ಹಾಳಾದ ಪಾದಚಾರಿ ಮಾರ್ಗ: ನಾಗರಿಕರಿಗೆ ಸಂಕಷ್ಟ

ಅನಾಹುತಕ್ಕೆ ಆಹ್ವಾನ ನೀಡುವ ಜಖಂಗೊಂಡ ಫುಟ್ಪಾತ್‌ ಕಾಂಕ್ರೀಟ್ ಸ್ಲ್ಯಾಬ್‌

Team Udayavani, Aug 2, 2019, 1:02 PM IST

2-Agust-24

ಶೃಂಗೇರಿ: ಪಟ್ಟಣದ ಮುಖ್ಯ ರಸ್ತೆಯ ಪಾದಚಾರಿ ಮಾರ್ಗ ಹಾಳಾಗಿರುವುದು.

ಶೃಂಗೇರಿ: ಪಟ್ಟಣದ ಮುಖ್ಯ ರಸ್ತೆ ಭಾರತೀ ಬೀದಿಯ ಪಾದಚಾರಿ ಮಾರ್ಗ ಸಂಪೂರ್ಣ ಹಾಳಾಗಿರುವುದರಿಂದ ನಾಗರಿಕರು ಓಡಾಡುವುದೇ ಕಷ್ಟವಾಗಿದೆ.

ರಸ್ತೆ ಇಕ್ಕೆಲಗಳಲ್ಲಿ ನಿರ್ಮಿಸಿರುವ ಫುಟ್ಪಾತ್‌ಗೆ ಹೊಂದಿಸಿರುವ ಕಾಂಕ್ರೀಟ್ ಸ್ಲ್ಯಾಬ್‌ಗಳು ಜಖಂಗೊಂಡಿವೆ. ಒಂದೆಡೆ ಈ ಫುಟ್ಪಾತ್‌ ಅತ್ಯಂತ ಕಿರಿದಾಗಿದ್ದು, ಜೊತೆಗೆ ಹೊಂಡಗಳಿಂದ ತುಂಬಿ ಹೋಗಿ ಪಾದಚಾರಿಗಳ ಓಡಾಟ ದುಸ್ತರವಾಗಿದೆ.

ಪಟ್ಟಣದ ಪ್ರವೇಶ ದ್ವಾರದಿಂದ ಹಿಡಿದು ಶ್ರೀ ಮಠದ ರಾಜಗೋಪುರದ ವರೆಗೆ ಹಾಕಲಾಗಿದ್ದ ಪಾದಚಾರಿ ರಸ್ತೆಯ ಕಾಂಕ್ರೀಟ್ ಸ್ಲ್ಯಾಬ್‌ ಹತ್ತಾರು ಕಡೆ ಜಖಂಗೊಂಡಿದೆ. ಈ ಸ್ಲ್ಯಾಬ್‌ಗಳನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ನೋಡಿದರೂ ಕ್ರಮ ಕೈಗೊಂಡಿಲ್ಲ. ಕಾಂಕ್ರೀಟ್ ಸ್ಲ್ಯಾಬ್‌ಗಳ ಮೇಲೆ ಕೆಲವರು ದೊಡ್ಡ ವಾಹನಗಳನ್ನು ಓಡಿಸುವುದರ ಫಲವೇ ಜಖಂಗೊಳ್ಳಲು ಕಾರಣವಾಗಿದೆ. ಅಲ್ಲದೇ, ವಾಹನಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳಿಗೆ ಸಂಚರಿಸುವುದು ಕಷ್ಟಕರವಾಗಿದೆ.

ಪಟ್ಟಣದ ಚಪ್ಪರದ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪದ ಪಾದಚಾರಿ ರಸ್ತೆ ಮೂಲಕ ತಾಲೂಕು ಕಚೇರಿಗೆ ಇದೇ ಬೈಪಾಸ್‌ ರಸ್ತೆ ಮೂಲಕ ಹೋಗಬೇಕಾಗಿದೆ. ಆದರೆ ಪಾದಚಾರಿ ರಸ್ತೆಯಿಂದ ಬೈಪಾಸ್‌ ರಸ್ತೆಗೆ ಹೋಗುವ ಸಂಪರ್ಕ ಕಾಂಕ್ರೀಟ್ ಸ್ಲ್ಯಾಬ್‌ ಜಖಂಗೊಂಡು ಅದಕ್ಕೆ ಅಳವಡಿಸಿದ ಕಬ್ಬಿಣದ ರಾಡುಗಳು ಹೊರಬಂದಿವೆ. ಮುಳ್ಳಿನ ಹಾರೆಯಂತಾಗಿದೆ. ಎಲ್ಲಿಯಾದರೂ ಆಪ್ಪಿ ತಪ್ಪಿ ನೋಡದೇ ಆ ಸ್ಲ್ಯಾಬ್‌ ಮೇಲೆ ನಡೆದಾಡಿದರೆ ಚರಂಡಿಯೊಳಗೆ ಬಿದ್ದು ಕೈ-ಕಾಲು ಮುರಿದುಕೊಳ್ಳುವುದು ನಿಶ್ಚಿತವಾಗಿದೆ.

ರಸ್ತೆಯಿಂದ ಅರ್ಧ ಅಡಿ ಮೆಲ್ಭಾಗ ಎರಡೂ ಕಡೆಗಳಲ್ಲಿ ಚರಂಡಿ ಮೇಲ್ಭಾಗ ಕಾಂಕ್ರೀಟ್ ಸ್ಲ್ಯಾಬ್‌ ಹಾಕಿ ಪಾದಚಾರಿ ಮಾರ್ಗ ನಿರ್ಮಿಸಲಾಗಿತ್ತು. ಇದರಿಂದ ರಸ್ತೆ ಮತ್ತಷ್ಟು ಕಿರಿದಾಗಿದ್ದರೂ ಇಲ್ಲಿ ಓಡಾಡುವ ಪಾದಚಾರಿಗಳಿಗೆ ಅನುಕೂಲಕರವಾಗಿತ್ತು. ಆದರೆ, ಈಗ ಪಾದಚಾರಿಗಳ ಆತಂಕ ಹೆಚ್ಚಿಸಿದೆ. ಪಟ್ಟಣದ ಭಾರತೀ ಚೌಕದ ಬಳಿ, ಪಶು ವೈದ್ಯ ಆಸ್ಪತ್ರೆ ಬಳಿ ಸೇರಿದಂತೆ ಅನೇಕ ಕಡೆ ಪಾದಚಾರಿ ರಸ್ತೆ ಜಖಂಗೊಂಡಿದೆ.

ಭಾರತೀ ಬೀದಿಯ ಕೆಲವು ವ್ಯಾಪಾರಿಗಳಂತು ಫುಟ್ಪಾತ್‌ನಲ್ಲೇ ಅಂಗಡಿ ಸಾಮಾನುಗಳನ್ನಿಟ್ಟು ವ್ಯಾಪಾರ ನಡೆಸುವುದು ಮಾಮೂಲಿಯಾಗಿದೆ. ಸೋಮವಾರ ಸಂತೆ ದಿನವಂತೂ ಹಣ್ಣಿನ ಅಂಗಡಿಗಳ ವ್ಯಾಪಾರವನ್ನು ಫುಟ್ಪಾತ್‌ನಲ್ಲೇ ನಡೆಸಲಾಗುತ್ತದೆ. ಕೆಲವು ಅಂಗಡಿ-ಮಳಿಗೆಯವರು ಫುಟ್ಪಾತ್‌ ಸ್ಲ್ಯಾಬ್‌ ಮೇಲೆ ಜೆಸಿಬಿ ಹತ್ತಿಸಿ ಫುಟ್ಪಾತ್‌ ಸ್ಲ್ಯಾಬ್‌ಗಳನ್ನು ಒಡೆದು ಹಾಕಿರುವುದನ್ನು ಕಾಣಬಹುದು.

ಪಾದಾಚಾರಿಗಳಿಗೆ ಅತ್ತ ಪಾದಚಾರಿ ಮಾರ್ಗ ಕೂಡ ಸುಗಮ ಸಂಚಾರಕ್ಕೆ ಯೋಗ್ಯವಾಗಿಲ್ಲ. ಇತ್ತ ರಸ್ತೆಗಿಳಿಯಲು ಅವಕಾಶವಿಲ್ಲದೇ ಕಿರಿಕಿರಿ ಅನುಭವಿಸುವಂತಾಗಿದೆ. ನಿತ್ಯ ಶ್ರೀ ಶಾರದಾಂಬೆ ದರ್ಶನಕ್ಕೆ ತೆರಳುವ ಹಿರಿಯರು ಹಾಗೂ ಭಕ್ತರು, ಶಾಲಾ ಮಕ್ಕಳ ಪಾಡಂತೂ ಹೇಳತೀರದಾಗಿದೆ.

ಪಟ್ಟಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದೂ ಸೇರಿದಂತೆ ಫುಟ್ಪಾತ್‌ಗೆ ಹಾಕಲಾಗಿರುವ ಕಾಂಕ್ರೀಟ್ ಸ್ಲಾ ್ಯಬ್‌ ಮೇಲೆ ಓಡಾಡುವಾಗ ಸಾರ್ವಜನಿಕರು ಜಾಗರೂಕರಾಗಿರಬೇಕು. ಸಾರ್ವಜನಿಕರು ಸಹಕರಿಸದಿದ್ದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಏನು ಮಾಡಲು ಸಾಧ್ಯ?
ಬಿ.ಎನ್‌.ಕೃಷ್ಣ,
ಪಪಂ ಮಾಜಿ ಸದಸ್ಯ
ರಸ್ತೆ ಅಗಲೀಕರಣ ಮಾತಿರಲಿ ಇರುವ ಪಾದಚಾರಿ ರಸ್ತೆಯಲ್ಲೂ ಈ ರೀತಿ ಹೊಂಡಗಳಾದರೆ ಓಡಾಡುವುದು ಹೇಗೆ? ಮಕ್ಕಳು, ವೃದ್ಧರ ಕಥೆ ದೇವರಿಗೇ ಪ್ರೀತಿ. ಪಪಂ ಅಧಿಕಾರಿಗಳು ಇತ್ತ ಗಮನ ಹರಿಸಿ ಪಾದಚಾರಿ ರಸ್ತೆಗೆ ಹಾಕಲಾಗಿರುವ ಕಾಂಕ್ರೀಟ್ ಸ್ಲಾ ್ಯಬ್‌ ಬದಲಿಸಬೇಕು.
ಕೆ.ಎಂ.ರಾಮಣ್ಣ,
 ದಸ್ತಾವೇಜು ಬರಹಗಾರ, ಶೃಂಗೇರಿ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.