![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 8, 2021, 8:33 PM IST
ತುಮಕೂರು: ಕೊರೊನಾ ಸೋಂಕು ಯಾರಲ್ಲಿ ಇದೆ,ಯಾ ರಲ್ಲಿ ಇಲ್ಲ. ಯಾರಿಗೆ ಯಾವಾಗ ಬರುತ್ತದೆಎನ್ನುವ ದುಗುಡ ದುಮ್ಮಾನದ ನಡುವೆ ಸೋಂಕುಕಾಣಿ ಸಿ ಕೊಂಡವರು ಜೀವದ ಆತಂಕದಲ್ಲಿಯೇ ಜಿಲ್ಲಾಸ್ಪತ್ರೆಯ ಮುಂದೆ ವೈದ್ಯರಿಂದ ಕೊರೊನಾ ಸೋಂಕುನಿವಾರಣೆಗೆ ಸಂಬಂಧಿಸಿದ ಮಾತ್ರೆ ಪಡೆಯಲು ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿ ಬಿಟ್ಟಿದೆ.
ಎಲ್ಲೆಲ್ಲೂ ಸೋಂಕಿತರದ್ದೇ ಸಾಲು: ತುಮಕೂರುತಾಲೂಕಿನಲ್ಲಿ ಕೊರೊನಾರ್ಭಟ ತೀವ್ರವಾಗಿರುವಹಿನ್ನೆಲೆ ಎಲ್ಲ ಕಡೆ ಕೊರೊನಾ ಸೋಂಕಿತರದ್ದೇಸಾಲು. ಎಲ್ಲಿ ಸೋಂಕು ಹೆಚ್ಚು ವ್ಯಾಪಿಸುತ್ತೋ ಎನ್ನುವ ದುಗುಡ, ಮನಸ್ಸಿಲ್ಲದ ಮನಸ್ಸಿನಲ್ಲಿ ಜನ, ಜಿಲ್ಲಾಆಸ್ಪತ್ರೆಯ ಬಳಿಯಲ್ಲಿ ಕೋವಿಡ್ ಪರಿಕ್ಷೆಗಾಗಿ ಗಂಟಾನು ಗಟ್ಟಲೆ ಕಾಯುತ್ತಿರುವುದು ಒಂದಡೆಯಾ ದರೆ,ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ವರುಜಿಲ್ಲಾಸ ³ತ್ರೆಯ ಬಳಿಯೂ ಸಾಲು, ಇನ್ನು ಸ್ಕ್ಯಾನಿಂಗ್ಸೆಂಟರ್ ಗಳಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿಕೊಳ Ûಲುಸಾಲು..ಸಾಲು. ಕಂಡು ಬರುತ್ತಿದೆ.
ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದರೂಜನರಲ್ಲಿ ಯಾವುದೇ ಭಯವಿಲ್ಲ. ಕೊರೊನಾಸೋಂಕಿ ತರು ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಸೋಂಕುಇಲ್ಲದವರ ಜೊತೆಯಲ್ಲಿಯೇ ಸಾಮಾಜಿಕ ಅಂತರವಿಲ್ಲದೇ ಜನ ನುಗ್ಗುತ್ತಿರುವುದು ಸಾಮಾನ್ಯ ವಾಗಿದ್ದು,ಸ್ಕ್ಯಾನಿಂಗ್ ಸೆಂಟರ್ಗಳೂ ಕೊರೊನಾ ಹರಡುವಕೇಂದ್ರಗಳಾ ಗುತ್ತಿವೆ ಎನ್ನುವ ಭೀತಿ ಜನರಲ್ಲಿಹೆಚ್ಚುತ್ತಿದೆ. ಶೈಕ Òಣಿಕ ಹಾಗೂ ಧಾರ್ಮಿಕ ನಗರತುಮಕೂರಿನಲ್ಲಿ ನಿರೀಕ್ಷೆಗೂ ಮೀರಿ ಕೊರೊನಾಸೋಂಕಿತರು ದಿನೇ ದಿನೆ ಹೆಚ್ಚಳ ಆಗುತ್ತಲೇ ಇದ್ದಾರೆ.
ಮನೆಯಲ್ಲಿ ಇದ ªವರಿಗೂ ಸೋಂಕು ವ್ಯಾಪಿಸತೊಡಗಿದೆ. ಸೋಂಕು ಯಾವ ರೂಪದಲ್ಲಿ ಬರುತ್ತದೆಎಂದು ಯಾರಿಗೂ ತಿಳಿಯದ ಸ್ಥಿತಿ ಕಂಡು ಬಂದಿದೆ.ತಾಲೂಕಿನಲ್ಲಿಯೇ ಹೆಚ್ಚು ಸೋಂಕಿತರು:ಜಿಲ್ಲೆಯಲ್ಲಿ ನಾಗಾಲೋಟದಲ್ಲಿ ಓಡುತ್ತಿರುವಕೊರೊನಾ ಮಹಾಮಾರಿ ತುಮಕೂರು ತಾಲೂಕಿನಲ್ಲಿಯೇ ಹೆಚ್ಚು ಸೋಂಕಿತರು ಇರುವುದು ಕಂಡುಬಂದಿದೆ.
ಅದರಲ್ಲಿಯೂ ತುಮ ಕೂರು ನಗರದಲ್ಲಿಯೇ ಸೋಂಕಿತರ ಸಂಖ್ಯೆ ಯಲ್ಲಿ ತೀವ್ರ ಹೆಚ cಳಕಂಡು ಬಂದಿದೆ. ನಗರದಲ್ಲಿ ಶುಕ್ರವಾರ ಒಂದೇ ದಿನಜಿಲೆ Éಯಲ್ಲಿ ಕಂಡುಬಂದಿದ್ದ 2,797 ಒಟ್ಟು ಸೋಂಕಿತರಲ್ಲಿ 755 ಸೋಂಕಿತರು ತುಮಕೂರು ತಾಲೂಕಿನಲ್ಲಿ ಕಂಡು ಬಂದಿದ್ದು, ಈವರೆಗೆ ತುಮಕೂರುತಾಲೂಕಿನಲ್ಲಿ 23,092 ಸೋಂಕಿತರು ಇದ್ದಾರೆ.ಜಿಲ್ಲೆಯಲ್ಲಿ ಈವರೆಗೆ 59,041 ಒಟ್ಟು ಸೋಂಕಿತರಲ್ಲಿ ತುಮಕೂರು ತಾಲೂಕಿನಲ್ಲಿ 23,092 ಜನಸೋಂಕಿತರು ಇದ್ದು, ಈವರೆಗೆ ಜಿಲೆ Éಯಲ್ಲಿ 40,258ಜನ ಸೋಂಕಿತರು ಗುಣಮುಖರಾಗಿ ಬಿಡು ಗಡೆಯಾಗಿದ್ದು, ಅದರಲ್ಲಿ ತುಮ ಕೂರು ತಾಲೂಕಿನಲ್ಲಿ14,909 ಜನ ಸೋಂಕಿತರು ಬಿಡುಗಡೆ ಆಗಿದ್ದಾರೆ.ಜಿಲ್ಲೆಯಲ್ಲಿ 18,176 ಒಟ್ಟು ಸಕ್ರಿಯ ಪ್ರಕರಣಗಳಿದ್ದು,ಅದರಲ್ಲಿ ತುಮಕೂರು ತಾಲೂಕಿ ನಲ್ಲಿಯೇ 7,881ಸಕ್ರಿಯ ಪ್ರಕರಣ ಗಳಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು607 ಜನ ಕೊರೊನಾದಿಂದ ಮೃತ ಪಟ್ಟಿದ್ದು, ಅದರಲ್ಲಿ302 ಜನ ತುಮ ಕೂರು ತಾಲೂಕಿನವರು ಮೃತಪಟ್ಟಿದ್ದಾರೆ.
ನಗರದಲ್ಲಿ ಹೆಚ್ಚುತ್ತಿರುವ ಕೊರೊನಾಮಹಾಮಾರಿಯ ವೇಗಕೆ R ನಗರದ ಜನಹೆದರುತ್ತಿದ್ದಾರೆ. ಸೋಂಕಿನ ಲಕ Òಣ ಇರುವವರುಕೋವಿಡ್ ತಪಾಸಣೆ ಮಾಡಿಸಿ ಕೊಳ್ಳಲುಜಿಲ್ಲಾಸ ³ತ್ರೆಯ ಮುಂದೆ ಮುಗಿ ಬೀಳುತ್ತಿದ್ದು, ಹೆಚ್ಚುಜನರಲ್ಲಿ ಜ್ವರ ತಲೆನೋವು, ಗಂಟಲು ನೋವು ಲಕ್ಷಣ ಕಂಡು ಬರುತ್ತಿದೆ. ಇದರಿಂದ ಹೆದರಿದ ಜನಕೊರೊನಾ ಪರೀಕ್ಷೆಗೆ ಮುಂದಾಗಿದ್ದು, ಸೋಂಕುದೃಢಪಡುತ್ತಲೇ ಜಿಲ್ಲಾಸ್ಪತ್ರೆಯ ಮುಂದೆ ತೆರೆದಿರುವ ಕೋವಿಡ್ ಟ್ರಯೇಜ್ ಕ್ಲಿನಿಕ್. ವೈದ್ಯರ ಸಲಹೆಯಮೇರೆಗೆ ಮಾತ್ರೆ ಗಳನ್ನು ಪಡೆಯಲು ಸಾಲುಗಟ್ಟಿನಿಲ್ಲುತ್ತಿದ್ದಾರೆ.
ಕೊರೊನಾ ನಿಯಮ ಇಲ್ಲ: ಜಿಲ್ಲಾಸ್ಪತ್ರೆಯ ಆವರಣಸೇರಿದಂತೆ ನಗರದ ವಿವಿಧ ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲುಕೊರೊನಾ ಸೋಂಕು ಲಕ್ಷಣ ಇರುವವರು ಹಾಗೂಸಾಮಾನ್ಯ ಜನ ಒಂದೇ ಕಡೆ ನಿಲ್ಲಬೇಕು. ಇಲ್ಲಿಇರುವ ಸಿಬ್ಬಂದಿ ಕಡಿಮೆ ಇದ್ದು, ಕೊರೊನಾ ಪರೀಕ್ಷೆಮಾಡಿಸಿಕೊಳ್ಳುವವರು ಹೆಚ್ಚಾಗಿದ್ದಾರೆ. ಇಲ್ಲಿಪರೀಕ್ಷೆಗೆ ಬರುವವರ ಮೂಗು ಮತ್ತು ಗಂಟಲಿನದ್ರವ ಸಂಗ್ರಹಣೆ ಮಾಡುವುದು ತಡವಾಗುತ್ತಿದೆ.ದಿನಕ್ಕೆ ಇಷ್ಟೇ ಮಾಡುವುದು ಎಂದು ಹೇಳಿ ಸಾಲಿನಲ್ಲಿನಿಂತವರನ್ನೂ ವಾಪಸ್ ಮನೆಗೆ ಕಳುಹಿಸುತ್ತಿದ್ದಾರೆ.
ಚಿ.ನಿ.ಪುರುಷೋತ್ತಮ್
Congress: ಹೈಕಮಾಂಡ್ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್.ರಾಜಣ್ಣ
Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ
Tumkur: ಪರಂ, ರಾಜಣ್ಣ ವರ್ಚಸ್ಸು ಕುಂದಿಸಲು ಸುರೇಶ್ಗೌಡ ಟೀಕೆ: ಗೌರಿಶಂಕರ್
Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ
Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್; ಓರ್ವ ಆರೋಪಿ ಬಂಧನ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.