ಬಲಿಗಾಗಿ ಕಾದುಕುಳಿತ ಅರಳಿ ಮರ; ಯಾವುದೇ ಅಹಿತಕರ ಘಟನೆಯಾಗುವ ಮುನ್ನ ಅರಳಿ ಮರ ತೆರವುಗೊಳಿಸಿ
Team Udayavani, Sep 15, 2024, 1:13 PM IST
ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಗ್ರಾಮದ ಅಂಚೆ ಕಚೇರಿ ಸಮೀಪವಿರುವ ಅರಳಿಮರ ಬಲಿಗಾಗಿ ಕಾದು ಕುಳಿತಿದ್ದು, ಪ್ರತಿನಿತ್ಯ ಸಾರ್ವಜನಿಕರು ಸಂಚರಿಸುವ ಜಾಗದಲ್ಲಿರುವ ಮರದಿಂದ ಅಪಾಯ ತಂದಿದೆ.
ಹೊಳವನಹಳ್ಳಿ ಗ್ರಾಮದ ಕ್ಯಾಮೇನಹಳ್ಳಿ ರಸ್ತೆಯಲ್ಲಿರುವ ಅಂಚೆ ಕಚೇರಿ, ಕಂದಾಯ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ನಿರ್ಮಾಣ ಮಾಡಿರುವ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ನೀರನ್ನು ಶೇಖರಿಸುವ ಓವರ್ ಟ್ಯಾಂಕ್ ಕೂಡ ಈ ಅರಳಿ ಮರಕ್ಕೆ ಬಲಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಅರಳಿ ಮರ ನೂರಾರು ವರ್ಷಗಳ ಹಳೆಯ ಮರವಾಗಿದ್ದು, ಸುಮಾರು 3 ಅಡಿ ವಾಲಿದೆ. ಮರದ ಬೇರುಗಳು ತುಂಡಾಗಿ ಭೂಮಿ ಬಾಯಿ ಬಿಟ್ಟಿದೆ ಎನ್ನಲಾಗಿದೆ.
ಪ್ರತಿನಿತ್ಯ ಶುದ್ದ ಕುಡಿಯುವ ನೀರಿನ ಘಟಕಕ್ಕೆ, ಅಂಚೆ ಕಚೇರಿಗೆ ಹಾಗೂ ಕಂದಾಯ ಇಲಾಖೆಗೆ ನೂರಾರು ಸಾರ್ವಜನಿಕರು ಆಗಮಿಸುತ್ತಾರೆ. ಮರವನ್ನು ಬೇಗ ತೆರವುಗೊಳಿಸದಿದ್ದರೆ ಸರ್ಕಾರಿ ಕಟ್ಟಡದ ಜೊತೆಗೆ ಸಾರ್ವಜನಿಕರು ಬಲಿಯಾಗುವ ಸಾಧ್ಯತೆ ಹೆಚ್ಚಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಅರಳಿ ಮರವನ್ನು ತೊರವುಗೊಳಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗ್ರಾ.ಪಂ. ಮಾಜಿ ಸದಸ್ಯೆ ಜಯರಾಮು ಮಾತನಾಡಿ, ಅರಳಿಮರ ಸಾಕಷ್ಟು ಹಳೆಯದಾಗಿದ್ದು, ಬೆಳಿಗ್ಗೆ ಮರದ ಸಮೀಪ ನೋಡಿದಾಗ ಬೇರುಗಳು ತುಂಡಾಗಿ ಭೂಮಿ ಬಾಯಿ ಬಿಟ್ಟಿದೆ. ತಕ್ಷಣ ಗ್ರಾ.ಪಂ. ಪಿಡಿಒ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಗೆ ಮಾಹಿತಿ ಮಾಡಿದ್ದಾರೆ. ಈ ಮರದ ಕೆಳಗೆ ನೂರಾರು ಜನರು ಓಡಾಡುತ್ತಾರೆ. ಮುಂದೆ ಯಾವುದೇ ಅಹಿತಕರ ಘಟನೆ ಸಂಭವಿಸುವ ಮುನ್ನ ಅರಳಿ ಮರವನ್ನು ತೆರವುಗೊಳಿಸಿ ಎಂದರು.
ಸ್ಥಳೀಯರಾದ ಶ್ರೀನಿವಾಸ್ ಮಾತನಾಡಿ, ನಾವು ದಿನ ಅರಳಿ ಮರದ ಕೆಳಗಿರುವ ಶುದ್ದ ಕುಡಿಯುವ ನೀರಿನ ಘಟಕದಿಂದ ನೀರು ತರತ್ತೇವೆ. ಈಗ ಮರ ವಾಲಿರುವುದರಿಂದ ನೀರು ತರಲು ಭಯವಾಗುತ್ತಿದೆ. ಈಗ ಅಲ್ಲಿಗೆ ನೀರು ತರಲು ಹೋಗುವ ದಾರಿಯನ್ನು ಕೂಡಾ ಮುಚ್ಚಲಾಗಿದೆ. ಅರಳಿ ಮರವನ್ನು ತೆರವುಗೊಳಿಸುವವರೆಗೂ ನಮಗೆ ಶುದ್ದ ಕುಡಿಯುವ ನೀರು ಇಲ್ಲ. ಅದ್ದರಿಂದ ಮರವನ್ನು ಆದಷ್ಟು ಬೇಗ ತೆರವುಗೊಳಿಸಿ ಎಂದು ಮನವಿ ಮಾಡಿದರು.
ಗ್ರಾ.ಪಂ. ಪಿಡಿಒ ವಸಂತ ಕುಮಾರ್ ಮಾತನಾಡಿ, ನನಗೆ ಬೆಳಿಗ್ಗೆ ಸಾರ್ವಜನಿಕರಿಂದ ಮರ ವಾಲಿದೆ ಎಂದು ಕರೆ ಬಂತು. ತಕ್ಷಣ ಸ್ಥಳಕ್ಕೆ ಆಗಮಿಸಿದೆ. ಮರ 2-3 ಅಡಿ ಅಂಚೆ ಕಚೇರಿಯ ಕಡೆ ವಾಲಿದೆ. ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ತುರ್ತಾಗಿ ಅರಳಿ ಮರವನ್ನು ತೆರವುಗೊಳಿಸುವಂತೆ ಪತ್ರದ ಮೂಲಕವೂ ಬರೆದಿದ್ದೇನೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಆ ಮರದ ಕೆಳಗೆ ಹೋಗದಂತೆ ರಸ್ತೆ ಮುಚ್ಚಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಹಾಗೂ ಗ್ರಾ.ಪಂ. ಅಧಿಕಾರಿಗಳು ಅರಳಿ ಮರ ಬೀಳುವಂತ ಪರಿಸ್ಥಿತಿ ಇರುವುದರಿಂದ ಮರವನ್ನು ತೆರವುಗೊಳಿಸುವಂತೆ ದೂರವಾಣಿ ಮೂಲಕ ತಿಳಿಸಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತಂದು ಅದಷ್ಟು ಬೇಗ ಮರವನ್ನು ತೆರವುಗೊಳಿಸಲಾಗುವುದು. ಮರವನ್ನು ತೆರವುಗೊಳಿಸುವವರೆಗೆ ಸಾರ್ವಜನಿಕರು ಮರದ ಕೆಳಗಡೆ ಹೋಗಬಾರದು ಎಂದು ಮನವಿ. -ಸುರೇಶ್, ವಲಯ ಅರಣ್ಯಾಧಿಕಾರಿ, ಕೊರಟಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ಆಂಬ್ಯುಲೆನ್ಸ್ ಸಿಗದೆ ವೃದ್ದ ಮೃತದೇಹವನ್ನು ಬೈಕ್ ನಲ್ಲಿಯೇ ಕೊಂಡೊಯ್ದ ಮಕ್ಕಳು
Minister V. Somanna ಹಾಲಿನ ದರ ಏರಿಕೆ ಗ್ಯಾರಂಟಿಗೆ ಬಳಸಿದ್ರೆ ವಿರೋಧ
Tumkur ಕೊಟ್ಟಿಗೆಗೆ ನುಗ್ಗಿದ 5 ಚಿರತೆಗಳು: 32 ಕುರಿಗಳ ಸಾವು
BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ
Kunigal: ಹಿಂದೂ ಮುಸ್ಲಿಂ ಭಾವೈಕ್ಯತೆ, ಸಂಗಮಕ್ಕೆ ಸಾಕ್ಷಿಯಾದ ಈದ್ ಮಿಲಾದ್ ಮೆರವಣಿಗೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್ ಅಧಿಕಾರಿ: ಪುಷ್ಪಾ ಅಮರನಾಥ್
Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.