7 Years ಹಿಂದೆ ಕಾಣೆಯಾಗಿದ್ದ ಕುಣಿಗಲ್ ನ ವ್ಯಕ್ತಿ ತೆಲಂಗಾಣದಲ್ಲಿ ಪತ್ತೆ
ಕುಟುಂಬಸ್ಥರಿಗೆ ಒಪ್ಪಿಸಿದ ಕುಣಿಗಲ್ ಪೊಲೀಸರು
Team Udayavani, Nov 6, 2023, 7:30 PM IST
ಕುಣಿಗಲ್: ಅಂದ್ರ ಪ್ರದೇಶದ ತಿರುಪತಿಗೆ ಕೆಲಸಕ್ಕೆ ಹೋಗಿ ಬರುವುದ್ದಾಗಿ ಹೇಳಿ ಕಳೆದ ಏಳು ವರ್ಷದ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯನ್ನು ಕುಣಿಗಲ್ ಪೊಲೀಸರು ಹುಡುಕಿ ಕುಟುಂಬಸ್ಥರಿಗೆ ಒಪ್ಪಿಸಿದ ಅಪರೂಪದ ಘಟನೆ ನಡೆದಿದೆ.
ಕುಣಿಗಲ್ ತಾಲೂಕು ಕೊತ್ತಗೆರೆ ಹೋಬಳಿ ಸೊಬಗಾನಹಳ್ಳಿ ಗ್ರಾಮದ ಕಾಣೆಯಾಗಿದ್ದ ಬಾಲಕೃಷ್ಣ (35) ನನ್ನು ಪೊಲೀಸರು ಪತ್ತೆ ಹಚ್ಚಿ ಕುಟುಬಸ್ಥರಿಗೆ ಒಪ್ಪಿಸಿದ್ದಾರೆ.
ಹತ್ತು ವರ್ಷಗಳ ಹಿಂದೆ ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿಯ ರಾಧ ಎಂಬುವರ ಜೊತೆ ಬಾಲಕೃಷ್ಣ ವಿವಾಹವಾಗಿದ್ದು ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಕಳೆದ ಏಳು ವರ್ಷದ ಹಿಂದೆ ಬಾಲಕೃಷ್ಣ ಟೂರ್ಸ್ ಅಂಡ್ ಟ್ರಾವಲ್ಸ್ ಕಂಪನಿಯಲ್ಲಿ ಕೆಲಸ ಮಾಡುವುದಾಗಿ ಹೇಳಿ ಹೊದವರು ಮತ್ತೆ ಮನೆಗೆ ವಾಪಸಾಗಿರಲಿಲ್ಲ.
ಕುಟುಬಸ್ಥರು ತಿರುಪತಿಯ ಟೂರ್ಸ್ ಅಂಡ್ ಟ್ರಾವಲ್ಸ್ ಕಂಪನಿ ಸೇರಿದಂತೆ ಹಲವೆಡೆ ಹುಡುಕಿದರೂ ಬಾಲಕೃಷ್ಣ ಸಿಗಲಿಲ್ಲ, ಬಾಲಕೃಷ್ಣ ಹಾಗೂ ಅವರ ತಾಯಿ ಮತ್ತು ಹೆಂಡತಿ ಮಕ್ಕಳಿರುವ ಪಡಿತರ ಚೀಟಿಯಲ್ಲಿ ಪಡಿತರ ಸಾಮಗ್ರಿ ಸ್ಥಗಿತಗೊಂಡಿತ್ತು. , ಈ ಸಂಬಂಧ ಬಾಲಕೃಷ್ಣನ ಹೆಂಡತಿ ರಾಧ ಕುಣಿಗಲ್ ಆಹಾರ ಇಲಾಖೆಯಲ್ಲಿ ವಿಚಾರಿಸಿದ್ದು, ಬಾಲಕೃಷ್ಣ ಅವರು ಐಟಿ ಫೈಲ್ ಮಾಡಿದ್ದಾರೆ ಹಾಗಾಗಿ ಪಡಿತರ ಚೀಟಿ ರದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನುಮಾನಗೊಂಡ ಬಾಲಕೃಷ್ಣನ ತಾಯಿ ಭಾಗ್ಯಮ್ಮ ಆ10 ರಂದು ಕುಣಿಗಲ್ ಪೊಲೀಸರಿಗೆ ದೂರು ನೀಡಿದರು, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಡಿವೈಎಸ್ಪಿ ಲಕ್ಷ್ಮಿಕಾಂತ್, ಸಿಪಿಐ ನವೀನ್ಗೌಡ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ಟಿಕ್ನಿಕಲ್ ಸೆಕ್ಷನ್ಸ್ ಸಿಬ್ಬಂದಿಯ ಸಹಾಯದಲ್ಲಿ ಪೊಲೀಸ್ ಸಿಬಂದಿಗಳಾದ ಹೇರೂರು ರವಿ, ಬೇಗೂರು ನಟರಾಜ್ ತೆಲಂಗಾಣ ರಾಜ್ಯದ ಮೆಡ್ಚೆಲ್ ಸಿಟಿಯಲ್ಲಿ ಬಾಲಕೃಷ್ಣನನ್ನು ಪತ್ತೆ ಮಾಡಿ ತಾಯಿ ಭಾಗ್ಯಮ್ಮ ಅವರ ವಶಕ್ಕೆ ನೀಡಿದ್ದಾರೆ.
ಆರ್ಥಿಕ ಸುಳಿಯಿಂದ ಪಾರಾಗಲು ಹೊರ ರಾಜ್ಯಕ್ಕೆ
ಬಾಲಕೃಷ್ಣ ಕಳೆದ ಏಳು ವರ್ಷಗಳ ಹಿಂದೆ ಅರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು, ಅದರಿಂದ ಪಾರಾಗಲು ತೆಲಂಗಾಣ ರಾಜ್ಯದ ಮೆಡ್ಚೆಲ್ ಸಿಟಿಯಲ್ಲಿ ಅಂಗಡಿ ಬಾಡಿಗೆ ಪಡೆದು ಟೂರ್ಸ್ ಅಂಡ್ ಟ್ರಾವಲ್ಸ್ ಅಂಗಡಿಯನ್ನು ಇಟ್ಟುಕೊಂಡು ವವ್ಯಹಾರ ನಡೆಸುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway Development: ರಾಜ್ಯದಲ್ಲಿ ರೈಲ್ವೇ ಕ್ರಾಂತಿಗೆ ಬದ್ಧ: ಕೇಂದ್ರ ಸಚಿವ ಸೋಮಣ್ಣ
Kunigal; ಬೈಕ್ ಗೆ ಕ್ಯಾಂಟರ್ ಡಿಕ್ಕಿ:ಇಬ್ಬರು ಯುವಕರು ಸ್ಥಳದಲ್ಲೇ ಮೃ*ತ್ಯು
Tumkur:ಕೌಟುಂಬಿಕ ಕಲಹಕ್ಕೆ ಬೇಸತ್ತು ಇಬ್ಬರು ಮಕ್ಕಳೊಂದಿಗೆ ತಾಯಿ ಕೆರೆಗೆ ಬಿದ್ದು ಆತ್ಮಹತ್ಯೆ
Koratagere: ನರೇಗಾ ಕಾಮಗಾರಿ ಹಣ ದುರುಪಯೋಗ, ಗ್ರಾ.ಪಂ. ಪಿಡಿಓ ಅಮಾನತು
Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.