಣೆ ಆದುದರಿಂದ ಪ್ರತ್ಯೇಕವಾಗಿಯೇ ಕರು ಹಾಕಿದೆ ಎಂದು ವಿಶ್ಲೇಷಿಸಿದರು.

ಪತ್ರಿಕೆಯೊಂದಿಗೆ ಮಾತನಾಡಿದ ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಎನ್.ಎಚ್.ಶ್ರೀಪಾದರಾವ್, ಈ ಬಗ್ಗೆ ಪಶು ವೈದ್ಯ ವಿಜ್ಞಾನದಲ್ಲಿ ಹೆಚ್ಚು ಪ್ರಕರಣಗಳು ಸಿಗುವುದಿಲ್ಲ. ನೈಸರ್ಗಿಕ ಗರ್ಭಧಾರಣೆಯ ಸಂದರ್ಭದಲ್ಲಿ ಮಾತ್ರ ಹೀಗಾಗುತ್ತದೆ ಎಂದು ಹೇಳಬಹುದು. ಐಡೆಂಟಿಕಲ್, ನಾನ್ ಐಡೆಂಟಿಕಲ್ ಅವಳಿ ಜವಳಿ ಪ್ರಕರಣಗಳಲ್ಲಿ ಈ ರೀತಿ ಆಗುವುದು ವಿಸ್ಮಯ. ಮನುಷ್ಯರಲ್ಲಿ ಕೆಲವೊಮ್ಮೆ ಎರಡು ಗರ್ಭಕೋಶವಿರುವುದು ಕಂಡುಬಂದಿದೆ. ಆದರೆ ಈ ಪ್ರಕರಣದಲ್ಲಿ ಒಂದೇ ಗರ್ಭಕೋಶದಲ್ಲಿಯೇ ಪ್ರತ್ಯೇಕವಾಗಿ ಎರಡು ವಿಭಿನ್ನ ಸಂದರ್ಭಗಳಲ್ಲಿ ಗರ್ಭಧಾರಣೆ ಆಗಿದೆ ಎಂದರು.

ದುರ್ಗಪ್ಪ ಮಾತನಾಡಿ, ಈ ಹಿಂದೆ ಹೆಣ್ಣು ಕರು ಹಾಕಿದ್ದ ಎಮ್ಮೆ ಈ ಬಾರಿ ಈ ರೀತಿ ವಿಶಿಷ್ಟ ರೀತಿಯಲ್ಲಿ ಅವಳಿ ಜವಳಿ ಕರು ಹಾಕಿರುವುದು ಖುಷಿ ಕೊಟ್ಟಿದೆ. ಎಮ್ಮೆ, ಕರುಗಳು ಆರೋಗ್ಯವಾಗಿವೆ. ಸುತ್ತಮುತ್ತಲಿನ ಜನ ಈ ವಿಸ್ಮಯವನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

19-thirthahalli

Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು

1-edd

Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.