ಸೋರುತಿಹುದು ಗ್ರಾಮೀಣಾಭಿವೃದ್ಧಿ ಕಟ್ಟಡ; ಕಟ್ಟಿ 4 ತಿಂಗಳೊಳಗೆ ಇದೆಂತಾ ಪರಿಸ್ಥಿತಿ!


Team Udayavani, Jul 18, 2024, 12:16 PM IST

12-thirthahalli

ತೀರ್ಥಹಳ್ಳಿ: ಮಾರ್ಚ್ ಮೊದಲ ವಾರ ತೀರ್ಥಹಳ್ಳಿಯಲ್ಲಿ ಉದ್ಘಾಟನೆಗೊಂಡಿದ್ದ 5 ಅಂತಸ್ತಿನ ಗ್ರಾಮೀಣಾಭಿವೃದ್ಧಿ ಭವನ ಈ ಬಾರಿಯ ಮೊದಲ ಮಳೆಗೇ ಸೋರುತ್ತಿದ್ದು, 13.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಕಟ್ಟಡ ಹೀಗೆ ಆಗುತ್ತಿರುವುದಕ್ಕೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಟ್ಟಡದ ಬಲ ಭಾಗದ ಪೂರ್ಣ ಗೋಡೆಯಲ್ಲಿ ನೀರಿನ ಪಸೆ ಒಸರುತ್ತಿದೆ. ಮೇಲ್ಬಾಗದಲ್ಲಿ ಮಳೆ ನೀರು ಸೋರದಂತೆ ಕಬ್ಬಿಣದ ಶೀಟ್ ಹೊದಿಸಲಾಗಿದೆ. ಆದರೆ ಅಲ್ಲೂ ಕೂಡ ಚಾವಣಿಯಿಂದ ನೀರು ಜಿನುಗುತ್ತಿದೆ.

ತಳ ಮಹಡಿಯಲ್ಲೂ ನೀರು ಶೇಖರಣೆಯಾಗುತ್ತಿದೆ. ಹೀಗಾಗಿ ಅಧಿಕಾರಿಗಳಿಗೆ ಭವನ ನಿರ್ವಹಣೆಯ ಸವಾಲು ಎದುರಾಗಿದೆ.

2023ರ ವಿಧಾನಸಭಾ ಚುನಾವಣೆ ಪೂರ್ವದಲ್ಲೇ ಗ್ರಾಮೀಣಾಭಿವೃದ್ಧಿ ಭವನ ಉದ್ಘಾಟಿಸುವ ಸಂಬಂಧ ಕಾಮಗಾರಿಗೆ ಅತ್ಯಂತ ವೇಗ ನೀಡಲಾಗಿತ್ತು. ತುರ್ತಾಗಿ ಉದ್ಘಾಟಿಸುವ ಧಾವಂತದಲ್ಲಿದ್ದ ಇವರು ಸಿಮೆಂಟ್‌ ಗೋಡೆಗಳಿಗೆ ನೀರು ಕೂಡ ಸಿಂಪಡಣೆ (ಕ್ಯೂರಿಂಗ್) ಮಾಡಿಲ್ಲ. ಈ ಎಲ್ಲಾ ಕಾರಣಕ್ಕೆ ಕಟ್ಟಡದ ಗುಣಮಟ್ಟ ಹಾಳಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅದೇ ಸಂದರ್ಭದಲ್ಲಿ  ನೀತಿ ಸಂಹಿತೆ ಜಾರಿಯಿಂದ ಕಟ್ಟಡ ಉದ್ಘಾಟನೆ ನಡೆದಿರಲಿಲ್ಲ.

ನಾಗರಿಕರ ಸೇವೆಗೆ ಎಂದು ಕಟ್ಟಿದ 5 ಅಂತಸ್ತಿನ ಕಟ್ಟಡದಲ್ಲಿ ಸಮಾಜ ಕಲ್ಯಾಣ, ತಾಲೂಕು ವೈದ್ಯಾಧಿಕಾರಿ, ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆ, ಅಕ್ಷರ ದಾಸೋಹ, ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಕಚೇರಿ, ಶಾಸಕರ ಕಾರ್ಯಾಲಯ, ಸಭಾಂಗಣ, ವಿಡಿಯೊ ಕಾನ್ಸರೆನ್ಸ್ ಹಾಲ್ ನಿರ್ಮಿಸಲಾಗಿದೆ.

ಈ ಕಟ್ಟಡದಲ್ಲಿ ಮಳೆ ಸೋರುವಿಕೆ ಒಂದೆಡೆಯಾದರೆ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಟ್ಟಡದಲ್ಲಿ ಮಹಡಿ ಏರಲು ಅಳವಡಿಸಿದ್ದ ಲಿಫ್ಟ್ ಉದ್ಘಾಟನೆಗೊಂಡ 2 ತಿಂಗಳಲ್ಲೇ ಕೆಟ್ಟು ನಿಂತಿದೆ. ಗ್ರಾಮೀಣ ಭವನಕ್ಕೆ ಸೌಲಭ್ಯ ಅರಸಿ ಬರುವ ಅಂಗವಿಕಲರು, ಗರ್ಭಿಣಿಯರು, ಮಹಿಳೆಯರು, ಹಿರಿಯ ನಾಗರಿಕರು ಮೆಟ್ಟಿಲು ಏರಲು ಪ್ರತಿನಿತ್ಯ ಪರದಾಡುತ್ತಿದ್ದಾರೆ.

ಸಾರ್ವಜನಿಕರ ತೆರಿಗೆ ಹಣದಲ್ಲಿ ಜನರ ಅನುಕೂಲಕ್ಕೆ ಎಂದು ಕಟ್ಟಿದ ಕಟ್ಟಡದಲ್ಲಿ ಈಗ ಅಧಿಕಾರಿಗಳು ಪರದಾಟ ನಡೆಸುವಂತಾಗಿದೆ. ಅಧಿಕಾರಿಗಳು ಛತ್ರಿ ಹಿಡಿದು ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಬರಿ ಟೀಕೆ ಟಿಪ್ಪಣಿಯಲ್ಲೇ ಈ ಸಮಸ್ಯೆ ಮುಗಿಯುತ್ತದೆಯೋ ಅಥವಾ ತನಿಖೆ ನಡೆಸುವಂತೆ ಪಟ್ಟು ಹಿಡಿಯುತ್ತಾರೋ ಕಾದು ನೋಡಬೇಕಿದೆ.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivamogga:7 ಶಂಕಿತ ಬಾಂಗ್ಲಾದೇಶಿಯರ ವಶ

Shivamogga:7 ಶಂಕಿತ ಬಾಂಗ್ಲಾದೇಶಿಯರ ವಶ

Congress Govt.,: ವಾಲ್ಮೀಕಿ ಸಮಾಜದ ಕ್ಷಮೆ ಕೇಳಲಿ: ಆರಗ ಜ್ಞಾನೇಂದ್ರ

Congress Govt.,: ವಾಲ್ಮೀಕಿ ಸಮಾಜದ ಕ್ಷಮೆ ಕೇಳಲಿ: ಆರಗ ಜ್ಞಾನೇಂದ್ರ

8-holehonnur

Holehonnur: ಹೊಸಕೊಪ್ಪ ಗ್ರಾಮದಲ್ಲಿ ಬಲಿಗಾಗಿ ಕಾದಿರುವ ಗುಂಡಿ

Dinesh-gundurao

Vaccine: ಇನ್ನೆರಡು ವರ್ಷದೊಳಗೆ ಕೆಎಫ್‌ಡಿ ಲಸಿಕೆ ಬಳಕೆಗೆ ಲಭ್ಯ: ಆರೋಗ್ಯ ಸಚಿವ ದಿನೇಶ್‌

Theerathalli

Shivamogga: ತೀರ್ಥಹಳ್ಳಿ ತಹಶೀಲ್ದಾರ್‌ ಜಕ್ಕಣ್ಣ ಗೌಡರ್ ಹೃದಯಘಾತದಿಂದ ನಿಧನ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.